![Arrest](https://www.udayavani.com/wp-content/uploads/2025/02/Arrest-6-415x249.jpg)
![Arrest](https://www.udayavani.com/wp-content/uploads/2025/02/Arrest-6-415x249.jpg)
Team Udayavani, Nov 28, 2018, 6:00 AM IST
ಮಂಡ್ಯ: “ನಾನು ಕಾಂಗ್ರೆಸ್ ಸೇರಬೇಕಾದರೆ ನಮ್ಮ ಜಿಲ್ಲೆಯವರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು’. ಇಂತಹದ್ದೊಂದು ಷರತ್ತನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಎದುರು ಇಟ್ಟಿದ್ದು ಬೇರಾರೂ ಅಲ್ಲ, ರೆಬಲ್ ಸ್ಟಾರ್ ಅಂಬರೀಶ್.
ರಾಮನಗರ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದ ಅಂಬರೀಶ್ಗೆ ಮಂಡ್ಯ ಜಿಲ್ಲೆ ರಾಜಕೀಯ ಜನ್ಮ
ನೀಡಿತ್ತು. ಕಾಂಗ್ರೆಸ್ನಲ್ಲಿ ಅಂದು ಸೋಲಿಲ್ಲದ ಸರದಾರನಂತೆ ಮೆರೆಯುತ್ತಿದ್ದ ಜಿ.ಮಾದೇಗೌಡರಿಗೆ ಅಂಬರೀಶ್ ಸೋಲಿನ ಕಹಿ ಉಣಿಸಿದ್ದರು. ಮಂಡ್ಯ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಎಸ್.ಎಂ.ಕೃಷ್ಣ ಅವರು, ಅಂಬರೀಶ್ ಅವರನ್ನು ಪಕ್ಷಕ್ಕೆ ಸೆಳೆಯುವ ತಂತ್ರ ಹೂಡಿದರು.
ಷರತ್ತು ಒಪ್ಪಿದ್ದ ಸೋನಿಯಾ: ಅದು 1999ರ ಚುನಾವಣಾ ಸಮಯ. ಕರ್ನಾಟಕದಲ್ಲಿ ಎಸ್.ಎಂ.ಕೃಷ್ಣ ಪಾಂಚಜನ್ಯ ಮೊಳಗಿಸಲು ರೆಡಿಯಾಗಿದ್ದರು. ಆ ಸಮಯದಲ್ಲಿ ಜನತಾದಳದಲ್ಲಿ ಎಸ್.ಡಿ.ಜಯರಾಂ ಗರಡಿಯಲ್ಲಿ ಪ್ರಬಲ ರಾಜಕೀಯ ನಾಯಕರಾಗಿ ಬೆಳವಣಿಗೆ ಕಾಣುತ್ತಿದ್ದ ಅಂಬರೀಶ್ ಅವರನ್ನು ಎಸ್.ಎಂ.ಕೃಷ್ಣ ಅವರೇ ಖುದ್ದು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದರು. ಅದಕ್ಕೆ ಒಪ್ಪಿದ್ದ ಅಂಬರೀಶ್ ಅವರನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಬಳಿಗೆ ಕರೆದೊಯ್ದ ಸಮಯದಲ್ಲಿ ಅಂಬರೀಶ್ ಇಟ್ಟಿದ್ದು ಒಂದೇ ಷರತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಜವಾಬ್ದಾರಿ. ಆದರೆ, ಮಂಡ್ಯ ಜಿಲ್ಲೆಯವರನ್ನು ಮುಖ್ಯಮಂತ್ರಿ ಮಾಡಬೇಕು. ಇದಕ್ಕೆ ಒಪ್ಪಿದರೆ ನಾನು ಕಾಂಗ್ರೆಸ್ ಸೇರಲು ಸಿದ್ಧ ಎಂದು ಷರತ್ತು ಹಾಕಿದ್ದರು. ಅದನ್ನು ಸೋನಿಯಾ ಕೂಡ ಒಪ್ಪಿದ್ದರು.
ಅದರಂತೆ ಅಂದು ಕೃಷ್ಣ ನೇತೃತ್ವದಲ್ಲಿ ರಾಜ್ಯದಲ್ಲಿ ಪಾಂಚಜನ್ಯ ಮೊಳಗಿತು. ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂತು. ಅಂಬರೀಶ್ ಅವರೂ ಕೃಷ್ಣರ ಜೊತೆಗೂಡಿ ಎಲ್ಲೆಡೆ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಅಂಬರೀಶ್ಗೆ ಕೊಟ್ಟ ಮಾತಿನಂತೆ ಸೋನಿಯಾಗಾಂಧಿ ಎಸ್.ಎಂ.ಕೃಷ್ಣ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದರು. ಸಿ.ವಿ.ಶೈಲಜಾ ಸಂಪಾದಕತ್ವದಲ್ಲಿ ಹೊರ ಬಂದಿರುವ ಅಂಬರೀಶ್ ಅಭಿನಂದನಾ ಗ್ರಂಥದ ಕನ್ನಡ ಭಾಗದಲ್ಲಿ ಸ್ವತಃ ಅಂಬರೀಶ್ ಅವರೇ ನೀಡಿರುವ ಹೇಳಿಕೆಯನ್ನು
ದಾಖಲಿಸಲಾಗಿದೆ.
