ಜಿಲ್ಲೆಯಲ್ಲಿ ರಸ ಗೊಬ್ಬರ ಪೂರೈಕೆಗೆ ಸೂಕ್ತ ಕ್ರಮ

3180 ಮೆಟ್ರಿಕ್‌ ಟನ್‌ಯೂರಿಯಾ ಪೂರೈಕೆ: ಚಂದ್ರಶೇಖರ್‌

Team Udayavani, Sep 23, 2020, 3:47 PM IST

ಜಿಲ್ಲೆಯಲ್ಲಿ ರಸ ಗೊಬ್ಬರ ಪೂರೈಕೆಗೆ ಸೂಕ್ತ ಕ್ರಮ

ಮಂಡ್ಯ: ಜಿಲ್ಲೆಯಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಆದ್ದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಜಂಟಿ ನಿರ್ದೇಶಕ ಚಂದ್ರಶೇಖರ್‌ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಾಲಿನಲ್ಲಿ ಎಲ್ಲ ರಸಗೊಬ್ಬರಗಳಿಗೆ 93127 ಮೆಟ್ರಿಕ್‌ ಟನ್‌ ಬೇಡಿಕೆ ಬಂದಿತ್ತು. ಯೂರಿಯಾಗೆ43650 ಮೆಟ್ರಿಕ್‌ ಟನ್‌ ಬೇಡಿಕೆ ಇತ್ತು. ಆಗಸ್ಟ್‌ವರೆಗೆ 35838 ಮೆಟ್ರಿಕ್‌ ಟನ್‌ ಯೂರಿಯಾ ಗೊಬ್ಬರ ಸರಬರಾಜು ಮಾಡಲಾಗಿತ್ತು. ಸೆಪ್ಟಂಬರ್‌ ತಿಂಗಳಲ್ಲಿ9750 ಮೆಟ್ರಿಕ್‌ ಟನ್‌ಯೂರಿಯಾಪೂರೈಸಬೇಕಾಗಿದೆ. ಇದರಲ್ಲಿ ಈಗಾಗಲೇ 3180 ಮೆಟ್ರಿಕ್‌ ಟನ್‌ ಪೂರೈಸಲಾಗಿದೆ. ಇನ್ನೂ 6570 ಮೆಟ್ರಿಕ್‌ ಟನ್‌ ಪೂರೈಸಲು ಅಗತ್ಯಕ್ರಮ ವಹಿಸಲಾಗಿದೆ ಎಂದರು.

