ಸಾಮಾನ್ಯ ಸಭೆಯಲ್ಲಿ ಶವಪರೀಕ್ಷೆ ಜಟಾಪಟಿ


Team Udayavani, Jan 29, 2019, 7:24 AM IST

samanya.jpg

ಮಂಡ್ಯ: ಸರ್ಕಾರಿ ಆಸ್ಪತ್ರೆಗಳಲ್ಲಿ ಶವ ಪರೀಕ್ಷೆಗೆ ವಿನಾಕಾರಣ ವಿಳಂಬ ಮಾಡುವುದು, ಕುಟುಂಬದವರನ್ನು ದಿನಗಟ್ಟಲೆ ಕಾಯಿಸುವುದು ಅಮಾನವೀಯತೆ. ನಿಗದಿತ ಸಮಯಕ್ಕೆ ಶವ ಪರೀಕ್ಷೆ ನಡೆಸುವುದು ವೈದ್ಯರ ಜವಾಬ್ದಾರಿ. ಕರ್ತವ್ಯ ನಿರ್ವಹಣೆಗೆ ನಿರ್ಲಕ್ಷ್ಯ ತೋರಿದರೆ ಆ ವೈದ್ಯರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು.

ಇದು ಸೋಮವಾರ ಜಿಪಂ ಸಭಾಂಗಣದಲ್ಲಿ ನಡೆದ ಜ.21ರ ಮುಂದುವರಿದ ಸಾಮಾನ್ಯ ಸಭೆಯಲ್ಲಿ ವೈದ್ಯರಿಗೆ ಕೇಳಿಬಂದ ಎಚ್ಚರಿಕೆ ನುಡಿ. ಮದ್ದೂರು ತಾಲೂಕು ತೊಪ್ಪನಹಳ್ಳಿ ದೇವಸ್ಥಾನದ ಕಾವಲುಗಾರ ಕೊಲೆಯಾದಾಗ ಶವಪರೀಕ್ಷೆ ನಡೆಸಲು ತಾಲೂಕು ಆಸ್ಪತ್ರೆ ವೈದ್ಯರು ಜಗಳವಾಡಿದ ವಿಷಯ ಪ್ರಸ್ತಾಪಗೊಂಡು ಅಂತಿಮವಾಗಿ ಶವಪರೀಕ್ಷೆಗೆ ನಿರ್ಲಕ್ಷ್ಯ ತೋರುವವರನ್ನೇ ಜವಾಬ್ದಾರಿ ಮಾಡಲು ತೀರ್ಮಾನಿಸಲಾಯಿತು.

ಶವ ಪರೀಕ್ಷೆ ಕದನ: ತೊಪ್ಪನಹಳ್ಳಿ ದೇವಸ್ಥಾನದ ಹುಂಡಿ ಹಣ ಲೂಟಿ ಮಾಡಿದ ದರೋಡೆಕೋರರಿಂದ ಕೊಲೆಯಾದ ಬಸವರಾಜು ಶವವನ್ನು ಮದ್ದೂರು ತಾಲೂಕು ಆಸ್ಪತ್ರೆಗೆ ತಂದು ಪೊಲೀಸರು ಮೆಮೋ ನೀಡಿದರೂ ಕರ್ತವ್ಯನಿರತ ವೈದ್ಯರೇ ಶವ ಪರೀಕ್ಷೆ ನಡೆಸುವ ವಿಚಾರವಾಗಿ ಕದನಕ್ಕಿಳಿದರು. ಕೊನೆಗೆ ತಾಲೂಕು ಆರೋಗ್ಯ ಅಧಿಕಾರಿಯೇ ಶವಪರೀಕ್ಷೆ ನಡೆಸು ವಂತಾಯಿತು. ಕರ್ತವ್ಯಲೋಪವೆಸಗಿದ ವೈದ್ಯರ ವಿರುದ್ಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕೈಗೊಂಡ ಕ್ರಮವೇನು ಎಂದು ಸದಸ್ಯ ಬೋರಯ್ಯ ಪ್ರಶ್ನಿಸಿದರು.

