Koppala; ಅಂದು ನಾನು ಮಗನ ಜತೆಯಲ್ಲೇ ಇದ್ದೆ….: ಪರಶುರಾಮ ತಂದೆ ಅಳಲು

ಹಣ ಎಲ್ಲಿಂದ ತರಲಿ ಎಂದಿದ್ದ…

Team Udayavani, Aug 4, 2024, 1:39 PM IST

ಅಂದು ನಾನು ಮಗನ ಜತೆಯಲ್ಲೇ ಇದ್ದೆ….: ಪರಶುರಾಮ ತಂದೆ ಅಳಲು

ಕೊಪ್ಪಳ: ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು. ಮೃತ ಮಗನ ಕುಟುಂಬಕ್ಕೆ ನ್ಯಾಯ ಸಿಗಲಿ. ನನ್ನ ಮಗನ ಸಾವಿಗೆ ಕಾರಣವಾದ ವ್ಯಕ್ತಿಗಳನ್ನು ಕೂಡಲೇ ಬಂಧಿಸಲಿ. ಆ ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಿ ಎಂದು ಮೃತಪಟ್ಟ ಯಾದಗಿರಿ ಪಿಎಸ್ಐ ಪರಶುರಾಮ ಅವರ ತಂದೆ ಜನಕಮುನಿ ಹೇಳಿದರು.

ಕಾರಟಗಿ ತಾಲೂಕಿನ ಸೋಮನಾಳದಲ್ಲಿ ರವಿವಾರ (ಆ 04) ಮಾತನಾಡಿದ ಅವರು, ನನ್ನ ಮಗ ಪರುಶುರಾಮ ಜೊತೆ ನಾನು ಯಾದಗಿರಿಯಲ್ಲೇ ಇದ್ದೆ. ಆತನು ಸಾವನ್ನಪ್ಪುವ ಮೊದಲು ನನಗೆ ಚಿತ್ರಾನ್ನ ಮಾಡಿಕೊಟ್ಡಿದ್ದ. ಇಬ್ಬರು ಕೂಡಿಯೇ ಊಟ ಮಾಡಿದ್ದೆವು. ಅಂದು ಮನೆಗೆ ಬಂದ ವೇಳೆ ಆತನ ಮುಖದಲ್ಲಿ ಸಪ್ಪಗಿದ್ದ. ನಾನು ಆತನ ಮುಖ ನೋಡಿ ಕೇಳಿದೆ. ಆತನು ನನಗೆ ಏನೂ ಹೇಳಲಿಲ್ಲ. ಎಲ್ಲವೂ ತನ್ನ ತಾಯಿಯ ಮುಂದೆ ಹೇಳಿಕೊಳ್ಳುತ್ತಿದ್ದ ಎಂದರು.

ಊಟ ಮಾಡಿ ಮಲಗುವೆ ಎಂದು ಹೇಳಿ ರೂಮಿನಲ್ಲಿ ಮಲಗಿದ. ನಾನು ಮಗ ಮಲಗಿದ್ದಾನೆ ಎಂದು ಸುಮ್ಮನೆ ಇದ್ದೆ. ತುಂಬ ಗಂಟೆ ಆದರೂ ಆತನು ಏಳಲಿಲ್ಲ. ಮನೆಯಿಂದ ತಾಯಿ ಕರೆ ಮಾಡಿ ಮಗನನ್ನು ಎಬ್ಬಿಸು ಎಂದಳು. ಮಗ ಮಲಗಿದ್ದಾನೆ ಯಾಕೆ ತೊಂದರೆ ಮಾಡಬೇಕು ಎಂದು ನನ್ನ ಪತ್ನಿಗೆ ಹೇಳಿದೆ. ಮಲಗಿ ತುಂಬಾ ಹೊತ್ತಾಯಿತು ಸಾಕು ಎಬ್ಬಿಸು ಎಂದಳು. ಆಗ ನಾನು ರೂಮಿಗೆ ಹೋಗಿ ಮಗನನ್ನ ಎಬ್ಬಿಸಲು ಯತ್ನಿಸಿದೆ. ಮಗ ಮೇಲೆ ಏಳಲೇ ಇಲ್ಲ, ಆತನ ಬಾಯಿಯಿಂದ ನಾಲ್ಕು ಹನಿ ರಕ್ತ ಬಿದ್ದಿತ್ತು. ನನಗೆ ಧೈರ್ಯ ಬರಲಿಲ್ಲ ಕೈ ಕಾಲು ಮುಟ್ಟಿ ನೋಡಿದೆ ಆದರೂ ಹೇಳಲಿಲ್ಲ. ತಕ್ಷಣ ಅಕ್ಕ ಪಕ್ಕದ ರೂಮಿನವರಿಗೆ ನನ್ನ ಮಗ ಮೇಲೇಳುತ್ತಿಲ್ಲ ಎಂದು ಹೇಳಿದೆ. ಅವರೂ ಸಹ ನನ್ನ ಮಗನ ಎಬ್ಬಿಸಲು ಪ್ರಯತ್ನ ಮಾಡಿದರು. ತಕ್ಷಣ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳಿದೆವು. ಆಗ ಆತನು ಮೃತಪಟ್ಟಿದ್ದಾನೆ ಎಂದು ಹೇಳಿದರು ಎಂದು ಅಳಲು ತೋಡಿಕೊಂಡರು.

