Irrigation scheme: ಗೂಡೆಹೊಸಹಳ್ಳಿ ಏತನೀರಾವರಿ ಯೋಜನೆಗೆ ಗ್ರಹಣ


Team Udayavani, Feb 10, 2024, 4:55 PM IST

Irrigation scheme: ಗೂಡೆಹೊಸಹಳ್ಳಿ ಏತನೀರಾವರಿ ಯೋಜನೆಗೆ ಗ್ರಹಣ

ಕಿಕ್ಕೇರಿ: ಹೋಬಳಿಯ ಗಡಿಭಾಗದಲ್ಲಿರುವ ಗೂಡೆಹೊಸಹಳ್ಳಿ ಬಹುಕೋಟಿ ಏತನೀರಾವರಿ ಯೋಜನೆ ಪೂರ್ಣಗೊಳ್ಳದೇ ರೈತರಿಗೆ ಮರೀಚಿಕೆ ಆಗಿದೆ.

ಹೋಬಳಿಯ ಗೂಡೆಹೊಸಹಳ್ಳಿ ಗ್ರಾಮದಲ್ಲಿ ಹೇಮಾವತಿ ನದಿ ಬಳಿ ನೀರು ಎತ್ತಿ ಬರಡು ಪ್ರದೇಶವಾದ ತಾಲೂಕಿನ ಅಘಲಯ, ಸಂತೆಬಾಚಹಳ್ಳಿ ಮತ್ತಿತರ ಪ್ರದೇಶಗಳಿಗೆ ಒದಗಿಸಲು ಏತ ನೀರಾವರಿ ಯೋಜನೆಗೆ ಪಂಪ್‌ಹೌಸ್‌ ನಿರ್ಮಾಣವಾಗಿದೆ. 207 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದೆ. ಕಾಮಗಾರಿ ಪೂರ್ಣ ವಾದರೆ ಚನ್ನರಾಯಪಟ್ಟಣ, ಕೆ.ಆರ್‌.ಪೇಟೆ, ನಾಗ ಮಂಗಲ ತಾಲೂಕಿನ ರೈತರ ಬದುಕು ಹಸನಾಗುತ್ತದೆ. ಜೊತೆಗೆ ತಾಲೂಕಿನ 69 ಕೆರೆ, 23 ಕಟ್ಟೆಗಳು ತುಂಬಲಿವೆ.

ಅಂತರ್ಜಲ ಕೂಡ ವೃದ್ಧಿಸಲಿದೆ. ಮೊದಲ ಹಂತವಾಗಿ ಗೂಡೆಹೊಸಹಳ್ಳಿ ಬಳಿಯ ಹೇಮಾವತಿ ನದಿಯಿಂದ ಅಘಲಯ ಕೆರೆಯವರೆಗೆ 17.5 ಕಿ.ಮೀ. ಪೈಪ್‌ (1.2 ಮೀ. ಅಗಲ) ಲೈನ್‌ ಅನ್ನು ಭೂಮಿ ಒಳಗೆ ಅಳವಡಿಸಲಾಗುತ್ತಿದೆ. ಇದೇ ರೀತಿ 2ನೇ ಹಂತದ ಕಾಮಗಾರಿ ಅಘಲಯ ಕೆರೆಯಿಂದ ಮುಂದುವರಿದು ನಡೆಯಬೇಕಿದೆ. ಬಹುತೇಕ ಪೈಪ್‌ಲೈನ್‌ ಅಳವಡಿಕೆ ಕೊನೆಯ ಘಟ್ಟಕ್ಕೆ ತಲುಪುವಂತಿದೆ. ಹಲವೆಡೆ ಪೈಪ್‌ಲೈನ್‌ ಅಳವಡಿಕೆಗೆ ರೈತರ ಭೂಮಿ ಸ್ವಾಧೀನಕ್ಕೆ ತೊಡಕಾಗಿದೆ. ಎರಡು ಹಂತದ ಯೋಜನೆಗೆ 28.5 ಕಿ.ಮೀ. ಪೈಪ್‌ಲೈನ್‌ ಅಳವಡಿಕೆಯಾಗಬೇಕಿದೆ. 24 ಎಕರೆ ರೈತರ ಭೂಮಿ ಸ್ವಾಧೀನವಾಗಬೇಕಿದೆ. ಹಲವೆಡೆ ರೈತರು ಪೈಪ್‌ಲೈನ್‌ ಅಳವಡಿಕೆಗೆ ಸಹಕಾರ ನೀಡದೆ ಯೋಜನೆ ಕಾಮಗಾರಿ ಸಂಪೂರ್ಣ ಆಗಲಾರದ ಸ್ಥಿತಿ ಇದೆ.

