ಸಂಚಾರ ನಿಯಮ ಉಲ್ಲಂಘನೆ-ದಂಡ ವಸೂಲಿ

ಹೆಚ್ಚಿದ ವಾಹನ-ಜನ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

Team Udayavani, May 27, 2022, 5:04 PM IST

25

ಹೊನ್ನಾವರ: ತಿಂಗಳ ಕೊನೆಗೊಮ್ಮೆ ಇಲಾಖೆಗೆ ಲೆಕ್ಕಕೊಡಲು ಪೊಲೀಸ್‌ ಠಾಣೆ ಎದುರು ನಿಂತು ಪೊಲೀಸರು ಬೈಕ್‌ ಸವಾರರ ಮೇಲೆ ಸಂಚಾರ ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ ಮಡುವುದನ್ನು ಬಿಟ್ಟರೆ ಉಳಿದ ಎಲ್ಲ ದಿನಗಳಲ್ಲಿ ಹೊನ್ನಾವರ ಸಂಚಾರ ಕಿಷ್ಕಿಂದೆ.

ಸ್ಟ್ಯಾಂಡ್‌ಗೆ ಬಸ್‌ ಬಂದು-ಹೋಗುವ ಮಾರ್ಗ ಒಂದೇ ಆಗಿದ್ದು ಗೂಡಂಗಡಿ ತೆಗೆದ ಸ್ಥಳದಲ್ಲಿ ಜನ ಬೈಕ್‌ ನಿಲ್ಲಿಸುತ್ತಿದ್ದು ಪ್ರತಿ ಬಸ್‌ ಬಂದು ಹೋಗುವಾಗಲೂ ನಿಂತು ಎದುರು ಬಂದ ವಾಹನ ದಾಟಿದ ಮೇಲೆ ಹೋಗಬೇಕಾಗುತ್ತದೆ.

ಈ ರಸ್ತೆಯನ್ನು ವಿಸ್ತರಿಸುವುದಾಗಿ ಹೇಳಲಾಗಿತ್ತು. ಪಪಂ ಪಕ್ಕದ ಕಟ್ಟಡದಲ್ಲಿರುವ ಅಂಗಡಿಯಲ್ಲದೆ ರಸ್ತೆ ಮಧ್ಯೆ ತರಕಾರಿ ಹಾಕಿಕೊಂಡಿದೆ. ಎರಡು ವಾಹನ ಓಡಾಡುವ ಸ್ಥಳದಲ್ಲಿ ಒಂದು ವಾಹನಕ್ಕೂ ದಾಟಲು ಸಾಧ್ಯವಾಗುವುದಿಲ್ಲ. ನಿತ್ಯ ಇದೇ ಗೋಳು.

ಸ್ವಲ್ಪ ಮುಂದೆ ಟಪ್ಪರ್‌ ಹಾಲ್‌ ಸರ್ಕಲ್‌ಗೆ ಹೋದರೆ ಅಲ್ಲಿ ಕುಮಟಾ, ಗೇರಸೊಪ್ಪಾ ಟೊಂಪೋಗಳು ಬಸ್‌ನ್ನು ಅಡ್ಡಗಟ್ಟುತ್ತವೆ. ಭಟ್ಕಳ ಕಡೆಯಿಂದ ಬರುವ ಟೆಂಪೋಗಳು ಬದಿಯಲ್ಲಿ ನಿಲ್ಲದೆ ಸರ್ಕಲ್‌ನಲ್ಲೇ ಪ್ರಯಾಣಿಕರನ್ನು ಇಳಿಸುತ್ತದೆ. ಎರಡು ಶಾಲೆ, ಸರ್ಕಾರಿ ಆಸ್ಪತ್ರೆ, ನ್ಯಾಯಾಲಯ ರಸ್ತೆಗಳು ಸೇರುವ ಈ ಸರ್ಕಲ್‌ನಲ್ಲಿ ಬೆಳಗ್ಗೆ ಮತ್ತು ಸಂಜೆ ಸಂಚಾರ ಕಿಷ್ಕಿಂದೆಯಾಗುತ್ತದೆ.

ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ ಕಾಲೇಜು ಸರ್ಕಲ್‌ ಇನ್ನೊಂದು ಅದ್ವಾನ. ರಾಷ್ಟ್ರೀಯ ಹೆದ್ದಾರಿಗಳು ಸೇರುವುದರಿಂದ ವಾಹನದಟ್ಟಣೆಯ ಜೊತೆ ಎರಡು ಕಾಲೇಜು, ಎರಡು ಮಾಧ್ಯಮಿಕ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ, ಆಸ್ಪತ್ರೆಗಳಿಗೆ ಹೋಗಿ ಬರುವ ಜನರ ದಟ್ಟಣೆ. ಎಡ-ಬಲ ಎನ್ನದೆ ನುಗ್ಗಿ ಬರುವ ಬೈಕ್‌ಗಳು, ಧಾವಿಸಿ ಬರುವ 20-30 ಚಕ್ರಗಳ ಲಾರಿಗಳು ಓಡಾಡುವವರನ್ನು ಗಾಬರಿಗೊಳಿಸುತ್ತವೆ. ಇನ್ನು ಶನಿವಾರ ಬಂದರದಲ್ಲಿ ವಾರದ ಸಂತೆ.

