![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Jul 8, 2022, 6:25 PM IST
ಮಂಡ್ಯ: ಸಾರ್ವಜನಿಕ ರಸ್ತೆಯಲ್ಲಿ ಹಿತ್ತಲು, ದನದ ಕೊಟ್ಟಿಗೆ, ತಿಪ್ಪೆಗಳ ಸಾಲು, ಮರಳು ಕಲ್ಲುಗಳ ರಾಶಿ, ಎಲ್ಲೆಂದರಲ್ಲಿ ಬೀದಿ ನಾಯಿಗಳ ಹಿಂಡು ಹಾಗೂ ಬಿಡಾಡಿ ದನಗಳು… ಇದು, ಮಂಡ್ಯ ನಗರದಲ್ಲಿನ ಅವ್ಯವಸ್ಥೆ. ನಗರದಲ್ಲಿ ನಾಯಿ ಕೊಡೆಗಳಂತೆ ಕಸದ ರಾಶಿಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಕಳೆದ 4-5 ದಿನಗಳಿಂದ ಪೌರಕಾರ್ಮಿ ಕರು, ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರು. ಈಗ ಧರಣಿ ಅಂತ್ಯಗೊಂಡಿದೆ. ಆದರೆ, ನಗರಸಭೆ ಅಧಿಕಾರಿಗಳು ಕಸ ವಿಲೇವಾರಿಗೆ ಇನ್ನೂ ಕ್ರಮ ಕೈಗೊಂಡಿಲ್ಲ.
ರಸ್ತೆಗಳಲ್ಲಿ ತಿಪ್ಪೆಗುಂಡಿ: ನಗರಸಭೆ ವಿವಿಧ ವಾರ್ಡ್ ಗಳಲ್ಲಿ ಸಾರ್ವಜನಿಕರು ಮನೆಗಳ ಎದುರಿನ ರಸ್ತೆಯಲ್ಲಿ ಹೂವಿನ ಗಿಡ, ನುಗ್ಗೆ ಮರ, ತರಕಾರಿ ಬಳ್ಳಿ, ಅಲಂಕಾರಿಕ ಗಿಡ ಬೆಳೆಸಿ ಹಿತ್ತಲು ಮಾಡಿಕೊಂಡಿ¨ªಾರೆ. ಹಲವು ರಸ್ತೆಗಳಲ್ಲಿ ಎಮ್ಮೆ, ದನಗಳನ್ನು ಕಟ್ಟಿ ಹಾಕುತ್ತಿದ್ದಾರೆ. ಕೆಲವು ಕಡೆ ರಸ್ತೆಯನ್ನು ತಿಪ್ಪೆಗುಂಡಿ ಮಾಡಿಕೊಂಡಿದ್ದಾರೆ. ದನಗಳ ಹಾವಳಿ: ಎಮ್ಮೆ, ದನಗಳನ್ನೂ ರಸ್ತೆಗೆ ಬಿಡಲಾ ಗುತ್ತಿದೆ. ಅಲ್ಲದೆ, ಕಸದಲ್ಲಿ ಆಹಾರ ಹುಡುಕುತ್ತಾ ಕಸ ವನ್ನು ರಸ್ತೆಗೂ ಚೆಲ್ಲುತ್ತಿವೆ. ಜತೆಗೆ ವಾಹನಗಳಿಗೂ ಅಡ್ಡ ಬರುತ್ತಿದ್ದು ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿವೆ.