ಮೂರು ವರ್ಷದ ಹಿಂದೆ ಆರಂಭವಾದ ಕಾಮಗಾರಿ ಅಮೆ ವೇಗ ಪಡೆದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಯೋಜನೆ ಪೂರ್ಣಗೊಳ್ಳಲು ಇನ್ನೂ ಎಷ್ಟು ವರ್ಷ ಬೇಕಾಗುತ್ತದೋ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಅಧಿಕಾರಿಗಳ, ಜನಪ್ರತಿನಿಧಿಗಳ ಸಂಧಾನದಿಂದ ರೈತರಿಗೆ ಸೂಕ್ತ ಪರಿಹಾರ ಸಿಗದೆ ಕಾಮಗಾರಿ ಪೂರ್ಣವಾಗದ ಸ್ಥಿತಿ ತಲುಪಿದೆ.

ಪರಿಹಾರ ಸಾಕಾಗುತ್ತಿಲ್ಲ: ಹಲವು ರೈತರು ಬದುಕು ಕಟ್ಟಿಕೊಳ್ಳುವ ಯೋಜನೆ ಎಂದು ಪೈಪ್‌ ಅಳವಡಿಕೆಗೆ ಜಾಗಬಿಟ್ಟರೆ, ಮತ್ತೆ ಕೆಲವರಲ್ಲಿ ಪರಿಹಾರದ ಮೊತ್ತ ಸಾಕಾಗುತ್ತಿಲ್ಲ ಎಂಬ ತಕರಾರಿದೆ. ರೈತರ ನಕಾರಾತ್ಮಕ ಸ್ಪಂದನೆಯಿಂದ ಯೋಜನೆ ಮಂದಗತಿಯಲ್ಲಿ ತೆವಳುತ್ತ ಸಾಗುವಂತಾಗಿದೆ. ರೈತರ ಬಹುತೇಕ ಜಮೀನಿಗೆ ಪೌತಿ ಖಾತೆ ಆಗಬೇಕಿದೆ. ವಾರಸುದಾರರು ಮರಣಹೊಂದಿರುವ ಕಾರಣ, ಕುಟುಂಬದವರಿಗೆ ಖಾತೆ ಬದಲಾವಣೆಯಾಗದೆ ಜಂಟಿ ಮಾಲೀಕತ್ವ, ಕುಟುಂಬದವರ ಆಸ್ತಿ ವಿಭಾಗವಾಗದೆ ಪರಿಹಾರ ಪಡೆಯಲು ರೈತರಿಗೆ ಕಷ್ಟವಾಗಿದೆ. ಹಳೆ ದಾಖಲೆ ಸಿಗದೆ ಗೋಜಲು ಸ್ಥಿತಿ ರೈತರದಾಗಿದೆ. ಪರಿಣಾಮ ಪೋಡಿ, ಆರ್‌ಟಿಸಿ ತಿದ್ದುಪಡಿಗೆ ತೊಡಕಾಗಿದೆ. ಹಲವರಿಗೆ ಸೂಕ್ತ ಪರಿಹಾರ ನೀಡಲಾಗಿದ್ದು, ಜಮೀನು ನೋಂದಣಿಗೆ ರೈತರು ಮುಂದೆ ಬಾರದೆ ನಿರುತ್ಸಾಹ ತೋರುತ್ತಿರುವುದು ಕಂದಾಯ ಅಧಿಕಾರಿಗಳಿಗೆ ಯೋಜನೆಗೆ ಮತ್ತಷ್ಟು ತೊಡಕಾಗಿದೆ.