ಮಾನವೀಯತೆ
ಸರ್ಕಾರದ ಹಣವನ್ನಷ್ಟೇ ಅಲ್ಲದೆ ಸ್ವಂತ ಹಣವನ್ನು ಅನೇಕ ಜನೋಪಯೋಗಿ ಕೆಲಸಗಳಿಗೆ ಅಂಬಿ ನೀಡಿದ್ದಾರೆ. ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಗ್ರಾಮದ ಎಸ್.ಆರ್.ಕಂಠಿ ಎಂಬ ವಿಕಲಚೇತನ ಇಂಗ್ಲೆಂಡ್ನ ಬರ್ಮಿಂಗ್ ಹ್ಯಾಮ್ನಲ್ಲಿ ನಡೆಯಲಿದ್ದ ಕ್ರೀಡಾಕೂಟಕ್ಕೆ ತೆರಳಲು ತಗಲುವ ವಿಮಾನ ವೆಚ್ಚ 45 ಸಾವಿರ ರೂ., ಕಾರ್ಗಿಲ್ ಯುದಟಛಿದಲ್ಲಿ ಮಡಿದ ಜಿಲ್ಲೆಯ ಯೋಧನ
ಕುಟುಂಬಕ್ಕೆ 25 ಸಾವಿರ ರೂ., ಶ್ರೀರಂಗಪಟ್ಟಣ ತಾಲೂಕು ಹಂಗರಹಳ್ಳಿ ಜೀತ ಪ್ರಕರಣದಲ್ಲಿ ಸಿಲುಕಿದ್ದ ಸಂತ್ರಸ್ತರಿಗೆ ತಲಾ 25 ಸಾವಿರ ರೂ. ಹಾಗೂ ಕಿರುಗಾವಲು ತಾಲೂಕಿನ ಹೊಳಲು ಗ್ರಾಮದಲ್ಲಿ 7 ಹರಿಜನ ಕುಟುಂಬಗಳಿಗೆ ಬೆಂಕಿ ಬಿದ್ದು ನಿರಾಶ್ರಿತರಾಗಿದ್ದ
ಕುಟುಂಬಗಳಿಗೆ ತಲಾ 25 ಸಾವಿರ ರೂ. ಪರಿಹಾರ ನೀಡಿ ಮಾನವೀಯತೆ ಮೆರೆದಿದ್ದರು ಅಂಬರೀಶ್.
ಚಿಕಿತ್ಸೆಗೆ ಪ್ರಧಾನಿ ನಿಧಿ ಕೊಡಿಸಿದ್ದ ಏಕೈಕ ಸಂಸದ
ಸಂಸದರ ನಿಧಿಯನ್ನು ಸಂಪೂರ್ಣವಾಗಿ ಬಳಸಿಕೊಂಡು ಅನೇಕ ಜನೋಪಯೋಗಿ ಕೆಲಸಗಳನ್ನು ಮಾಡಿದ ಸಂಸದ ಎಂಬ ಹೆಗ್ಗಳಿಕೆಗೆ
ಅಂಬರೀಶ್ ಪಾತ್ರರಾಗಿದ್ದಾರೆ. ಅದೇ ರೀತಿ, ಪ್ರಧಾನಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಪಡೆದು ಕಾಯಿಲೆಯಿಂದ ಬಳಲುತ್ತಿದ್ದ ರೋಗಿಗಳ ಚಿಕಿತ್ಸೆಗೂ ಹಣ ನೀಡಿದ ಹೆಗ್ಗಳಿಕೆ ಅಂಬರೀಶ್ಗೆ ಸಲ್ಲುತ್ತದೆ. 2000ರಲ್ಲಿ ಹೃದಯ ರೋಗದಿಂದ ಬಳಲುತ್ತಿದ್ದ ಸುಮಾರು 25 ರೋಗಿಗಳಿಗೆ ತೆರೆದ ಹೃದಯದ ಶಸOಉಚಿಕಿತ್ಸೆಗಾಗಿ ತಲಾ 20ರಿಂದ 30 ಸಾವಿರ ರೂ., ಕ್ಯಾನ್ಸರ್ ರೋಗಕ್ಕೆ ತುತ್ತಾದ 9
ರೋಗಿಗಳ ಚಿಕಿತ್ಸೆಗೆ ತಲಾ 30 ಸಾವಿರ ರೂ., ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 17 ರೋಗಿಗಳ ಚಿಕಿತ್ಸೆಗೂ ಪ್ರಧಾನಮಂತ್ರಿಗಳ ಪರಿಹಾರ ನಿಧಿಯಿಂದ ಸಹಾಯಧನ ನೀಡಿ ಬದುಕಿಗೆ ದಾರಿ ತೋರಿಸಿದ ಹೃದಯವಂತ ಎನಿಸಿದ್ದರು.
ಮಂಡ್ಯ ಮಂಜುನಾಥ್
You seem to have an Ad Blocker on.
To continue reading, please turn it off or whitelist Udayavani.