![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 6, 2022, 7:38 PM IST
ಗಂಗಾವತಿ :ತಾಲೂಕಿನ ಆನೆಗೊಂದಿ ಗ್ರಾಮದ ತಳವಾರಘಟ್ಟ ರಸ್ತೆಯಲ್ಲಿ ಸಾರ್ವಜನಿಕರು ಮತ್ತು ಎನ್ ಜಿಒ ಸಂಸ್ಥೆ ಅವರು ಹಾಕುತ್ತಿರುವ ಕಸದ ರಾಶಿಯಿಂದ ಪರಿಸರ ಮಾಲಿನ್ಯ ಉಂಟಾಗಿ, ಜತೆಗೆ ಕಸದ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ರಸ್ತೆಯುದ್ದಕ್ಕೂ ಇದ್ದ ಬೇವಿನ ಮರಗಳು ಸುಟ್ಟು ಭಸ್ಮವಾಗಿವೆ. ಇದಕ್ಕೆ ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರು ಕಸ ಹಾಕಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಆನೆಗೊಂದಿ ಗ್ರಾಮದ ಸುತ್ತಲಿನ ರಸ್ತೆಗಳ ಉದ್ದಕ್ಕೂ ಸಾರ್ವಜನಿಕರು ಕಸವನ್ನು ಮತ್ತು ತಿಪ್ಪೆಗುಂಡಿಗಳನ್ನು ಹಾಕುತ್ತಿದ್ದಾರೆ ಇದರಿಂದ ಇಡೀ ಗ್ರಾಮ ಪರಿಸರ ಮಾಲಿನ್ಯದಿಂದ ನಾರುತ್ತಿದೆ .ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಕೂಡಲೇ ಸುತ್ತಲೂ ಇರುವ ಕಸದ ರಾಶಿ ಮತ್ತು ತಿಪ್ಪೆಗುಂಡಿಗಳ ಸ್ವಚ್ಛ ಮಾಡಬೇಕು .ಸಾರ್ವಜನಿಕರ ಜೀವ ಸಂಸ್ಥೆಯವರು ಕೆಟ್ಟ ರಸ್ತೆಯಲ್ಲಿ ನಿತ್ಯವೂ ಕಸದ ರಾಶಿಯನ್ನು ಹಾಕುತ್ತಿದ್ದು ಶುಕ್ರವಾರ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ರಸ್ತೆಯುದ್ದಕ್ಕೂ ಇದ್ದ ಬೇವಿನ ಮರಗಳು ಭಸ್ಮವಾಗಿವೆ ಜತೆಗೆ ಇಡೀ ದಿನ ಕಸದ ರಾಶಿಯ ಬೆಂಕಿಯ ಹೊಗೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು .
ಕೂಡಲೇ ಕಸ ಹಾಕುವವರನ್ನು ಶಿಕ್ಷಿಸಬೇಕು ಜತೆಗೆ ಕಸದ ಪರಿಣಾಮ ಮತ್ತು ರೋಗ ರುಜಿನು ಬಗ್ಗೆ ಸಾರ್ವಜನಿಕರಿಗೆ ಗ್ರಾ. ಪಂ. ನವರು ಜನಜಾಗೃತಿ ಮೂಡಿಸುವಂತೆ ಪರಿಸರ ಪ್ರೇಮಿಗಳು ಸಾರ್ವಜನಿಕರು ಒತ್ತಾಯಿಸಿದ್ದಾರೆ .
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.