
ಮಳೆಯಿಂದ ಜನಜೀವನ ಅಸ್ತವ್ಯಸ್ತ; ಯಳಂದೂರು ತಾಲೂಕಿನಲ್ಲಿ ಕಳೆದ 3ದಿನಗಳಿಂದ ನಿರಂತರ ಮಳೆ
Team Udayavani, Aug 6, 2020, 11:20 AM IST

ಸಾಂದರ್ಭಿಕ ಚಿತ್ರ
ಯಳಂದೂರು: ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದಲೂ ನಿರಂತರ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತಿನಿತ್ಯ ಮೋಡಕವಿದ ವಾತಾವರಣವಿದ್ದು, ಕೆಲವೊಮ್ಮೆ ತುಂತುರು ಹಾಗೂ ಜೋರು ಗಾಳಿ, ಮಳೆ ಸುರಿಯುತ್ತಿದ್ದು ವಾತಾವರಣ ತಂಪಾಗಿದೆ. ಬೀದಿ ಬದಿ ವ್ಯಾಪಾರಿಗಳು, ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ವಿವಿಧ ಕೆಲಸಗಳಿಗೆ ಬರುವ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂತೆಯಲ್ಲೂ ಕಾಡಿದ ಮಳೆ: ಜಿಲ್ಲೆಯಲ್ಲಿ ಸಂತೆ ನಡೆಸಲು ಅನುಮತಿ ನೀಡಲಾಗಿದ್ದು, ಮಂಗಳವಾರ ಸಂತೆಮರಹಳ್ಳಿಯಲ್ಲಿ ನಡೆದ ಸಂತೆಗೂ ಮಳೆ ಕಾಟ
ಕೊಟ್ಟಿತು. ವ್ಯಾಪಾರಿ ಹಾಗೂ ಗ್ರಾಹಕರು ಬಹುದಿನಗಳ ನಂತರ ಸಂತೆಯಲ್ಲಿ ವ್ಯವಹರಿಸಲು ಬಂದಿದ್ದರು. ಸಂಖ್ಯೆ ಕಡಿಮೆ ಇದ್ದರೂ ವ್ಯಾಪಾರಿಗಳಿಗೆ ಮಳೆಯಿಂದ
ತೊಂದರೆಯಾಯಿತು. ಮೈಸೂರು ರಸ್ತೆ ಕಾಮಗಾರಿ ಇನ್ನೂ ಆರಂಭವಾಗದ ಕಾರಣ ಈ ರಸ್ತೆಯಲ್ಲಿರುವ ಹಳ್ಳಗಳಲ್ಲಿ ನೀರು, ಕೆಸರು ತುಂಬಿ ವಾಹನ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ ಎಂದು ಸ್ಥಳೀಯ ಶ್ರೀನಿವಾಸ್ ದೂರಿದರು.
ಪ್ರವಾಸಿಗರು ಹೆಚ್ಚಳ: ಪ್ರಸಿದ್ಧ ಪ್ರವಾಸಿ ತಾಣವಾಗಿರು ಬಿಳಿಗಿರಿರಂಗನ ಬೆಟ್ಟದಲ್ಲೂ ಎಡೆಬಿಡದೆ ಮಳೆ ಸುರಿಯುತ್ತಿದೆ. ಇಲ್ಲಿಗೆ ಇದ್ದ ಪ್ರವೇಶ ನಿರ್ಬಂಧ ತೆರವುಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಹಸಿರು ಹೊದ್ದು ಮಲಗಿರುವ ಗಿರಿ ಸಾಲುಗಳು, ಮಳೆಯ ಆನಂದ ಹಾಗೂ ಮಳೆ ನಿಂತಾಗ
ಚಿಣ್ಣಾಟ ಆಡುವ ಮೋಡಗಳ ಸಾಲು, ಮಂಜಿನ ಅನುಭವವನ್ನು ಪ್ರವಾಸಿಗರು ಅನುಭವಿಸಲು ಗುಂಪು ಗುಂಪಾಗಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದು, ಪ್ರಕೃತಿಯ
ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ

Maddur; ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹ*ತ್ಯೆ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
MUST WATCH
ಹೊಸ ಸೇರ್ಪಡೆ

BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್!

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.