ಅಪ್ಪಟ ಅಭಿಮಾನಿ: ಪತ್ನಿ, ಐವರು ಮಕ್ಕಳೊಂದಿಗೆ ಅಪ್ಪು ಸ್ಮಾರಕಕ್ಕೆ ಪಾದಯಾತ್ರೆ ಹೊರಟ ವಕೀಲ


Team Udayavani, Mar 2, 2022, 2:58 PM IST

ಅಪ್ಪಟ ಅಭಿಮಾನಿ: ಪತ್ನಿ, ಐವರು ಮಕ್ಕಳೊಂದಿಗೆ ಅಪ್ಪು ಸ್ಮಾರಕಕ್ಕೆ ಪಾದಯಾತ್ರೆ ಹೊರಟ ವಕೀಲ

ಕುಷ್ಟಗಿ: ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ  ವಿಜಯಪುರದ ವಕೀಲರೊಬ್ಬರು ಪತ್ನಿ ಸೇರಿದಂತೆ ಐವರು ಮಕ್ಕಳೊಂದಿಗೆ ವಿಜಯಪುರದಿಂದ ಬೆಂಗಳೂರು ಅಪ್ಪು ಸ್ಮಾರಕಕ್ಕೆ ಪಾದಯಾತ್ರೆ ಕೈಗೊಂಡಿರುವುದು ಗಮನಾರ್ಹ ಎನಿಸಿದೆ.

ವಕೀಲ‌ ವೃತ್ತಿಯಲ್ಲಿರುವ‌ ಧರೆಯಪ್ಪ ಅರ್ದಾವೂರ ತಮ್ಮ‌ ಸಂಸಾರ ಸಮೇತ ಕಳೆದ ಫೆ.25ರಿಂದ ವಿಜಯಪುರದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ಈಗಾಗಲೇ ಐದು ದಿನ ಕ್ರಮಿಸಿದ್ದು, ಬೇಸಿಗೆ ಬಿಸಿಲ ತಾಪಮಾನದ ಹಿನ್ನೆಲೆಯಲ್ಲಿ ಆದಷ್ಟು ಬೆಳಗ್ಗೆ,  ಸಂಜೆ ಪಾದಯಾತ್ರೆ ನಡೆಯುತ್ತಿದ್ದಾರೆ ಪ್ರತಿ ದಿನ 25ಕಿ.ಮೀ ದಿಂದ 30 ಕಿ.ಮೀ. ನಿಗದಿಗೊಳಿಸಿದ್ದಾರೆ. ಬುಧವಾರ ಬೆಳಗ್ಗೆ ಕುಷ್ಟಗಿಯ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹೋಗುವಾಗ ಅಪ್ಪು ಅಭಿಮಾನಿಗಳು ಪಾದಯಾತ್ರಿಗಳನ್ನು ಸನ್ಮಾನಿಸಿ, ಹಣ್ಣು, ಎಳೆನೀರು ನೀಡಿ ಸತ್ಕರಿಸಿದರು. ನಂತರ ಅವರೊಂದಿಗೆ ಸಂಗೊಳ್ಳಿ ರಾಯಣ್ಣ ಯುವ ಸೇನೆಯ ಮಂಜು ನಾಲಗಾರ, ದೊಡ್ಮನೆ ಅಭಿಮಾನಿ ಬಳಗದ ಅಧ್ಯಕ್ಷ ಮುತ್ತಣ್ಣ ಬಾಚಲಾಪೂರ, ಅಪ್ಪು ಅಭಿಮಾನಿ ಸಂಘದ ಶಂಕರ್ ಮಿಸ್ಕೀನ್, ಪ್ರಮೋದ್ ಬಡಿಗೇರ, ಅಮರೇಶ ತಳವಗೇರಾ ಮೊದಲಾದವರು ಹೆಜ್ಜೆ ಹಾಕಿ‌ ಪ್ರೋತ್ಸಾಹಿಸಿದರು.

