ಸಿಂಗಟಾಲೂರು ಯೋಜನೆಗೆ ತಾಂತ್ರಿಕ ತೊಡಕು?

ಛೇಂಬರ್‌ ಮಾದರಿ ಮಾಡುವುದಾಗಿ ಹೇಳಿದ್ದ ಸರ್ಕಾರ; ­ ಮುಂಡರಗಿ, ಕೊಪ್ಪಳ ಭಾಗದಲ್ಲಿ ತಜ್ಞರಿಂದ ಪರಿಶೀಲನೆ

Team Udayavani, Oct 14, 2022, 3:36 PM IST

18

ಸಾಂದರ್ಭಿಕ ಚಿತ್ರ

ಕೊಪ್ಪಳ: ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಕೊಪ್ಪಳ ಭಾಗದ ಜಮೀನಿಗೆ ಮಧ್ಯಪ್ರದೇಶದ ಛೇಂಬರ್‌ ಮಾದರಿ ನೀರಾವರಿ ಕಲ್ಪಿಸುವ ಕುರಿತು ರಾಜ್ಯ ಸರ್ಕಾರವೇ ಘೋಷಣೆ ಮಾಡಿತ್ತು. ಆದರೆ ತಜ್ಞರ ಸಮಿತಿ ಮುಂಡರಗಿ, ಕೊಪ್ಪಳ ಭಾಗದಲ್ಲಿ ಈಚೆಗೆ ಪರಿಶೀಲನೆ ನಡೆಸಿದ್ದು, ಸಾಧ್ಯ ಸಾಧ್ಯತೆ ಬಗ್ಗೆ ಸ್ಪಷ್ಟವಾದ ನಿರ್ಧಾರ ವ್ಯಕ್ತಪಡಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಿಂಗಟಾಲೂರು ಏತ ನೀರಾವರಿ ಯೋಜನೆ ಜಿಲ್ಲೆಯ ಬಹು ವರ್ಷಗಳ ಬೇಡಿಕೆಯಾಗಿದೆ. ಈ ಮೊದಲು ಕಾಲುವೆ ನೀರಾವರಿ ಇದ್ದ ಯೋಜನೆಯನ್ನು ಸರ್ಕಾರ ಮಾರ್ಪಾಡು ಮಾಡಿದೆ. ಹೆಚ್ಚಿನ ರೈತರ ಜಮೀನಿಗೆ ನೀರು ಕೊಡುವ ಚಿಂತನೆ ಮಾಡಿ, ಕಾಲುವೆ ನೀರಾವರಿ ಇದ್ದದ್ದನ್ನು ಹನಿ ನೀರಾವರಿ ಮಾಡಿ ಹೆಚ್ಚು ಪ್ರದೇಶವನ್ನು ಈ ಯೋಜನೆಗೆ ಸೇರ್ಪಡೆ ಮಾಡಿದೆ. ಹನಿ ನೀರಾವರಿಯಡಿ ಡ್ರಿಪ್‌ ಪೈಪ್‌ಗಳು ರೈತರ ಜಮೀನಿನಲ್ಲಿ ಉಳಿಯಲ್ಲ ಎನ್ನುವ ಆಪಾದನೆಗಳೂ ಕೇಳಿ ಬಂದವು.

ಈಚೆಗಷ್ಟೇ ಸರ್ಕಾರ ಹನಿ ನೀರಾವರಿ ಬದಲಿಗೆ ಮಧ್ಯಪ್ರದೇಶ ರಾಜ್ಯದ ಛೇಂಬರ್‌ ಮಾದರಿಯಲ್ಲಿ ನೀರಾವರಿ ಮಾಡುವ ನಿರ್ಧಾರಕ್ಕೆ ಬಂದಿತ್ತು. ಸಂಸದ ಸಂಗಣ್ಣ ಕರಡಿ ಅವರ ಪ್ರಯತ್ನವೂ ಇದರಲ್ಲಿ ಹೆಚ್ಚಿತ್ತು. ಆದರೆ ನೀರಾವರಿ ತಾಂತ್ರಿಕ ತಂಡ ಛೇಂಬರ್‌ ಮಾದರಿ ನೀರಾವರಿ ಕಲ್ಪಿಸುವುದು ಕಷ್ಟಸಾಧ್ಯ ಎನ್ನುವ ಮಾತನ್ನು ಈಚೆಗೆ ನಡೆದ ಸಭೆಯಲ್ಲಿ ಪ್ರಸ್ತಾಪಿಸಿದೆ ಎನ್ನುವ ಮಾತುಗಳು ನೀರಾವರಿ ಇಲಾಖೆ ಅಧಿ ಕಾರಿಗಳಿಂದ ತಿಳಿದು ಬಂದಿದೆ. ಕೊಪ್ಪಳ ಹಾಗೂ ಮುಂಡರಗಿ ಭಾಗದಲ್ಲಿ ಪರಿಶೀಲನೆ ನಡೆಸಿರುವ ನೀರಾವರಿ ತಜ್ಞರ ತಾಂತ್ರಿಕ ತಂಡವು ಸ್ಥಳ ಪರಿಶೀಲನೆ ನಡೆಸಿದೆ. ಇಲ್ಲಿನ ಭೂ ಮಟ್ಟ ಸೇರಿದಂತೆ ನೀರಾವರಿ ಪ್ರದೇಶದ ಹಲವು ಭಾಗಗಳನ್ನು ವೀಕ್ಷಣೆ ಮಾಡಿ ತಾಂತ್ರಿಕತೆ ಕುರಿತು ಅವಲೋಕಿಸಿದೆ. ಛೇಂಬರ್‌ ಮಾದರಿಯಲ್ಲಿ ನೀರಾವರಿ ಮಾಡುವುದಾದರೆ, ಪಂಪ್‌ಹೌಸ್‌ ವರೆಗೆ ನೀರು ತರಲಾಗುತ್ತದೆ. ಅಲ್ಲಿಂದ ರೈತರ ಜಮೀನಿಗೆ ನೀರನ್ನು ಹೇಗೆ ತೆಗೆದುಕೊಂಡು ಹೋಗಬೇಕು ಅಥವಾ ನೀರನ್ನು ಹರಿಸಬೇಕು ಎನ್ನುವ ವಿಚಾರ ಪ್ರಸ್ತಾಪಕ್ಕೆ ಬಂದಿದೆ.

