![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, May 12, 2020, 10:33 AM IST
ಮಂಡ್ಯ: ಮುಂಬೈ ಪ್ರಯಾಣದಿಂದ ಕೆ.ಆರ್.ಪೇಟೆ ಹಾಗೂ ಚನ್ನರಾಯಪಟ್ಟಣ ತಾಲೂಕಿನ ಇಬ್ಬರಿಗೆ ಕೋವಿಡ್ -19 ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಪತ್ತೆಯಾಗಿದ್ದ 28 ಪ್ರಕರಣ ಗಳೊಂದಿಗೆ ಇದೀಗ ಮತ್ತೆರಡು ಪ್ರಕರಣ ಸೇರಿ ಒಟ್ಟು 30ಕ್ಕೇರಿದೆ. ಕೆ.ಆರ್.ಪೇಟೆ ತಾಲೂಕಿನ ಹೊನ್ನೇನಹ ಳ್ಳಿಯ 38 ವರ್ಷದ ಯುವಕ ಹಾಗೂ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಗುಳೇಹೊನ್ನೇನಹಳ್ಳಿಯ 30 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಅವರಿಗೆ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ತಿಳಿಸಿದರು.
ಹೊನ್ನೇನಹಳ್ಳಿಯ ವ್ಯಕ್ತಿ 25 ವರ್ಷದಿಂದ ಮುಂಬೈ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ಡೌನ್ ಸಡಿಲ ಗೊಂಡಿದ್ದರಿಂದ ಈತ ಮೇ 4ರಂದು ಕಾಲ್ನಡಿಗೆಯಲ್ಲೇ ಮುಂಬೈನಿಂದ ಹೊರಟು, ಮೇ 5ರಂದು ಪೂನಾಗೆ ಬಂದು ಸ್ನೇಹಿತರ ಮನೆಯಲ್ಲಿ ಉಪಾಹಾರ ಸೇವಿಸಿ, ಅಲ್ಲಿಂದ ಟ್ರಕ್ ವೊಂದರಲ್ಲಿ 6 ಮಂದಿ ಸ್ನೇಹಿತರೊಂದಿಗೆ ಬೆಂಗಳೂರು ತಲುಪಿ, 7ರಂದು ಸಂಜೆ 4 ಗಂಟೆಗೆ ನಾಗಮಂಗಲ ತಾಲೂಕು ಬೆಳ್ಳೂರು ಕ್ರಾಸ್ಗೆ ಬಂದಿದ್ದಾರೆ. ಬೆಳ್ಳೂರು ಕ್ರಾಸ್ನಿಂದ ಟಾಟಾ ಏಸ್ ವಾಹ ನದಲ್ಲಿ ಬೋಗಾದಿಗೆ ಬಂದು, ಕೆ.ಆರ್. ಪೇಟೆ ತಾಲೂಕು ಹೊನ್ನೇನಹಳ್ಳಿಗೆ ಬಂದಿ ದ್ದಾರೆ.
ಈ ವಿಚಾರ ತಿಳಿದ ತಾಲೂಕು ಆಡಳಿತ ಎಲ್ಲರನ್ನೂ ಕ್ವಾರಂಟೈನ್ಗೆ ಒಳಪಡಿ ಸಿತ್ತು. ಮೇ 9ರಂದು ಗಂಟಲ ದ್ರವ ಪರೀಕ್ಷಿಸಿದಾಗ ಸದರಿ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದರು. ಮತ್ತೂಬ್ಬ ಮಹಿಳೆ ಹಾಸನದ ಚನ್ನರಾಯ ಪಟ್ಟಣ ತಾಲೂಕು ಗುಳೇಹೊನ್ನೇನಹಳ್ಳಿ ಯವರು. ಈಕೆ ಮುಂಬೈ ಕ್ಯಾಂಟೀನೊಂದರಲ್ಲಿ ಕೆಲಸ ಮಾಡು ತ್ತಿದ್ದರು. ಮೇ 6ರಂದು ಕೆ.ಆರ್. ಪೇಟೆಗೆ ಬಂದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೇ 8ರಂದು ಅವರ ಗಂಟಲ ದ್ರವ ಪರೀಕ್ಷೆಗೊಳಪಡಿಸಿದಾಗ ಸೋಂಕು ದೃಢ ಪಟ್ಟಿದೆ ಎಂದು ವಿವರಿಸಿದರು.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.