![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 9, 2019, 12:51 PM IST
ಕುಷ್ಟಗಿ: ಸ್ಥಳೀಯ ಠಾಣೆಯಲ್ಲಿ ಮಕ್ಕಳೊಂದಿಗೆ ಸಿಪಿಐ ಜಿ. ಚಂದ್ರಶೇಖರ ಸಂವಾದ ನಡೆಸಿದರು.
ಕುಷ್ಟಗಿ: ಸ್ಥಳೀಯ ವಿದ್ಯಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಗಳು, ಸ್ಥಳೀಯ ಪೊಲೀಸ್ ಠಾಣೆ ಸಿಪಿಐ ಜಿ. ಚಂದ್ರಶೇಖರ ಹಾಗೂ ಪೊಲೀಸರನ್ನು ವಿವಿಧ ಪ್ರಶ್ನೆಗಳನ್ನು ಕೇಳಿ ಪೊಲೀಸ್ ಇಲಾಖೆ ಕುರಿತು ಮಾಹಿತಿ ಪಡೆದರು. ಪೊಲೀಸ್ ಇಲಾಖೆಯ ಸೇವೆಗಳು, ಪೊಲೀಸರು ನಿರ್ವಹಿಸುವ ಕರ್ತವ್ಯಗಳು, ದೂರು ದಾಖಲಾಗುವುದು, ಅಪರಾಧಿ ಗಳಿಗೆ ಶಿಕ್ಷೆ ಕುರಿತಾಗಿ ಮಾಹಿತಿಯನ್ನು ಪೇದೆ ಶರಣಪ್ಪ ಗುರಿಕಾರ ಅವರಿಂದ ಪಡೆದರು. ಈ ವೇಳೆ ಸಿಪಿಐ ಜಿ. ಚಂದ್ರಶೇಖರ ಮಾತನಾಡಿ, ಸಮಾಜದಲ್ಲಿ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ, ವರದಕ್ಷಿಣೆ, ದೌರ್ಜನ್ಯಗಳ ಬಗ್ಗೆ ಜಾಗೃತರಾದರೆ ಸಮಾಜ ಸುಧಾರಿಸಲು ಸಾಧ್ಯವಿದೆ. ಪೊಲೀಸರು ಎಂದರೆ ಸಾಮಾನ್ಯವಾಗಿ ಭಯ ಪಡುವುದು ಸಹಜ. ಆ ಭಯ ನಿವಾರಿಸುವ ನಿಟ್ಟಿನಲ್ಲಿ ಮಕ್ಕಳು ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಮತ್ತು ರಕ್ಷಣೆ ಅವಶ್ಯವೆನಿಸಿದಾಗ ಪೊಲೀಸರ ಸಹಾಯ ಪಡೆಯಲು, ಮಕ್ಕಳ ಸ್ನೇಹಿ ವಾತಾವರಣ ಸೃಷ್ಟಿಸಲು ಈ ತೆರೆದ ಮನೆ ಪೂರಕ ಎಂದರು. ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಇದ್ದರು.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
You seem to have an Ad Blocker on.
To continue reading, please turn it off or whitelist Udayavani.