ಸ್ಥಿತಿವಂತ ರೈತರು ತಮ್ಮ ಶಕ್ತಿಯನುಸಾರ ಪೈಪ್‌ಲೈನ್‌ ಮೂಲಕ ನೀರನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಬಡ ರೈತರು, ಸಣ್ಣ, ಮಧ್ಯಮ ರೈತರಿಗೆ ಇದು ಕಷ್ಟದ ಕೆಲಸ. ರೈತರಿಗೆ ಇಲ್ಲಿ ಹೊರೆಯಾಗಲಿದೆ ಎನ್ನುವ ಮಾತುಗಳು ತಾಂತ್ರಿಕತೆ ತಂಡದ ಮುಂದೆ ಪ್ರಸ್ತಾಪಕ್ಕೆ ಬಂದಿವೆ ಎನ್ನುವ ಮಾತು ತಿಳಿದು ಬಂದಿದೆ.

ಮತ್ತೂಮ್ಮೆ ಚರ್ಚೆ: ಇನ್ನು ಕೆಲವೇ ದಿನಗಳಲ್ಲಿ ಮತ್ತೂಮ್ಮೆ ನೀರಾವರಿ ತಜ್ಞರ ಸಭೆ ನಡೆಸಲಿದೆ. ಈಗಿನ ಮಾಹಿತಿ ಪ್ರಕಾರ, ಈಗಾಗಲೇ ಕೊಪ್ಪಳ, ಮುಂಡರಗಿ ಭಾಗದಲ್ಲಿ ಮಾಡಲಾಗಿರುವ ಕಾಲುವೆಗಳಿಂದ ನೀರನ್ನು ಚಾಕ್‌ವೆಲ್‌ಗ‌ಳ ಮೂಲಕ ಲಿಫ್ಟ್‌ ಮಾಡಿ ಒಂಬಂತ್ತು ಪಂಪ್‌ಹೌಸ್‌ ನಿರ್ಮಿಸಿ ಪ್ರತಿ ರೈತನ ಜಮೀನಿಗೂ ಒಂದು ಪೈಪ್‌ನ ಸಂಪರ್ಕ ಕೊಡುವ ಚರ್ಚೆಯೂ ನಡೆದಿವೆ. ಅಂದರೆ ಕೊಪ್ಪಳ ಜಿಲ್ಲೆಯಲ್ಲಿ 47 ಸಾವಿರ ಹೆಕ್ಟೇರ್‌ ಪ್ರದೇಶ ಸಿಂಗಟಾಲೂರು ಏತ ನೀರಾವರಿ ವ್ಯಾಪ್ತಿಯಿದೆ. ಇಲ್ಲಿ ಪ್ರತಿ ರೈತರಿಗೂ ಈ ರೀತಿಯ ಪೈಪ್‌ ಕೊಡುವುದು ತಾಂತ್ರಿಕತೆಯ ಸಾಧ್ಯತೆ ಗಳ ಕುರಿತಂತೆಯೂ ಅವಲೋಕನ ನಡೆಸಲಾಗಿದೆ.

ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಛೇಂಬರ್‌ ಮಾದರಿ ನೀರಾವರಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಅದಕ್ಕೆ ಈಗಾಗಲೇ ನಿವೃತ್ತ ಎಂಜನಿ ಯರ್‌ ಒಳಗೊಂಡ ಸಮಿತಿ ರಚಿಸಿದ್ದು, ಸಮಿತಿಯ ಮುಂದೆ ಮೂರು ವಿಧಾನದಲ್ಲಿ ನೀರಾವರಿ ಕಲ್ಪಿಸುವ ಆಯ್ಕೆಗಳಿವೆ. ಇನ್ನೂ ಯಾವುದನ್ನು ನಿರ್ಧಾರ ಮಾಡಿಲ್ಲ. ಪ್ರತಿ ರೈತರ ಜಮೀನಿಗೂ ಪೈಪ್‌ ಕಲ್ಪಿಸುವ ಅವಕಾಶವೂ ಇದೆ. ಈ ಕುರಿತು ಅಧಿ ಕಾರಿಗಳೊಂದಿಗೆ ಚರ್ಚೆ ಮಾಡಿ ಮಾತನಾಡುವೆ. ಸಂಗಣ್ಣ ಕರಡಿ, ಕೊಪ್ಪಳ ಸಂಸದ

