![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Dec 11, 2020, 7:35 PM IST
Representative Image
ಮಂಡ್ಯ : ಕುಡಿದ ಮತ್ತಿನಲ್ಲಿ ಮಾವನನ್ನು ಕೊಂದ ಅಳಿಯ
ಮಂಡ್ಯ: ಕುಡಿದ ಅಮಲಿನಲ್ಲಿದ್ದ ಅಳಿಯನೊಬ್ಬ ತನ್ನ ಮಾವನನ್ನು ನಡುಬೀದಿಯಲ್ಲಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಗ್ರಾಮದ ಲಾರಿ ಚಾಲಕ ಸುರೇಶ್(50) ಮೃತ ವ್ಯಕ್ತಿ. ಈತನ ಅಳಿಯ ಟಿಪ್ಪರ್ ಚಾಲಕ ರಘು ಅಲಿಯಾಸ್ ಜಿಮ್ಮಿ ಕೊಲೆ ಮಾಡಿದ ವ್ಯಕ್ತಿಯಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ವಿವರ:
ಮೂಲತಃ ಅರಕಲಗೂಡು ತಾಲ್ಲೂಕಿನವರಾದ ಮೃತ ಸುರೇಶ್ 20 ವರ್ಷದ ಹಿಂದೆ ಚಿನಕುರಳಿ ಗ್ರಾಮಕ್ಕೆ ಬಂದು ಡ್ರೈವರ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನು. 7 ವರ್ಷದ ಹಿಂದೆ ತಮ್ಮ ಮಗಳನ್ನು ಟಿಪ್ಪರ್ ಚಾಲಕ ಚಿನಕುರಳಿ ಗ್ರಾಮದ ರಘು ಅಲಿಯಾಸ್ ಜಿಮ್ಮಿ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು.
ತೀವ್ರ ಕುಡಿತದ ಚಟ ಹೊಂದಿದ್ದ ರಘು ಜತೆ ಸಂಸಾರ ಮಾಡಲು ಕಷ್ಟ ಎಂದು ಆತನ ಹೆಂಡತಿ ಕೆಲ ದಿನಗಳ ಹಿಂದೆ ತನ್ನ ಇಬ್ಬರು ಮಕ್ಕಳೊಂದಿಗೆ ತವರಿಗೆ ಬಂದಿದ್ದಳು. ಹೆಂಡತಿಯನ್ನು ವಾಪಸ್ ಕಳುಹಿಸಿ ಎಂದು ರಘು, ಮಾವ ಸುರೇಶ್ನನ್ನು ಹಲವಾರು ಬಾರಿ ಕೇಳಿಕೊಂಡಿದ್ದಾನೆ. ಸುರೇಶ್ ಮಗಳನ್ನು ಕಳುಹಿಸಿರಲಿಲ್ಲ. ಇದರಿಂದ ಬೇಸತ್ತ ರಘು, ಗುರುವಾರ ರಾತ್ರಿ ಚಿನಕುರಳಿ ಗ್ರಾಮದ ಟೀ ಅಂಗಡಿಯಲ್ಲಿ ಸುರೇಶ್ ಟೀ ಕುಡಿಯುತ್ತಿದ್ದ ವೇಳೆ ಕೊಡಲಿಯಿಂದ ಮಾವನ ತಲೆ ಮತ್ತು ಹೊಟ್ಟೆಗೆ ಹೊಡೆದಿದ್ದಾನೆ. ಈ ವೇಳೆ ಸುರೇಶ್ಗೆ ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಪಾoಡವಪುರ ಪೊಲೀಸರು ರಘು ಅಲಿಯಾಸ್ ಜಿಮ್ಮಿ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.