![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Jan 1, 2022, 12:16 PM IST
ಸಾಂದರ್ಭಿಕ ಚಿತ್ರ
ಶ್ರೀರಂಗಪಟ್ಟಣ: ಬೀದಿ ನಾಯಿಗಳ ಹಿಂಡು ದಾಳಿ ಮಾಡಿ 5 ಮೇಕೆಗಳು, 1 ಟಗರನ್ನು ಕೊಂದು ಹಾಕಿವೆ.
ತಾಲೂಕಿನ ದೊಡ್ಡಗೌಡನ ಕೊಪ್ಪಲು ಗ್ರಾಮದ ನಿವಾಸಿ ಪಾಂಡು ಎಂಬುವರು ಗ್ರಾಮದ ಹೊರಗಿನ ತೋಟದ ಮನೆಯಲ್ಲಿ ಮೇಕೆಗಳನ್ನು ಸಾಕಿದ್ದರು. ಗುರುವಾರ ಸಂಜೆ ಕಾರ್ಯನಿಮಿತ್ತ ಶ್ರೀರಂಗಪಟ್ಟಣಕ್ಕೆ ತೆರಳಿದ್ದರು. ಪುತ್ರ ಪ್ರದೀಪ್ ಮೇಕೆಗಳನ್ನು ತೋಟದ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಮನೆಗೆ ತೆರಳಿದ್ದರು.
ಈ ವೇಳೆ ನಾಯಿಗಳ ಹಿಂಡು ದಾಳಿ ಮಾಡಿ ಕೊಂದು ಹಾಕಿವೆ. ಇದನ್ನು ಗಮನಿಸಿದ ಭಾಗ್ಯಮ್ಮ ಎಂಬವರು ನಾಯಿಗಳನ್ನು ಓಡಿಸಲು ಮುಂದಾದಾಗ ಅವರ ಮೇಲೂ ಎರಗಲು ಮುಂದಾಗಿವೆ. ಸ್ಥಳಕ್ಕೆ ಪಶು ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ರಾಘವೇಂದ್ರ ಭೇಟಿ ನೀಡಿ ಪರಿಶೀಲಿ ಸಿದರು. ಪಂಚನಾಮೆ ನಡೆಸಿ ಪರಿಹಾರ ಕೊಡಿಸುವ ಭರವಸೆ ನೀಡಿದರು.
You seem to have an Ad Blocker on.
To continue reading, please turn it off or whitelist Udayavani.