
ಕೈಯ್ಯಲ್ಲಿ ಸ್ನೇಹಿತನ ರುಂಡ ಹಿಡಿದು ಪೊಲೀಸ್ ಠಾಣೆಗೆ ಬಂದ ಭೂಪ
Team Udayavani, Sep 30, 2018, 6:40 AM IST

ಮಳವಳ್ಳಿ: ತಾಯಿಯನ್ನು ಕೆಟ್ಟ ದೃಷ್ಟಿಯಿಂದ ನೋಡಿದ ಎಂಬ ಕಾರಣಕ್ಕೆ ಸ್ನೇಹಿತನ ತಲೆಯನ್ನು ಕತ್ತರಿಸಿ, ರುಂಡ ಹಿಡಿದು
ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಲ್ಲಿ ಶರಣಾದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ಶನಿವಾರ ನಡೆದಿದೆ.
ಚಿಕ್ಕಬಾಗಿಲು ಗ್ರಾಮದ ಗಿರೀಶ್ (29) ಕೊಲೆ ಆರೋಪಿ. ಈತ ಮತ್ತು ಪಶುಪತಿ ಇಬ್ಬರೂ ಸ್ನೇಹಿತರಾಗಿದ್ದರು. ಮೂರು ದಿನಗಳ ಹಿಂದೆ ಪಶುಪತಿ ತಾಯಿಗೆ ಗಿರೀಶ್ ಕೆಟ್ಟದಾಗಿ ಸನ್ನೆ ಮಾಡಿದ್ದ ಎನ್ನಲಾಗಿದೆ. ಇದಕ್ಕೆ ಪಶುಪತಿ ದ್ವೇಷ ಕಾರುತ್ತಿದ್ದ. ಬಳಿಕ, ಗಿರೀಶ, “ನಾನು ನಿನ್ನ ತಾಯಿಯನ್ನು ಬೈದಿಲ್ಲ, ಕೆಟ್ಟದಾಗಿ ನಡೆದುಕೊಂಡಿಲ್ಲ’ ಎಂದು ಕರ್ಪೂರ ಮುಟ್ಟಿ ಪ್ರಮಾಣ ಮಾಡಿ ಆತನಿಗೆ ಮನವರಿಕೆ ಮಾಡಿಕೊಟ್ಟಿದ್ದ. ಆದರೂ ಪಶುಪತಿಯ ದ್ವೇಷ ಕಡಿಮೆ ಯಾಗಲಿಲ್ಲ. ಗಿರೀಶನನ್ನು ಕೊಲೆ ಮಾಡಲು ಆತ ಹೊಂಚು ಹಾಕಿದ್ದ. ಶುಕ್ರವಾರ ರಾತ್ರಿ ಗಿರೀಶ್ನ ಮನೆಗೆ ಬಂದು, ಸಿನಿಮಾ ನೋಡಲು ಹೋಗೋಣ ಬಾ ಎಂದು ಕರೆ ದಿದ್ದ. ಆದರೆ, ಗಿರೀಶ್ ಮಳೆ ಬರುವ ಹಾಗಿದೆ.
ಇವತ್ತು ಹೋಗೋದು ಬೇಡ ಎಂದಿದ್ದ.
24 ಕಿ.ಮೀ. ದೂರ ತಲೆ ಹಿಡಿದು ಓಡಾಡಿದ: ಶನಿವಾರ ಬೆಳಗ್ಗೆ ಮತ್ತೆ ಪಶುಪತಿ ಗಿರೀಶ್ನ ಮನೆಗೆ ಬಂದ. ಮನೆಯಲ್ಲಿ ತಿಂಡಿ ತಿನ್ನುತ್ತಿದ್ದ ಗಿರೀಶ ನನ್ನು, “ತುರ್ತು ಕೆಲಸ ಇದೆ ಬಾ’ ಎಂದು ಕರೆದ. ಬಳಿಕ, ಬೈಕ್ನಲ್ಲಿ ಗಿರೀಶನನ್ನು ಕೂರಿಸಿಕೊಂಡು ಗ್ರಾಮದ ಹೊರವಲಯದಲ್ಲಿರುವ ಕೊಳತೂರು ಕೆರೆ ಹತ್ತಿರ ಗಿರೀಶನನ್ನು ಕೆಳಗಿಳಿಸಿ, ಏಕಾಏಕಿ ಕೊಡಲಿಯಿಂದ ಹೊಡೆದ. ಕುಸಿದು ಬಿದ್ದ ಗಿರೀಶನ ಕತ್ತನ್ನು ಕತ್ತರಿಸಿ, ನಂತರ ಚಿಕ್ಕಬಾಗಿಲಿನಿಂದ ಹಂಗ್ರಾಪುರ ಗ್ರಾಮದ ಮಾರ್ಗವಾಗಿ ಸುಮಾರು 24 ಕಿ.ಮೀ.ದೂರ ತಲೆಯನ್ನು ಬೈಕ್ನಲ್ಲಿ ಇಟ್ಟುಕೊಂಡು ಓಡಾಡಿದ.
ಬಳಿಕ, ಗಿರೀಶನ ರುಂಡವನ್ನು ಕೈಯ್ಯಲ್ಲಿ ಹಿಡಿದುಕೊಂಡು ಪುರ ಪೊಲೀಸ್ ಠಾಣೆಗೆ ಬಂದ. ಪಶುಪತಿ ಯನ್ನು ಕಂಡ ಪೊಲೀಸರು
ಕ್ಷಣಕಾಲ ಆತಂಕಗೊಂಡರು. ತಕ್ಷಣವೇ ಆತನನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದೊಯ್ದರು. ಸ್ನೇಹಿತನಾಗಿದ್ದುಕೊಂಡು ನನ್ನ ತಾಯಿಯನ್ನೇ ಕೆಟ್ಟ ದೃಷ್ಟಿಯಿಂದ ನೋಡಿದ. ಅದಕ್ಕೇ ಅವನನ್ನು ಕೊಲೆ ಮಾಡಿ ರುಂಡವನ್ನು ಕತ್ತರಿಸಿ ತಂದಿದ್ದೇನೆಂದು ಹೇಳಿಕೆ ನೀಡಿದ್ದಾನೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್ಮಿಲ್ ಕುಸಿತ:7 ಮಂದಿಗೆ ಗಾಯ

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.