ರಾಷ್ಟ್ರೀಯ ಪೆಂಕಾಕ್ ಸಿಲತ್ ಚಾಂಪಿಯನಶಿಪ್: ಗಮನ ಸೆಳೆದ ಕರ್ನಾಟಕದ ಸಾಧನೆ
Team Udayavani, Mar 16, 2022, 12:53 PM IST
ಕುಷ್ಟಗಿ: ಪಂಜಾಬಿನ ಲುಧಿಯಾನಾದ ಖಾಲ್ಸಾ ಕಾಲೇಜಿನಲ್ಲಿ ಮಾ. 11 ರಿಂದ 14ರ ವರೆಗೆ ನೆಡೆದ ರಾಷ್ಟ್ರೀಯ ಪೆಂಕಾಕ್ ಸಿಲತ್ ಚಾಂಪಿಯನಶಿಪ್ ನಲ್ಲಿ ಕರ್ನಾಟಕ ರಾಜ್ಯದ ಮಹಿಳಾ ಹಾಗೂ ಪುರುಷ ಕ್ರೀಡಾಪಟುಗಳು 1 ಬಂಗಾರ, 8 ಬೆಳ್ಳಿ ಹಾಗೂ 4 ಕಂಚಿನ ಪದಕ ಪಡೆಯುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮೆರೆದಿದ್ದಾರೆ.
45- 50 ಕೆ.ಜಿ. ಯ ಸಿನೀಯರ್ ಮಹಿಳೆಯರ ಟ್ಯಾಂಡಿಗ್ ವಿಭಾಗದಲ್ಲಿ ಚಿಕ್ಕಮಗಳೂರಿನ ಸಂಪ್ರೀತಾ ಕಂಚಿನ ಪದಕ, 70-75 ಕೆ.ಜಿ ಯ ವಿಭಾದಲ್ಲಿ ಮೈಸೂರಿನ ರಶ್ಮೀ ಕೆ.ಆರ್. ಬೆಳ್ಳಿಯ ಪದಕ. ಕ್ರೀಯೇಟಿವ್ ಸೋಲೋ ವಿಭಾಗದಲ್ಲಿ ಬೆಂಗಳೂರಿನ ದೇಚಮ್ಮಾ ಸುಧ್ಹಯ್ಯಾ ಬೆಳ್ಳಿ ಪದಕ ಪಡೆದರೆ, ಪುರುಷರ ವಿಭಾಗದಲ್ಲಿ 85 -90ಕೆ.ಜಿ. ಯ ಟ್ಯಾಂಡಿಂಗ್ ವಿಭಾಗದಲ್ಲಿ ಚಿಕ್ಕಮಗಳೂರಿನ ಸುಶೀಲ್ ಕಂಚಿನ ಪದಕ, ಟೀಮ್ ಆರ್ಟಿಸ್ಟ್ಸಿಕ್
“ಗಾಂಡಾ” ವಿಭಾಗದಲ್ಲಿ ಬೆಂಗಳೂರಿನ ಹರ್ಷಿತ್ ಹಾಗೂ ಪಂಚೇಂದ್ರ ಬೆಳ್ಳಿಯ ಪದಕ ಮತ್ತು ಟೀಮ್ ಆರ್ಟಿಸ್ಟ್ಸಿಕ್ “ರೆಗು” ವಿಭಾಗದಲ್ಲಿ ಕೊಪ್ಪಳದ ಆಕಾಶ್ ದೊಡ್ಡವಾಡ, ಪ್ರದೀಪ್ ರಾಯಬಾಗಿ, ಮನೋಜ ಕುಮಾರ್ ಎ.ಪಿ. ಬೆಳ್ಳಿ ಪದಕ ಪಡೆದಿದ್ದಾರೆ.