ತಪ್ಪು ಮಾಹಿತಿ ಬೇಡ: ಪೊಲೀಸ್‌ ವಿಚಾರಣಾ ಪ್ರಕ್ರಿಯೆ ಮುಂದು ವರಿದಿದ್ದರಿಂದ ಶವಪರೀಕ್ಷೆ ನಡೆಸಲು ವಿಳಂಬ ವಾಯಿತು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ಉತ್ತರಿಸಿದರು. ಈ ಮಾತು ಕೇಳಿ ಎದ್ದು ನಿಂತ ಸದಸ್ಯ ದೇವರಾಜು, ಪೊಲೀಸರು ವಿಚಾರಣೆ ಪ್ರಕ್ರಿಯೆ ಮುಗಿಸಿಕೊಂಡೇ ಆಸ್ಪತ್ರೆಗೆ ಶವವನ್ನು ತಂದಿರುತ್ತಾರೆ. ಅವರು ಮೆಮೋ ಕೊಟ್ಟ ಕೂಡಲೇ ಶವಪರೀಕ್ಷೆ ನಡೆಸುವುದು ವೈದ್ಯರ ಕರ್ತವ್ಯ.

ಅದರಿಂದ ವಿಮುಖರಾದರೆ ಕರ್ತವ್ಯ ಲೋಪವಾಗುತ್ತದೆ. ವೈದ್ಯರು ತಪ್ಪನ್ನು ಮುಂದಿಟ್ಟು ಕೊಂಡು ಇಲ್ಲದ ಕಾರಣ ಹೇಳಿ ತಪ್ಪು ಮಾಹಿತಿ ನೀಡಬಾರದು ಎಂದು ಹೇಳಿದರು. ಇದು ಮದ್ದೂರು ಆಸ್ಪತ್ರೆ ಒಂದೇ ಅಲ್ಲ, ಎಲ್ಲಾ ಆಸ್ಪತ್ರೆಗಳಲ್ಲೂ ಕರ್ತವ್ಯನಿರತ ವೈದ್ಯರು ಶವ ಪರೀಕ್ಷೆ ನಡೆಸಲು ವಿಳಂಬ ಮಾಡುತ್ತಿದ್ದಾರೆ ಎಂದು ಸದಸ್ಯ ಎ.ರಾಜೀವ್‌ ಹೇಳಿದರು.

ವೈದ್ಯರ ಕೆಲಸ: ಕೊನೆಗೆ ಶವ ಪರೀಕ್ಷೆ ನಡೆಸುವುದು ಕರ್ತವ್ಯ ದಲ್ಲಿರುವ ವೈದ್ಯರ ಕೆಲಸ. ಯಾವುದೇ ಸಂದರ್ಭದಲ್ಲಿ ಬಂದರೂ ಕರ್ತವ್ಯದಲ್ಲಿರುವ ವೈದ್ಯರೇ ಅದನ್ನು ಪೂರ್ಣಗೊಳಿಸಿ ಹೋಗಬೇಕು. ಇಲ್ಲವಾದಲ್ಲಿ ಅವರನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಯಾಲಕ್ಕೀಗೌಡ ತಿಳಿಸಿದರು.

ಕಟ್ಟಡವಿದ್ದರೂ ಇಲ್ಲವೆಂದ ಡಿಎಚ್ಒ: ನನ್ನ ಕ್ಷೇತ್ರದ ವ್ಯಾಪ್ತಿಗೆ 9 ಊರುಗಳು ಬರುತ್ತವೆ. ಕ್ಷೇತ್ರದ ಮುಂಡುಗದೊರೆಯಲ್ಲಿ ಆಸ್ಪತ್ರೆಯೂ ಇದೆ. ಎಎನ್‌ಎಂ ವಸತಿಗೃಹವೂ ಇದೆ. ಆದರೆ, ಒಬ್ಬ ಡಾಕ್ಟರ್‌, ಒಬ್ಬ ನರ್ಸ್‌ ಕೂಡ ಇಲ್ಲ. ಹಾಗಾದರೆ ಆ ಊರಿನ ಜನ ಚಿಕಿತ್ಸೆಗೆ ಎಲ್ಲಿಗೆ ಹೋಗಬೇಕು ಎಂದು ಕೆ.ಶೆಟ್ಟಹಳ್ಳಿ ಜಿ.ಪಂ ಸದಸ್ಯ ಮರಿಯಪ್ಪ ಪ್ರಶ್ನಿಸಿದರು.

ಮುಂಡುಗದೊರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಎಎನ್‌ಎಂ ಕ್ಲಿನಿಕ್‌, ವಸತಿಗೃಹ ಇರುವ ವಿಷಯವಾಗಿ ಗೊಂದಲಕ್ಕೊಳಗಾದ ಡಿಎಚ್ಒ, ಆ ಊರಿನಲ್ಲಿ ಆಸ್ಪತ್ರೆ ಕಟ್ಟಡವೇ ಇಲ್ಲ ಎಂದು ಸಭೆಗೆ ಮಾಹಿತಿ ನೀಡಿದರು. ಇದರಿಂದ ಗರಂ ಆದ ಸದಸ್ಯ ಮರಿಯಪ್ಪ, ನಾನು ಅದೇ ಊರಿನವನು ಕಣ್ರೀ. ಅಲ್ಲಿ ಆಸ್ಪತ್ರೆನೂ ಇದೆ. ಎಎನ್‌ಎಂ ವಸತಿಗೃಹವೂ ಇದೆ.