8300 ಮೆಟ್ರಿಕ್‌ ಟನ್‌ ಯೂರಿಯಾಗೆ ಬೇಡಿಕೆ: ಜಿಲ್ಲೆಗೆ ಅಗತ್ಯವಿರುವ 8300 ಮೆಟ್ರಿಕ್‌ ಟನ್‌ ಯೂರಿಯಾಗೆ ಬೇಡಿಕೆ ಸಲ್ಲಿಸಲಾಗಿದೆ. ಕ್ರಿಬ್ಕೋ, ಎಫ್ಪಿಎಲ್‌ ಸೇರಿದಂತೆ ವಿವಿಧ ರಸಗೊಬ್ಬರ ಕಂಪನಿಗಳಿಂದ 8300 ಮೆಟ್ರಿಕ್‌ ಟನ್‌ ಮುಂದಿನ ದಿನಗಳಲ್ಲಿ ಸರಬರಾಜಾಗಲಿದೆ ಎಂದು ತಿಳಿಸಿದರು. ಪಿಒಎಸ್‌ ಮೂಲಕ ವಿತರಣೆಗೆ ಕ್ರಮ: ಜಿಲ್ಲೆಯಲ್ಲಿ 210 ಟಿಎಪಿಸಿಎಂಎಸ್‌ ಸೊಸೈಟಿ ಹಾಗೂ 295 ಡೀಲರ್ಗಳಿದ್ದಾರೆ. ಇವರ ಮುಖಾಂತರ ರೈತರಿಗೆ ವಿತರಿಸಲು ಕ್ರಮ ವಹಿಸಲಾಗಿದೆ. ಆನ್‌ಲೈನ್‌ನಲ್ಲಿ ಪಿಒಎಸ್‌ ಮೂಲಕವೇ ರೈತರ ಆಧಾರ್‌ ಸಂಖ್ಯೆ ಹಾಗೂ ಹೆಬ್ಬೆಟ್ಟು ಪಡೆದು ವಿತರಿಸಬೇಕಾಗಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಜಿಲ್ಲೆಯಲ್ಲಿ ಎಷ್ಟು ರಸಗೊಬ್ಬರ ಸಂಗ್ರಹವಿದೆ. ಬೇಡಿಕೆ ಎಷ್ಟಿದೆ ಎಂಬುದರ ಮಾಹಿತಿ ಆಧಾರದ ಮೇಲೆ ರಸಗೊಬ್ಬರ ಪೂರೈಸಲಿದೆ. ಆದರೆ, ಇದುವರೆಗೂ ಕೆಲವು ಸೊಸೈಟಿಗಳು ಪಿಒಎಸ್‌ ಕ್ರಮ ಅನುಸರಿಸುತ್ತಿಲ್ಲ. ಇದರಿಂದ ತೊಂದರೆಯಾಗಿದೆ. ಆದ್ದರಿಂದ ಕೃಷಿ ಇಲಾಖೆಯಿಂದ ಕಳೆದ ಒಂದು ತಿಂಗಳಿನಿಂದ ಅಧಿಕಾರಿಗಳು ಸೊಸೈಟಿ ಹಾಗೂ ಅಂಗಡಿಗಳಿಗೆ ಭೇಟಿ ನೀಡಿ ಈಗಾಗಲೇ ಯೂರಿಯಾಖರೀದಿಸಿರುವ ರೈತರ ಮಾಹಿತಿ ಪಡೆದು ಪಿಒಎಸ್‌ ಮಾಡಲಾಗುತ್ತಿದೆ ಎಂದು ಹೇಳಿದರು.

ಕಡಿಮೆ ದರಕ್ಕೆ ರೈತರ ಒಲವು: ಬೇರೆ ರಸಗೊಬ್ಬರಗಳಿಗಿಂತ ಯೂರಿಯಾ ಎಂಆರ್‌ಪಿ ಬೆಲೆ ಕಡಿಮೆ ಇರುವುದರಿಂದ ರೈತರು ಯೂರಿಯಾವನ್ನೇ ಹೆಚ್ಚು ಖರೀದಿಸುತ್ತಿದ್ದಾರೆ. ಡಿಎಪಿ, ಕಾಂಪ್ಲೆಕ್ಸ್‌, ಅಮೋನಿಯಂ ಸಲ್ಫೆàಟ್‌ ರಸಗೊಬ್ಬರಗಳ ಬೆಲೆ ಹೆಚ್ಚಿದೆ. ಆದ್ದರಿಂದ ಯೂರಿಯಾವನ್ನೇ ಹೆಚ್ಚು ಬಳಕೆ ಮಾಡಲಾಗುತ್ತಿದೆ.ಅಲ್ಲದೆ,ಬೆಳೆಗೆತಕ್ಕಂತೆಯೂರಿಯಾ ಬಳಸಬೇಕು. ಆದರೆ, ರೈತರು ಹೆಚ್ಚು ಹೆಚ್ಚು ಬೆಳೆಗೆ ಹಾಕುತ್ತಿದ್ದಾರೆ. ಇದರಿಂದ ಭತ್ತದ ಕಾಳುಗಳು ಜೊಳ್ಳು ಬೀಳುವ ಸಾಧ್ಯತೆ ಇದೆ ಎಂದರು.

ರಸಗೊಬ್ಬರ ಸಂಗ್ರಹಿಸಿದವರ ಮೇಲೆ ದಾಳಿ:ರಸಗೊಬ್ಬರಗಳನ್ನು ಖರೀದಿಸಿ, ಶೇಖರಿಸಿರುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಕೆ.ಆರ್‌.ಪೇಟೆಯ ಶ್ರೀವೆಂಕಟೇಶ್ವರ ಆಗ್ರೋ ಟ್ರೇಡರ್ನ ಮಾಲೀಕ ರಸಗೊಬ್ಬರ ಸಂಗ್ರಹಿಸಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿ ಸುಮಾರು 15 ಟನ್‌ ರಸಗೊಬ್ಬರ ವಶಪಡಿಸಿಕೊಳ್ಳಲಾಗಿತ್ತು. 21 ದಿನಗಳ ಕಾಲ ಪರವಾನಗಿ ಅಮಾನತ್ತಿನಲ್ಲಿಡಲಾಗಿದೆ ಎಂದರು.