ಮಾಸ್ಟರ್ಸ್ ಪುರುಷರ ಟ್ಯಾಂಡಿಂಗ್ (ಒಪನ್ 85+ಕೆ.ಜಿ) ವಿಭಾಗದಲ್ಲಿ ಮೈಸೂರಿನ ನವೀನ್ ಎಸ್. ಕಂಚಿನ ಪದಕ ಪಡೆದರೆ ಹಾಗೂ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆಯ ಖಜಾಂಚಿಯಾದ ಕೊಪ್ಪಳ ಜಿಲ್ಲೆಯ ಹನಮಸಾಗರದ ಅಬ್ಧುಲ್ ರಜಾಕ್ ಟೇಲರ್ ಮಾಸ್ಟರ್ಸ್ ಟ್ಯಾಂಡಿಂಗ್ ವಿಭಾದಲ್ಲಿ (70 -75ಕೆ.ಜಿ) ವಿಭಾಗದಲ್ಲಿ ಬಂಗಾರದ ಪದಕ ಪಡೆದಿದ್ದು ವಿಶೇಷ.
ಪ್ರಥಮ ಬಾರಿಗೆ ರಾಜ್ಯ ಪೋಲಿಸ್ ತಂಡವು ಕ್ರೀಡಾಕೂಟದಲ್ಲಿ ಪಾಲ್ಗೋಂಡು ಪದಕ ಪಡೆದು ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದೆ. ಚಿಕ್ಕಮಗಳೂರಿನ ಮಹಿಳಾ ಪೋಲಿಸ್ ಠಾಣೆಯ ಹೆಡ್ ಕಾನೆಸ್ಟೆಬಲ್ ಆದ ಟಿ. ಎಸ್. ಗಿರೀಶ್ ಸೀನಿಯರ್ ಟ್ಯಾಂಡಿಂಗ್ (70- 75ಕೆ.ಜಿ) ವಿಭಾಗದಲ್ಲಿ ಕಂಚಿನ ಪದಕ ಹಾಗೂ ಮಾಸ್ಟರ್ಸ್ ವಿಭಾಗದ ಕ್ರೀಯೇಟಿವ್ ಸೋಲೋ ವಿಭಾಗದಲ್ಲಿ ಬೆಳ್ಳಿಪದಕ ಪಡೆದಿದ್ದಾರೆ.
ಇವರ ಕ್ರೀಡಾ ಸಾಧನೆಗೆ ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆಯ ಅಧ್ಯಕ್ಷರು ಜಗನ್ನಾಥ ಆಲಂಪಲ್ಲಿ, ಕಾರ್ಯದರ್ಶಿ ವಿಜಯಕುಮಾರ ಹಂಚಿನಾಳ ಹಾಗೂ ಎಲ್ಲ ಪದಾಧಿಕಾರಿಗಳು, ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ಕಂದಾಯ ಉಪ ವಿಭಾಗ ಗಂಗಾವತಿ ಬದಲಿಗೆ ಕುಷ್ಟಗಿ ಸೂಕ್ತ: ದೊಡ್ಡನಗೌಡ ಪಾಟೀಲ
Tragedy: ಗಣೇಶನ ಮೂರ್ತಿ ವಿಸರ್ಜಿಸಿ ಬರುವಾಗ ರಸ್ತೆ ಅಪಘಾತ… ಯುವಕ ಮೃತ್ಯು
Gangavathi: ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಮಾರಾಮಾರಿ… ಓರ್ವನಿಗೆ ಚಾಕು ಇರಿತ
“ಸ್ಮಾರ್ಟ್’ ಆದ ಲಿಂಗದಹಳ್ಳಿ ಸರ್ಕಾರಿ ಶಾಲೆ”- ವಿದ್ಯಾರ್ಥಿಗಳ ಸಂಖ್ಯೆ 400ಕ್ಕೆ ಏರಿಕೆ
D. K. Shivakumar: ನೀರು ಕಡಿಮೆಯಾದಾಗ ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್ಗೇಟ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.