ಇದೇ ವೇಳೆ ಮಾತನಾಡಿದ ಪಾದಯಾತ್ರಿ ಧರಿಯಪ್ಪ ಅರ್ದಾವೂರ ನಮ್ಮ‌ ನೆಚ್ಚಿನ ಕಣ್ಮಣಿ ಪುನೀತ್ ರಾಜಕುಮಾರ್ ಅವರು  46ನೇ ವರ್ಷದಲ್ಲಿ ಇಹಲೋಕ ತ್ಯಜಿಸಿರುವುದು ನಮಗೆ ನೋವುಂಟು ಮಾಡಿದೆ. ಅಪ್ಪು ಅವರು ಮಾಡಿರುವ ಸಮಾಜಮುಖಿ‌ ಸೇವೆಯನ್ನು ಸ್ಮರಿಸಿದ ಅವರು  ಸರ್ಕಾರಿ ಶಾಲೆಗಳ‌ ಸಬಲೀಕರಣ, ನೇತ್ರದಾನ, ಮೃತ ನಂತರ ಅಂಗಾಂಗ ದಾನದ ಮಹತ್ವ ಹಾಗೂ ಮಾರ್ಚ 17 ರಂದು ಬಿಡುಗಡೆಯಾಗುವ ಜೇಮ್ಸ್ ಚಲನ ಚಿತ್ರ ಶುಭ ಹಾರೈಸಿ ಈ ಪಾದಯಾತ್ರೆ ಕೈಗೊಂಡಿದ್ದು ಸಾಧ್ಯವಾದಷ್ಟು ಮಾ.17 ಕ್ಕೆ ಬೆಂಗಳೂರು ತಲುಪುವ ಉದ್ದೇಶವಿದೆ. ನನ್ನೊಂದಿಗೆ ಪತ್ನಿ ವಿದ್ಯಾರಾಣಿ ಮಕ್ಕಳಾದ ಲಕ್ಷ್ಮೀಕಾಂತ, ಸಮರ್ಥ, ಸೌಜನ್ಯ, ಸೋನಾಲಿ, ಶ್ರಾವಣಿ ಹೆಜ್ಜೆ ಹಾಕಿದ್ದು, ಗೆಳೆಯ ಸಾಬಣ್ಣ ಜೊತೆಗೆ ಇದ್ದಾರೆ.

ಅಪ್ಪು ಕೊಟ್ಟ ಆ… 11 ಸಾವಿರ:

ಕಳೆದ ನವೆಂಬರ್ 11, 2011ಕ್ಕೆ ಧರೆಯಪ್ಪ ಅರ್ದಾವೂರ  ಹಾಗೂ ವಿದ್ಯಾರಾಣಿ ಮದುವೆಯಾಗಿ ಬೆಂಗಳೂರಿನ ಅಪ್ಪು ನಿವಾಸಕ್ಕೆ ಹೋಗಿದ್ದರು. ಆಗ ಅಪ್ಪು ಆತ್ಮೀಯವಾಗಿ ಮಾತನಾಡಿ ಕಾಣಿಕೆಯ ಪ್ಯಾಕ್ ನೀಡಿ ಅದನ್ನು ಇಲ್ಲಿ ತೆರೆಯಬೇಡಿ ನಿಮ್ಮ ಊರಲ್ಲಿ ತೆರೆಯಿರಿ‌ ಎಂದು ಹೇಳಿದ್ದರು. ಆಗ ಅಪ್ಪು ಹೇಳಿದಂತೆ ಮಾಡಿದ್ದ ಧರೆಯಪ್ಪ ದಂಪತಿ ಕಾಣಿಕೆ ಪ್ಯಾಕ್ ಬಿಚ್ಚಿದಾಗ ಅಪ್ಪು ಅವರ ಭಾವಚಿತ್ರ ಹಾಗೂ  11 ಸಾವಿರ ರೂ.ಗಳಿದ್ದವು. ಆಗ ನಮ್ಮಿಬ್ಬರ ಕಣ್ಣಾಲೆಗಳು‌ ನೀರಾಗಿದ್ದವು.

ಇಂತಹ ಮಾನವೀಯ ಮೌಲ್ಯವುಳ್ಳ ನಟ ನಮ್ಮಿಂದ ಅಗಲಿರುವುದು ನಮ್ಮ ಮನೆಯ ಸದಸ್ಯರನ್ನು ಕಳೆದುಕೊಂಡಷ್ಟು ದುಃಖವಾಗಿದೆ ಧರಿಯಪ್ಪ ಅರ್ದಾವೂರ ಹೇಳಿದರು.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

13(1

Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು

12-

Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು

Shivaraj-Tangadagi

Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್‌ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.