ಸಾವಯವ ಹೆಸರಿನಲ್ಲಿ ಕೆಮಿಕಲ್ಸ್‌ ಮಾರಾಟ:  ಜಿಲ್ಲೆಯಲ್ಲಿ ಸಾವಯವ ಬೆಳೆಗಳ ಹೆಸರಿನಲ್ಲಿ ಕೀಟ ನಾಶಕಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಕೆಮಿಕಲ್ಸ್‌ಗಳನ್ನು ಸಂಗ್ರಹಿಸಿ ಲ್ಯಾಬ್‌ ಕಳುಹಿಸಲಾಗಿತ್ತು. ವರದಿಯಲ್ಲಿ 10 ಕೆಮಿಕಲ್ಸ್‌ಗಳು ಇರುವುದು ಪತ್ತೆಯಾಗಿದೆ. ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ಮಾರಾಟ ಮಾಡಬೇಕು. ಆದರೆ, ಸಾವಯವ ಹೆಸರಿನಲ್ಲಿ ಮಾರಾಟ ಮಾಡಿದರೆ ಯಾವುದೇ ಅನುಮತಿ ಬೇಕಾಗಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಮಂಡ್ಯ 1, ಪಾಂಡವಪುರ 1 ಹಾಗೂ ಕೆ.ಆರ್‌.ಪೇಟೆಯ 2 ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಅವರ ಪರವಾನಗಿ ರದ್ದು ಮಾಡಲಾಗಿದೆ ಎಂದು ತಿಳಿಸಿದರು.

10.70 ಲಕ್ಷ ಪ್ಲಾಟ್‌ ಬೆಳೆ ಸರ್ವೆ :  ಜಿಲ್ಲೆಯಲ್ಲಿ 16,92,786 ಬೆಳೆ ಪ್ಲಾಟ್‌ ಇದ್ದು, ಇದುವರೆಗೂ 10.70 ಲಕ್ಷ ಪ್ಲಾಟ್‌ ಬೆಳೆ ಸರ್ವೆ ಮಾಹಿತಿ ದಾಖಲಿಸಲಾಗಿದೆ. ಸೆ.23ರವರೆಗೆ ರೈತರು ತಮ್ಮ ಮೊಬೈಲ್‌ ಆಪ್‌ ಮೂಲಕ ಬೆಳೆ ಸರ್ವೆ ನಡೆಸಿ ಮಾಹಿತಿ ನಮೂದಿಸಲು ಅವಕಾಶ ನೀಡಲಾಗಿದೆ. ಇದುವರೆಗೂ 3.89 ಲಕ್ಷ ಪ್ಲಾಟ್‌ಗಳ ಬೆಳೆಯ ಸರ್ವೆಯ ಮಾಹಿತಿಯನ್ನು ರೈತರೇ ಅಪ್‌ಲೋಡ್‌ ಮಾಡಿದ್ದಾರೆ. 6.70 ಲಕ್ಷ ಪ್ಲಾಟ್‌ ಬೆಳೆಯ ಸರ್ವೆಯನ್ನು ಖಾಸಗಿ ವ್ಯಕ್ತಿಗಳು ಮಾಡಿದ್ದಾರೆ. ಇನ್ನುಳಿದ6.70 ಲಕ್ಷ ಪ್ಲಾಟ್‌ನ ಬೆಳೆ ಸರ್ವೆ ಕಾರ್ಯ ನಡೆಯುತ್ತಿದೆ. ರೈತರು ಮಾಹಿತಿಯನ್ನು ಸರಿಯಾಗಿ ಮಾಡಿದ್ದಾರೋ ಇಲ್ಲವೋ ಎಂಬುದನ್ನು ಬೆಳೆ ದರ್ಶಕ್‌ 2020 ಮೊಬೈಲ್‌ ಆಪ್‌ ಮೂಲಕ ತಿಳಿದುಕೊಳ್ಳಬಹುದು. ತಪ್ಪಿದ್ದರೆ ಮತ್ತೆ ಸರಿಯಾಗಿ ಅಪ್‌ಡೇಟ್‌ ಮಾಡಬಹುದಾಗಿದೆ ಎಂದುಕೃಷಿ ಜಂಟಿ ನಿರ್ದೇಶಕ ಚಂದ್ರಶೇಖರ್‌ ತಿಳಿಸಿದರು.

