Gangavathi ವಿದ್ಯುತ್ ಕಂಬಕ್ಕೆ ಧಾರ್ಮಿಕ ಗುರುತು: ಬಿಜೆಪಿ – ಎಸ್ಡಿಪಿಐ ತಿಕ್ಕಾಟ
ದೂರು ದಾಖಲಿಸುವಂತೆ ನೋಟಿಸ್ ನೀಡಿ ವಾಪಸ್ ಪಡೆದ ಗಂಗಾವತಿ ತಹಶೀಲ್ದಾರ್
Team Udayavani, Aug 29, 2024, 11:35 PM IST
ಗಂಗಾವತಿ: ನಗರದ ರಾಣಾ ಪ್ರತಾಪಸಿಂಗ್ ವೃತ್ತದಿಂದ ನೀಲಕಂಠೇಶ್ವರ ವೃತ್ತದ ವರೆಗಿನ ರಸ್ತೆ ಮಧ್ಯೆ ವಿದ್ಯುತ್ ಕಂಬಗಳಿಗೆ ತಿರುಪತಿ ತಿಮ್ಮಪ್ಪನ ಮೂರು ನಾಮ, ಗದೆ ಹಾಗೂ ಬಾಣದ ಗುರುತು ಹಾಕಿದ ಪ್ರಕರಣ ರಾಜಕೀಯ ಮತ್ತು ಧಾರ್ಮಿಕ ಬಣ್ಣ ಪಡೆದುಕೊಂಡಿದೆ.
ಧಾರ್ಮಿಕ ಚಿಹ್ನೆಗಳ ತೆರವಿಗೆ ಎಸ್ಡಿಪಿಐ ಆಗ್ರಹಿಸಿದರೆ ಬಿಜೆಪಿ, ಸಂಘ ಪರಿವಾರ, ಕನ್ನಡಪರ ಸಂಘಟನೆಗಳು ವಿದ್ಯುತ್ ಕಂಬಗಳಿಗೆ ಸಾಂಸ್ಕೃತಿಕ ಚಿಹ್ನೆಗಳಿರಲಿ ಎಂದು ಮನವಿ ಮಾಡಿವೆ. ಇದರಿಂದ ತಾಲೂಕು ಆಡಳಿತಕ್ಕೆ ತಲೆಬಿಸಿಯಾಗಿದ್ದು ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಶಾಸಕ ಜನಾರ್ದನ ರೆಡ್ಡಿ ಆಸಕ್ತಿ ಮೇರೆಗೆ ಕಿಷ್ಕಿಂಧ ಅಂಜನಾದ್ರಿಗೆ ಹೋಗುವ ರಸ್ತೆ ವಿಸ್ತರಣೆ ಮಾಡಿತ್ತು. ಸದ್ಯ ರಾಣಾ ಪ್ರತಾಪಸಿಂಗ್ ವೃತ್ತದಿಂದ ಜುಲೈನಗರದ ಇಂದಿರಾ ಗಾಂಧಿ ವೃತ್ತದವರೆಗೆ ರಸ್ತೆ ವಿಸ್ತರಣೆ ಮಾಡಿ ವಿದ್ಯುತ್ ಕಂಬ ಹಾಕಲಾಗಿದೆ. ಈ ಮಧ್ಯೆ ಎಸ್ಡಿಪಿಐ ಸಂಘಟನೆ ಸರಕಾರಿ ಅನುದಾನದಲ್ಲಿ ಹಿಂದೂ ಧರ್ಮ ಬಿಂಬಿಸುವ ಚಿಹ್ನೆಗಳಿರುವ ವಿದ್ಯುತ್ ಕಂಬ ತೆರವು ಮಾಡುವಂತೆ ಪೌರಾಯುಕ್ತರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿತ್ತು.
ಕಂಬಗಳನ್ನು ತೆರವು ಮಾಡದಂತೆ ಬಿಜೆಪಿ, ಸಂಘ ಪರಿವಾರ ಮತ್ತು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮನವಿ ಸಲ್ಲಿಸಿದ್ದರು. ಜಿಲ್ಲಾ ಧಿಕಾರಿ ಮೌಖೀಕ ಆದೇಶದ ಮೇರೆಗೆ ಗಂಗಾವತಿ ತಹಶೀಲ್ದಾರ್ ವಿದ್ಯುತ್ ಕಂಬ ತೆರವು ಮಾಡಿ ಪ್ರಕರಣ ದಾಖಲಿಸುವಂತೆ ನಗರ ಠಾಣೆ ಇನ್ಸ್ಪೆಕ್ಟರ್ಗೆ ಸೂಚಿಸಿದ್ದರು. ನೋಟಿಸ್ ನೀಡಿದ ಒಂದೇ ದಿನದಲ್ಲಿ ವಾಪಸ್ ಪಡೆದಿದ್ದು ವಿವಾದಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರ್ನಾಟಕಕ್ಕೆ ಬೇಕಿದೆ ಕೇರಳ ಮಾದರಿ ಶಿಕ್ಷಣ: ಶಾಸಕ ಹಿಟ್ನಾಳ
ಗಂಗಾವತಿ: ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿಯಮಮೀರಿ ಮಹಿಳಾ ಸದಸ್ಯರ ಪತಿರಾಯರು,ಸಂಬಂಧಿಗಳು ಭಾಗಿ
Koppal; ಪ್ರಚೋದನಕಾರಿ ಹೇಳಿಕೆ ಕೊಟ್ಟರೆ ಸಹಿಸಲ್ಲ: ಸಚಿವ ಶಿವರಾಜ ತಂಗಡಗಿ
ಕೊಪ್ಪಳ: ಅದಾಲತ್ನಲ್ಲಿ ಒಂದಾದ 14 ಜೋಡಿ ಇತ್ಯರ್ಥವಾದ 35,721 ಪ್ರಕರಣಗಳು
Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.