ಅಲ್ಲಿ ಆಸ್ಪತ್ರೆ ಕಟ್ಟಡ ಇರೋ ವಿಚಾರ ನಿಮಗೇ ಗೊತ್ತಿಲ್ಲ ಅಂದ್ರೆ ಹೆಂಗ್ರಿ ಎಂದು ಹೇಳಿದಾಗ ತಾಲೂಕು ಆರೋಗ್ಯಾಧಿಕಾರಿ ಕೇಳಿ ಹೇಳುತ್ತೇನೆ ಎಂದು ಡಿಎಚ್ಒ ಹೇಳಿದರು. ತಾಲೂಕು ಆರೋಗ್ಯಾಧಿಕಾರಿ ಹೇಳುವುದಾದರೆ ನೀವ್ಯಾಕೆ ಸಭೆಗೆ ಬಂದಿರಿ. ಸಭೆಗೆ ಬರುವಾಗ ಎಲ್ಲಾ ಮಾಹಿತಿ ತೆಗೆದುಕೊಂಡು ಬರಬೇಕು ತಾನೇ. ಇಲ್ಲವಾದರೆ ತಾಲೂಕು ಅಧಿಕಾರಿಗಳನ್ನೂ ಸಭೆಗೆ ಕರೆಸುವಂತೆ ಸದಸ್ಯರು ಒತ್ತಾಯಿಸಿದರು.

ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳನ್ನು ಸಾಮಾನ್ಯ ಸಭೆಗೆ ಕರೆಸುವುದಿಲ್ಲ. ಅದಕ್ಕೆ ಸ್ಥಳಾವಕಾಶವೂ ಇಲ್ಲ ಎಂದು ಸಿಇಒ ಹೇಳಿದಾಗ, ಹಾಗಾದರೆ ಸಮರ್ಪಕವಾಗಿ ಮಾಹಿತಿ ನೀಡುವಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿ ಎಂದು ಸದಸ್ಯರು ಹೇಳಿದರು. ಸಭೆಯಲ್ಲಿ ಜಿ.ಪಂ ಅಧ್ಯಕ್ಷೆ ನಾಗರತ್ನಾ ಸ್ವಾಮಿ, ಉಪಾಧ್ಯಕ್ಷೆ ಪಿ.ಕೆ.ಗಾಯತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಟಿ.ಮಂಜು ಇದ್ದರು.

ಟಾಪ್ ನ್ಯೂಸ್

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

Shettar (3)

R. Ashoka ಪ್ರಕರಣವನ್ನು ಮುಡಾಕ್ಕೆ ಹೋಲಿಸಿದ್ದು ಸರಿಯಲ್ಲ:ಜಗದೀಶ ಶೆಟ್ಟರ್

1-rain-hebri

Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumaraswamy ಉಡಾಫೆ ಮಾತನಾಡುವುದು ಬಿಡಲಿ: ಸಚಿವ ಚಲುವರಾಯಸ್ವಾಮಿ

Kumaraswamy ಉಡಾಫೆ ಮಾತನಾಡುವುದು ಬಿಡಲಿ: ಸಚಿವ ಚಲುವರಾಯಸ್ವಾಮಿ

Mandya: ಕೆಎಸ್‌ಆರ್ ಟಿಸಿ ಬಸ್-‌ ಟೆಂಪೋ ಡಿಕ್ಕಿ; 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Mandya: ಕೆಎಸ್‌ಆರ್ ಟಿಸಿ ಬಸ್-‌ ಟೆಂಪೋ ಡಿಕ್ಕಿ; 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

CM-letter

CM Siddramaiah: “ರಾಜೀನಾಮೆ ನೀಡಬೇಡಿ’ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ

BIO-METRIC

Model for Schools: ಮಂಡ್ಯ ಸರಕಾರಿ ಶಾಲೆಗೆ ಫೇಸ್‌ ಬಯೋಮೆಟ್ರಿಕ್‌!

HDK-1

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್‌ಡಿಕೆ 

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

crimebb

Kasaragod ಅಪರಾಧ ಸುದ್ದಿಗಳು

13

Malpe: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.