ಕೆರೆ ಅಭಿವೃದ್ಧಿಗೆ ಸಹಾಯ ಹಸ್ತ ಚಾಚಿದ ವೃದ್ಧೆ 


Team Udayavani, Mar 10, 2019, 11:33 AM IST

10-march-18.jpg

ಕುಷ್ಟಗಿ: ವೃದ್ಧೆಯೊಬ್ಬರು ತಮ್ಮ ವೃದ್ಧಾಪ್ಯ ವೇತನ ಹಾಗೂ ತಾವು ಕೂಡಿಟ್ಟ 10 ಸಾವಿರ ರೂ. ಗಳನ್ನು ನಿಡಶೇಸಿ ಕೆರೆ ಅಭಿವೃದ್ಧಿಗೆ ನೀಡಿ, ಇತರರಿಗೆ ಮಾದರಿಯಾಗಿದ್ದಾರೆ.

ಶಿವಮ್ಮ ಸಜ್ಜನ್‌ ಕೆರೆ ಅಭಿವೃದ್ಧಿಗೆ ದೇಣಿಗೆ ನೀಡಿದ ವೃದ್ಧೆ. ಇವರು ತಾಲೂಕಿನ ನಿಡಶೇಸಿ ಗ್ರಾಮದವರು. ಬಾಲ್ಯದಿಂದಲೂ ಅಧ್ಯಾತ್ಮ ಪ್ರಭಾವಕ್ಕೆ ಒಳಗಾಗಿ ದೇವದುರ್ಗ ತಾಲೂಕಿನ ಗೆಜ್ಜಿಬಾವಿ ಪಶ್ಚಕಂಥಿ ಹಿರೇಮಠದಲ್ಲಿ ಸ್ವಾಮೀಜಿ ಸೇವಾ ನಿರತರಾಗಿದ್ದರು. ಗೆಜ್ಜಿಭಾವಿ ಶ್ರೀಗಳು ಲಿಂಗೈಕ್ಯರಾದ ಬಳಿಕ ಅವರು ತಮ್ಮ ನೆಂಟರ್‌ ಮನೆಯಲ್ಲಿ ವಾಸವಾಗಿದ್ದಾರೆ. ಶಿವಮ್ಮ ಸಜ್ಜನ್‌ ಅವರಿಗೆ ಮಕ್ಕಳಿಲ್ಲ, ಸ್ವಂತಕ್ಕೆ ಮನೆ ಇಲ್ಲ. ಇದ್ದ ಜಮೀನು ನಿಡಶೇಸಿ ಕೆರೆಗೆ ಮುಳುಗಡೆಯಾಗಿದ್ದು, ಸರ್ಕಾರ ನೀಡುತ್ತಿರುವ ವೃದ್ಧಾಪ್ಯ ವೇತನ, ಅವರಿರುವ ನೀಡಿದ ಹಣದಲ್ಲಿ ಜೀವನ ಕಳೆಯುತ್ತಿದ್ದಾರೆ.

ಸಾರ್ವಜನಿಕರು, ರೈತರು ತಮ್ಮೂರಿನ ಕೆರೆಯ ಹೂಳೆತ್ತುವ ಕಾರ್ಯ ಕೈಗೊಂಡ ವಿಷಯವನ್ನು ದಿನಪತ್ರಿಕೆಗಳಲ್ಲಿ ಗಮನಿಸಿದ್ದ ಅವರು ತಾವು ಕೂಡಿಟ್ಟ ಹಣ ನೀಡಬೇಕೆನ್ನಿಸಿತು. ಈ ಹಿನ್ನೆಲೆಯಲ್ಲಿ ಎರಡ್ಮೂರು ಸಾರಿ ಭೇಟಿ ನೀಡಿ ಯಾರಿಗೆ ಹಣ ಕೊಡಬೇಕೆಂದು ತಿಳಿಯದೇ ವಾಪಸ್ಸಾಗಿದ್ದಾರೆ. ಕಳೆದ ಶುಕ್ರವಾರ ಖುದ್ದು ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿದ್ದ ಕಲ್ಲೇಶ ತಾಳದ್‌, ತಾಜುದ್ದೀನ್‌ ದಳಪತಿ ಅವರಿಗೆ 10 ಸಾವಿರ ರೂ. ಹಸ್ತಾಂತರಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಅವರು, ಈ ಕೆರೆಗೂ ತಮಗೂ ಅವಿನಾಭಾವ ಸಂಬಂಧವಿದೆ. ಈ ಕೆರೆಗೆ ಮುಳುಗಡೆಯಾಗಿರುವ ಜಮೀನಿನಲ್ಲಿ ಸದಾ ನೀರು ಇರಬೇಕು. ಪ್ರಾಣಿ ಪಕ್ಷಿ, ದನಕರುಗಳಿಗೆ ಆಸರೆಯಾಗಿರಬೇಕೆಂದು ಆಶಯ ವ್ಯಕ್ತಪಡಿಸಿದರು. ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಅವರು, ಶಿವಮ್ಮ ಸಜ್ಜನ್‌ ನಿಸ್ವಾರ್ಥ ಸೇವೆಗೆ ಖುದ್ದಾಗಿ ಅವರ ಮನೆಗೆ ತೆರಳಿ ಸನ್ಮಾನಿಸಿದರು. ಈ ವೇಳೆ ತಾಜುದ್ದೀನ್‌ ದಳಪತಿ, ಅಪ್ಪಣ್ಣ ನವಲೆ ಇತರರಿದ್ದರು.

ದೇಣಿಗೆ: ಕುಷ್ಟಗಿ ತಾಪಂ ಸಿಬ್ಬಂದಿ 2ಲಕ್ಷ ರೂ., ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಅವರು ತಮ್ಮ ಇಲಾಖಾ ಸಿಬ್ಬಂದಿ ಸಂಗ್ರಹಿಸಿದ 1.50 ಲಕ್ಷ ರೂ.ಗಳನ್ನು ಕೆರೆ ಅಭಿವೃದ್ಧಿ ಸಮಿತಿಗೆ ನೀಡಿದರು. ಇದೇ ವೇಳೆ ಸಿಪಿಐ ಸುರೇಶ ತಳವಾರ ಮಿತ್ರರಾದ ಇಲಕಲ್ಲ ರಾಘವೇಂದ್ರ ಎಂಟರ್‌ ಪ್ರೈಸಿಸ್‌, ಸೂರ್ಯ ನಾರಾಯಣ ರಡ್ಡಿ ಅವರು ಕೆರೆ ಅಭಿವೃದ್ಧಿಗೆ 2 ಲಕ್ಷ ರೂ., ಸ್ಥಳೀಯ ವಿಜಯ ವಿಠ್ಠಲ ಮಂದಿರದಿಂದ 25 ಸಾವಿರ ರೂ. ದೇಣಿಗೆ ನೀಡಿದರು. 

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

13(1

Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು

12-

Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು

Shivaraj-Tangadagi

Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್‌ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.