ಪಾದಾಚಾರಿಗಳಿಗೂ ಓಡಾಡುವುದು ಕಷ್ಟ. ಅಲ್ಲೂ ವಾಹನಗಳು ನುಗ್ಗುತ್ತವೆ. ಪೇಟೆಯಲ್ಲಂತೂ ಬೈಕ್‌ ಗಳನ್ನು ಓಡಾಡಿಸುವುದು ಕಷ್ಟ, ಅಲ್ಲಿ ಕಾರುಗಳನ್ನು ನಿಲ್ಲಿಸಿ ಎಲ್ಲೆಲ್ಲೋ ವ್ಯಾಪಾರಕ್ಕೆ ಹೋಗುವವರು. ಇಲ್ಲಿ ಕೇಳುವವರಿಲ್ಲ, ಹೇಳುವವರಿಲ್ಲ. ಪೇಟೆ, ಬಂದರು, ಪ್ರಭಾತನಗರ ಎಲ್ಲಿ ಹುಡುಕಿದರೂ ಒಬ್ಬ ಸಂಚಾರಿ ಪೊಲೀಸರೂ ಸಿಗುವುದಿಲ್ಲ.

ಸಿಬ್ಬಂದಿ ಕಡಿಮೆ, ಅಧಿಕಾರಿಗಳು ಹೆಚ್ಚು. ಮಂತ್ರಿಗಳ ಎಸ್ಕಾರ್ಟ್‌, ಕೋರ್ಟ್‌ ಸಮನ್ಸ್‌ ಡ್ನೂಟಿಗಳು, ಸಭೆ-ಸಮಾರಂಭಗಳು ಹೀಗೆ ಇರುವ 50 ಪೊಲೀಸರು ಹಂಚಿಹೋಗುತ್ತಾರೆ. ಸಂಚಾರಿ ಪೊಲೀಸರಿಲ್ಲ. ಇರುವವರಿಗೆ ಬಿಡುವಿಲ್ಲ. ಪೊಲೀಸರಿಗೂ ಕಷ್ಟ, ಜನಕ್ಕೆ ನಷ್ಟ.

ಇದೆಲ್ಲವನ್ನೂ ನೋಡುತ್ತ ಆಗೀಗ ಪೊಲೀಸ್‌ ಅಧಿಕಾರಿಗಳು ತಮ್ಮ ಜೀಪಿನಲ್ಲಿ ಪೇಟೆ ಹಾದು ಹೋಗುತ್ತಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಬಂದು ಏಕಮುಖ ರಸ್ತೆ ಸಂಚಾರ ಮಾಡಲಾಗುವುದು, ಎರಡು ವಾರದಲ್ಲಿ ಸಂಚಾರ ಸುಗಮಗೊಳಿಸಲಾಗುವುದು ಎಂದು ಹೇಳಿ ಹೋಗಿ 6 ತಿಂಗಳಾಯಿತು.

ಪೊಲೀಸರು ಆಸಕ್ತಿ ವಹಿಸುವುದಿಲ್ಲ, ಪಪಂ ಸಂಬಂಧವಿಲ್ಲದಂತಿದೆ. ಎರಡ್ಮೂರು ಜನರನ್ನು ಕೂರಿಸಿಕೊಂಡು, ಒಂದು ಕೈಲಿ ಮೊಬೈಲ್‌ ಹಿಡಿದು ಮಾತನಾಡುತ್ತ ಪೊಲೀಸರೆದುರೇ ಹೋಗುವ ಬೈಕ್‌, ಸ್ಕೂಟರ್‌ ಸವಾರರನ್ನು ದೇವರೇ ಕಾಪಾಡಬೇಕು. ಕಾಲೇಜು ಸರ್ಕಲ್‌, ಟಪ್ಪರ್‌ ಹಾಲ್‌ ಸರ್ಕಲ್‌, ಬಸ್‌ ಸ್ಟ್ಯಾಂಡ್‌ ಮತ್ತು ಬಂದರದಲ್ಲಿ ಕನಿಷ್ಠ ಒಬ್ಬ ಪೊಲೀಸರನ್ನಾದರೂ ಇಟ್ಟು ಒಬ್ಬ ಎಎಸ್‌ಐ ಅನ್ನು ಇವರ ಉಸ್ತುವಾರಿಗೆ ಇಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

13(1

Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು

12-

Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು

Shivaraj-Tangadagi

Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್‌ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.