ನನಗೆ ವರ್ಗಾವಣೆ ವಿಚಾರ ಏನೂ ಹೇಳಿರಲಿಲ್ಲ. ಹಣದ ವಿಚಾರವನ್ನೂ ನನಗೆ ಏನೂ ಹೇಳಿಲ್ಲ. ಎಲ್ಲವನ್ನು ತನ್ನ ತಾಯಿಯ ಜೊತೆಗೆ ಮಾತನಾಡುತ್ತಿದ್ದ. ನನ್ನ ಮಗ ಕೂಲಿ ಕೆಲಸ ಮಾಡಿ ಕಷ್ಟಪಟ್ಟು ಸರ್ಕಾರಿ ನೌಕರಿ ಸೇರಿದ್ದ. ಮಗನನ್ನು ಕಳೆದುಕೊಂಡ ನಮಗೆ ದಿಕ್ಕು ತೋಚದಂತೆ ಆಗಿದೆ. ಮಗನ ಸಾವು ನಮ್ಮ ಕುಟುಂಬಕ್ಕೆ ಸಹಿಸಲು ಆಗುತ್ತಿಲ್ಲ ಎಂದು ಕಣ್ಣೀರಿಟ್ಟರು.

ಹಣ ಎಲ್ಲಿಂದ ತರಲಿ ಎಂದಿದ್ದ…

ನನ್ನ ಮಗ ಸಾಯುವ ಎರಡು ದಿನ ಮೊದಲು ನಾನು ಜೊತೆಯಲ್ಲೇ ಇದ್ದೆ. ನನ್ನ ಮಗ ತುಂಬ ಕಷ್ಟಪಟ್ಟು ನೌಕರಿ ಸೇರಿದ್ದ. ನಾನು ನಮ್ಮೂರಿಗೆ ಹೋಗುವೆ ಎಂದಿದ್ದೆ. ಆಗ ಆತನು ನನ್ನ ವರ್ಗಾವಣೆ ಆಗುತ್ತಿದೆ ಎಂದು ಹೇಳಿದ್ದ. ನನ್ನ ಮಗ ವರ್ಗಾವಣೆಗೆ ಹಣ ವಿಚಾರ ಮಾತಾಡಿದ್ದ.ಅಷ್ಟೊಂದು ಹಣ ನಾನು ಏಲ್ಲಿಂದ‌ ತರಲಿ ಎಂದಿದ್ದ. ನಿಮ್ಮ ಅಣ್ಣಂದಿರನ್ನು ಕೇಳಪ್ಪಾ ಎಂದು ಮಗನಿಗೆ ಹೇಳಿದ್ದೆ ಪರಶುರಾಮ ತಾಯಿ ಹಿರೇಗಂಗಮ್ಮ ಹೇಳಿದರು.

ಟಾಪ್ ನ್ಯೂಸ್

ಪ್ರತೀ ಪೇಜರ್‌ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್‌ನ ಮೊಸಾದ್‌?

ಪ್ರತೀ ಪೇಜರ್‌ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್‌ನ ಮೊಸಾದ್‌?

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

TTD: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು: ನಾಯ್ಡು ಆರೋಪಕ್ಕೆ YSR ಕಾಂಗ್ರೆಸ್ ತಿರುಗೇಟು

Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

3-rabakavi

Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppal; ಪ್ರಚೋದನಕಾರಿ ಹೇಳಿಕೆ ಕೊಟ್ಟರೆ ಸಹಿಸಲ್ಲ: ಸಚಿವ ಶಿವರಾಜ ತಂಗಡಗಿ

Koppal; ಪ್ರಚೋದನಕಾರಿ ಹೇಳಿಕೆ ಕೊಟ್ಟರೆ ಸಹಿಸಲ್ಲ: ಸಚಿವ ಶಿವರಾಜ ತಂಗಡಗಿ

ಕೊಪ್ಪಳ: ಅದಾಲತ್‌ನಲ್ಲಿ ಒಂದಾದ 14 ಜೋಡಿ ಇತ್ಯರ್ಥವಾದ 35,721 ಪ್ರಕರಣಗಳು

ಕೊಪ್ಪಳ: ಅದಾಲತ್‌ನಲ್ಲಿ ಒಂದಾದ 14 ಜೋಡಿ ಇತ್ಯರ್ಥವಾದ 35,721 ಪ್ರಕರಣಗಳು

Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ

Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ

ಗಂಗಾವತಿ: ಮೀಸಲು ಅರಣ್ಯದಲ್ಲಿ ಅವ್ಯಾಹತ ಮರಳು ದಂಧೆ – ಹದಗೆಟ್ಟ ರಸ್ತೆ

Darshan, ಸುದೀಪ್‌ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು

Darshan, ಸುದೀಪ್‌ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಪ್ರತೀ ಪೇಜರ್‌ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್‌ನ ಮೊಸಾದ್‌?

ಪ್ರತೀ ಪೇಜರ್‌ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್‌ನ ಮೊಸಾದ್‌?

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

TTD: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು: ನಾಯ್ಡು ಆರೋಪಕ್ಕೆ YSR ಕಾಂಗ್ರೆಸ್ ತಿರುಗೇಟು

Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.