ಮರಳು, ಕಲ್ಲುಗಳ ರಾಶಿ: ಅದೇ ರೀತಿ ಮನೆ ನಿರ್ಮಾಣದ ವೇಳೆ ಮರಳು, ಕಲ್ಲು, ಇಟ್ಟಿಗೆಗಳನ್ನು ರಸ್ತೆಯಲ್ಲಿ ಹಾಕಲಾಗಿದೆ. ನಗರದ ಬಹುತೇಕ ಕಡೆ ಮರಳು ಕಲ್ಲುಗಳ ರಾಶಿ ಕಂಡು ಬರುತ್ತಿವೆ. ಹಲವು ಬಡಾವಣೆಗಳ ರಸ್ತೆಗಳಲ್ಲಿ ಇಂಥ ಸನ್ನಿವೇಶ ಎದುರಾಗಿರುವುದರಿಂದ ರಸ್ತೆ ಅತಿ ಕ್ರಮವಾಗಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತೆರವಿಗೆ ಆಗ್ರಹ: ಮನೆ ಎದುರಿನ ರಸ್ತೆಯ ಹಿತ್ತಲು, ಮರಳು ಕಲ್ಲು, ದನದ ಕೊಟ್ಟಿಗೆ, ತಿಪ್ಪೆಗುಂಡಿ ತೆರವು ಮಾಡಬೇಕು. ಎಮ್ಮೆ ದನಗಳನ್ನು ಬೀದಿಗೆ ಬಿಡುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೀದಿನಾಯಿ ಹಾವಳಿ: ಸಣ್ಣಪುಟ್ಟ ರಸ್ತೆಗಳಲ್ಲೂ ನಾಯಿಗಳ ಹಿಂಡು ಕಾಣಬಹುದು. ಹಲವು ಕಡೆ ಮಕ್ಕಳ ಮೇಲೆ ನಾಯಿಗಳ ಗುಂಪು ದಾಳಿ ಮಾಡಿದ್ದು, ದಾರಿ ಹೋಕರು, ಸವಾರರನ್ನು ಕಚ್ಚುತ್ತಿವೆ. ಜತೆಗೆ ವಾಹನ ಬೆನ್ನಟ್ಟುತ್ತಿದ್ದು ಇದರಿಂದ ಕೆಳಗೆ ಬಿದ್ದು ಸವಾರರು ಗಾಯಗೊಳ್ಳುತ್ತಿದ್ದಾರೆ. ಪ್ರಾಣಿ ದಯಾ ಸಂಘದವರು ಮೊಕದ್ದಮೆ ದಾಖಲಿಸುತ್ತಾರೆ ಎಂಬ ಭೀತಿ ತೊರೆದು ಪರ್ಯಾಯ ಕ್ರಮದ ಮೂಲಕ ಬೀದಿ ನಾಯಿಗಳ ಹಾವಳಿ ತಡೆಗೆ ನಗರಸಭೆ ತುರ್ತು ಕ್ರಮ ವಹಿಸಬೇಕಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಲ್.ತುಳಸೀಧರ್ ಕಿಡಿಕಾರಿದ್ದಾರೆ.
ಬೀದಿ ನಾಯಿ ಹಾವಳಿ ತಪ್ಪಿಸಿ
ಪ್ರಾಣಿ ದಯಾ ಸಂಘಗಳ ಸಲಹೆ ಪಡೆದು ಬೀದಿ ನಾಯಿ ಹಾವಳಿ ತಡೆಗೆ ನಗರಸಭೆ ಕ್ರಮ ವಹಿಸಬೇಕು ಎಂದು ನಾಗರಿಕರ ಹಿತಾಸಕ್ತಿ ಸಮಿತಿ ಅಧ್ಯಕ್ಷ ಎಸ್.ಸಿ.ಮಧುಚಂದನ್ ಒತ್ತಾಯಿಸಿದರು. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಗಟ್ಟುವ ವಿಫಲವಾಗಿರುವ ನಗರಸಭೆ ಆಡಳಿತ ಮಂಡಳಿ ತಕ್ಷಣ ಕ್ರಮ ವಹಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳ ಮೇಲೆ ದಾಳಿ ನಡೆಸಿದ ಉದಾಹರಣೆ ಕಣ್ಣ ಮುಂದೆ ಇವೆ. ರಾತ್ರಿ ವೇಳೆ ಓಡಾಡುವ ಸಾರ್ವಜನಿಕರ ಮೇಲೂ ದಾಳಿ ಮಾಡುತ್ತಿರುವ ಘಟನೆ ಹೆಚ್ಚುತ್ತಲೇ ಇವೆ. ಇಷ್ಟಿದ್ದರೂ ನಗರಸಭೆ ಮಾತ್ರ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಕಿಡಿಕಾರಿದರು.
ಗುಂಡಿ ಸರಿಪಡಿಸಿ: ನಗರದ ಬಹುತೇಕ ರಸ್ತೆ ಹಳ್ಳ ಬಿದ್ದಿವೆ.ವಾಹನ ಸವಾರರು ಪರದಾಡುವ ಸ್ಥಿತಿಯಿದೆ. ಅದನ್ನೂ ಮುಚ್ಚುವ ಕೆಲಸ ಮಾಡಬೇಕು. ಒಂದು ತಿಂಗಳ ಗಡುವು ನೀಡುತ್ತಿದ್ದೇವೆ. ಇಲ್ಲವಾದರೆ ನಗರ ನಾಗರಿಕರ ಹಿತಾಸಕ್ತಿ ಸಮಿತಿಯಿಂದ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಗದೀಶ್, ಮಂಜೇಶ್, ರಘು, ಮನ್ಸೂರ್, ಹಾಲಹಳ್ಳಿ ಮಹೇಶ್, ಸಿದ್ದಲಿಂಗ, ಶಶಿಧರ್ ಇದ್ದರು.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.