ಸಿಂಗಟಾಲೂರು ಏತ ನೀರಾವರಿಗೆ ತಾಂತ್ರಿಕ ಸಮಿತಿ ಏನೇ ಹೇಳುತ್ತಿರಬಹುದು. ಇದರಲ್ಲಿ ಎಲ್ಲರೂ ಕಮಿಟ್‌ಮೆಂಟ್‌ ಆಗಿದ್ದಾರೆ. ರಾಮತಾಳ ಹನಿ ನೀರಾವರಿ ವಿಫಲವಾಗಿದೆ. ಸರ್ಕಾರ ಇದೆಲ್ಲವನ್ನು ನೋಡಿ ಛೇಂಬರ್‌ ಮಾದರಿಯಲ್ಲೇ ರೈತರ ಜಮೀನಿಗೆ ಕಾಲುವೆ ನೀರಾವರಿ ಕಲ್ಪಿಸಬೇಕು. ಸುಮ್ಮನೆ ನೂರೆಂಟು ಕಾರಣ ಹೇಳಿಕೊಂಡು ವಿಳಂಬ ಮಾಡುವುದು ಸರಿಯಲ್ಲ. ಹನಿ ನೀರಾವರಿ ಬದಲಿಗೆ ಹರಿ ನೀರಾವರಿ ಜಾರಿಯಾಗಲಿ. ವೈ.ಎನ್‌. ಗೌಡರ್‌, ನೀರಾವರಿ ಹೋರಾಟಗಾರ

ತಾಂತ್ರಿಕ ತಂಡವು ಈಚೆಗೆ ಮುಂಡರಗಿ, ಕೊಪ್ಪಳ ಭಾಗದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಛೇಂಬರ್‌ ಮಾದರಿ ನೀರಾವರಿಯ ಕುರಿತು ಚರ್ಚೆ ನಡೆಸಿದೆ. ತಾಂತ್ರಿಕ ತಂಡದ ಮುಂದೆ ಹಲವು ವಿಚಾರಗಳು ಚರ್ಚೆಗೆ ಬಂದಿವೆ. ಮತ್ತೂಮ್ಮೆ ಸಭೆ ನಡೆಸಿ ರೈತರ ಜಮೀನಿಗೆ ನೀರಾವರಿ ಕಲ್ಪಿಸುವ ಕುರಿತಂತೆ ನಿರ್ಧಾರಕ್ಕೆ ಬರಲಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

„ದತ್ತು ಕಮ್ಮಾರ

ಟಾಪ್ ನ್ಯೂಸ್

1-BCCI

Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-gangavathi-3

Gangavathi: ಸತತ ಮಳೆಗೆ ಕುಸಿದ ಮನೆ; ಮಣ್ಣಿನಲ್ಲಿ ಸಿಲುಕಿದ ವ್ಯಕ್ತಿ-ಗ್ರಾಮಸ್ಥರಿಂದ ರಕ್ಷಣೆ

CM ಸಿದ್ದರಾಮಯ್ಯನವರಿಗೆ ಗಂಗಾವತಿಯಲ್ಲಿ ಅದ್ದೂರಿಯ ಸ್ವಾಗತ

CM ಸಿದ್ದರಾಮಯ್ಯನವರಿಗೆ ಗಂಗಾವತಿಯಲ್ಲಿ ಅದ್ದೂರಿಯ ಸ್ವಾಗತ

Koppala; ‘ಒಂದು ವರ್ಷ ಅವಕಾಶ ಕೊಡಿ’ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

Koppala; ‘ಒಂದು ವರ್ಷ ಅವಕಾಶ ಕೊಡಿ’ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

ಕುಷ್ಟಗಿ: ಹೆಚ್ಚಿದ ಕಾರ್ಯಭಾರ-ಒತ್ತಡದಲ್ಲಿ ಪೊಲೀಸ್‌ ಸಿಬ್ಬಂದಿ

ಕುಷ್ಟಗಿ: ಹೆಚ್ಚಿದ ಕಾರ್ಯಭಾರ-ಒತ್ತಡದಲ್ಲಿ ಪೊಲೀಸ್‌ ಸಿಬ್ಬಂದಿ

Koppala: ಆದಷ್ಟು ಬೇಗ ಆರ್ಥಿಕ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

Koppala: ಆದಷ್ಟು ಬೇಗ ಆರ್ಥಿಕ- ಜಾತಿ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

puttige

Udupi; ಗೀತಾರ್ಥ ಚಿಂತನೆ 57: ದುರ್ಯೋಧನನಲ್ಲಿ ಮಾನಸಿಕ ಸ್ಥೈರ್ಯ ಕುಸಿತ

1-BCCI

Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.