![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 25, 2024, 9:03 PM IST
ಕೊಪ್ಪಳ: ನನ್ನನ್ನು ಮಂತ್ರಿಯಲ್ಲ, ಕಂತ್ರಿ ಎಂದಿರುವ ಶಾಸಕ ಜನಾರ್ದನ ರೆಡ್ಡಿ ಇತಿಹಾಸ ಎಲ್ಲರಿಗೂ ಗೊತ್ತಿದೆ. ನಾನು ಮನಸ್ಸು ಮಾಡಿದರೆ ಒಂದೇ ದಿನದಲ್ಲಿ, ಒಂದೇ ಸಭೆಯಲ್ಲಿ ಅವರ ಇತಿಹಾಸ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಅವರನ್ನು ಏಲ್ಲಿ ಬೇಕಾದರೂ ಬೆತ್ತಲೆ ನಿಲ್ಲಿಸುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ಗುಡುಗಿದರು.
ಕುಕನೂರು ತಾಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ವೇಳೆ ಮಾತನಾಡಿದ ಅವರು, ನಮಗೂ ಗೊತ್ತಿದೆ. ನನ್ನ ವೈಯಕ್ತಿನ ಬದುಕಿನ ವಿಚಾರದ ಬಗ್ಗೆ ಮಾತನಾಡಿದರೆ ನಿಮ್ಮನ್ನು ಏಲ್ಲಿ ಬೇಕಾದರೂ ಬೆತ್ತಲೆ ನಿಲ್ಲಿಸುತ್ತೇನೆ. ಆ ತಾಕತ್ತು ಕಾಂಗ್ರೆಸ್ಗಿದೆ. ನನಗೆ ನನ್ನ ಹಿರಿಯರು ಹೇಳಿಕೊಟ್ಟಿದ್ದಾರೆ. ನಿಮ್ಮಂತೆ ಸುಳ್ಳು ಹೇಳಲು ಬರುವುದಿಲ್ಲ. ನಿಮ್ಮ ಮನೆ ತುಂಬಾ ತೂತು ಇದ್ದರೂ ಮಂದಿ ಬಗ್ಗೆ ನೀವು ಮಾತನಾಡುತ್ತಿದ್ದೀರಿ. ಇದೇ ಕೊನೆ, ಇನ್ನೊಮ್ಮೆ ಈ ತರ ಮಾತನಾಡುವುದು ಸರಿಯಲ್ಲ. ಈ ಚುನಾವಣೆ ಸತ್ಯ-ಸುಳ್ಳಿನ ನಡುವಿನ ನಡೆಯುತ್ತಿದೆ ಎಂದರು.
You seem to have an Ad Blocker on.
To continue reading, please turn it off or whitelist Udayavani.