ಶೇ.98ರಷ್ಟು ಬಿತ್ತನೆ :  ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯಾದ್ಯಂತ ಶೇ.98ರಷ್ಟು ಬಿತ್ತನೆ ಕಾರ್ಯ ನಡೆದಿದೆ. ರಾಗಿ, ಭತ್ತ, ಮುಸುಕಿನ ಜೋಳ, ಉದ್ದು, ಹೆಸರು, ಆಲಸಂದೆ, ಅವರೆ, ನೆಲಗಡಲೆ, ತನಿ ಕಬ್ಬು, ಕೂಳೆ ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಹಾಕಲಾಗಿದೆ. ಕೃಷಿ ಇಲಾಖೆಯಿಂದ 1,96,491 ಹೆಕ್ಟೇರ್‌ ಪ್ರದೇಶದ ಬಿತ್ತನೆ ಗುರಿ ಹೊಂದಲಾಗಿತ್ತು. ಇದುವರೆಗೂ 1,73,994 ಹೆಕ್ಟೇರ್‌ಪ್ರದೇಶಬಿತ್ತನೆಯಾಗಿದೆ.ಕಳೆದವರ್ಷಇದೇಅವಧಿಯಲ್ಲಿ 1,29,924 ಹೆಕ್ಟೇರ್‌ ಪ್ರದೇಶ ಮಾತ್ರ ಬಿತ್ತನೆಯಾಗಿತ್ತು.

ಶೇ.28.7ರಷ್ಟು ಹೆಚ್ಚು ಮಳೆ : ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ.28.7ರಷ್ಟು ಹೆಚ್ಚುವರಿ ಮಳೆಯಾಗಿದೆ. ಏಪ್ರಿಲ್‌ನಿಂದ ಸೆ.21ರವರೆಗೆ ಸರಾಸರಿ ವಾಡಿಕೆ ಮಳೆ 429 ಮಿ.ಮೀ ಇತ್ತು. ಆದರೆ,ಈಬಾರಿ 552.2 ಮಿ.ಮೀ ಮಳೆಯಾಗಿದೆ. ಕೆ.ಆರ್‌.ಪೇಟೆ 485.1, ಮದ್ದೂರು 565.7, ಮಳವಳ್ಳಿ 551.1, ಮಂಡ್ಯ 523.1, ನಾಗಮಂಗಲ 581.3, ಪಾಂಡವಪುರ 584.3, ಶ್ರೀರಂಗಪಟ್ಟಣ 574.6 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

festcide

Mandya: ಭ್ರೂಣ ಹತ್ಯೆ ತಲೆಮರೆಸಿಕೊಂಡಿದ್ದ 12 ಆರೋಪಿಗಳ ಬಂಧನ

Malavalli: ಸಾರಿಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು…

Malavalli: ಸಾರಿಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು…

Bommai

Governer Procicution: ಹೈಕೋರ್ಟ್‌ ತೀರ್ಪಿನ ಮೇಲೆ ಸಿಎಂ ಸ್ಥಾನ ನಿರ್ಧಾರ: ಬೊಮ್ಮಾಯಿ

suicide (2)

Mandya; ರೋಡ್ ರೋಮಿಯೋಗಳ ಕಿರುಕುಳ: 14 ವರ್ಷದ ವಿದ್ಯಾರ್ಥಿನಿ ಆತ್ಮಹ*ತ್ಯೆ

1-wwwww

BJP 12 ವರ್ಷಗಳಿಂದ ತುಕ್ಕು ಹಿಡಿದಿದ್ದ ಪ್ರಕರಣಕ್ಕೆ ಜೀವ ನೀಡಿದೆ: ಸಚಿವ ಮಧು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.