ಪೈಪ್‌ಲೈನ್‌ಗೆ ರೈತರ ವಿರೋಧ: ಮೊದಲನೆ ಹಂತವಾಗಿ ಗೂಡೆಹೊಸಹಳ್ಳಿ, ಊಗಿನಹಳ್ಳಿ, ಅಂಕನಹಳ್ಳಿ, ಐಕನಹಳ್ಳಿ, ಕೆ.ಹೊಸಹಳ್ಳಿ ಮಾರ್ಗದ 1.5 ಕಿ.ಮೀ. ಪೈಪ್‌ಲೈನ್‌ ಅಳವಡಿಕೆಗೆ ಹಲವು ಸ್ಥಳದಲ್ಲಿ ರೈತರ ವಿರೋಧವಿದೆ. ಯೋಜನೆ ಅನುಷ್ಠಾನಕ್ಕೆ ತೊಡಕಾಗಿದೆ. ನದಿಯಿಂದ ನೀರು ಎತ್ತಲು ಮೋಟಾರ್‌ ಪಂಪ್‌ ಅಳವಡಿಸಬೇಕಿದೆ. ವಿದ್ಯುತ್‌ ಸಂಪರ್ಕ ಕಲ್ಪಿಸಲು ಅಧಿಕಾರಿಗಳಿಗೆ ಇಲಾಖೆಯಿಂದ ನಿಶಾನೆ ದೊರೆತಿದ್ದು, ಆನೆಗೋಳ ವಿದ್ಯುತ್‌ ಕೇಂದ್ರದಿಂದ ವಿದ್ಯುತ್‌ ಸಂಪರ್ಕ ಪಡೆಯಬೇಕಿದೆ. ರೈತರ ಜಮೀನಿನಲ್ಲಿ 66 ಕೆ.ವಿ. ಮಾರ್ಗದ ವಿದ್ಯುತ್‌ ಪಡೆಯಲು ಟವರ್‌ ಅಳವಡಿಕೆಗೆ ಜಾಗದ ಅವಶ್ಯಕತೆ ಇದ್ದು ಮತ್ತಷ್ಟು ತೊಡಕು ಕಾಡಲಾರಂಭಿಸಿದೆ.

ರೈತರ ಜೊತೆ ಸಂಧಾನ ನಡೆಸಿ: ರೈತರೊಂದಿಗೆ ಸಂಧಾನ ಪ್ರಕ್ರಿಯೆಗೆ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು, ಅಧಿಕಾರಿಗಳು ಮುಂದಾಗುವುದು ಅವಶ್ಯವಿದೆ. ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು, ಹಲವು ತೊಡಕುಗಳನ್ನು ಪರಿಹರಿಸಲು ತಾಲೂಕಿನ ಶಾಸಕ ಎಚ್‌.ಟಿ. ಮಂಜು, ಶ್ರವಣಬೆಳಗೊಳ ಕ್ಷೇತ್ರ ಶಾಸಕ ಸಿ.ಎನ್‌.ಬಾಲಕೃಷ್ಣ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಯೋಜನೆ ವಿಸ್ತಾರ ಹೆಚ್ಚಿಸಿ ಮತ್ತಷ್ಟು ಕೆರೆ ಕಟ್ಟೆ ತುಂಬಿಸಿ ತಮ್ಮ ಕ್ಷೇತ್ರದ ನಾಗಮಂಗಲ ಪ್ರದೇಶದ ಬರಡು ಭೂಮಿ ಹಸನಾಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಆಶಯ ಕೂಡ ಆಗಿದೆ.

ಯೋಜನೆಯ ಮೊದಲನೇ ಹಂತ ಮುಕ್ತಾಯವಾಗುತ್ತಿದೆ. ಭೂಸ್ವಾಧೀನದಲ್ಲಿ ತೊಡಕಿದೆ. ತ್ವರಿತವಾಗಿ ಪರಿಹರಿಸಲು ರೈತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇನೆ. ಬರಗಾಲ ಬಂದಿದೆ. ರೈತರಿಗಾಗಿ ಯೋಜನೆ ಬೇಗ ಲೋಕಾರ್ಪಣೆ ಆಗಲು ಕಂದಾಯ, ನೀರಾವರಿ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಸರ್ಕಾರಕ್ಕೆ ಒತ್ತಡ ಹಾಕಲಾಗುತ್ತಿದೆ. ●ಎಚ್‌.ಟಿ.ಮಂಜು, ಶಾಸಕ, ಕೆ.ಆರ್‌.ಪೇಟೆ

ಮೊದಲ ಹಂತದ ಯೋಜನೆ ಕಾಮಗಾರಿ ಶೇ.90 ಮುಗಿದಿದೆ. 1 ಕಿ.ಮೀ. ಪೈಪ್‌ ಅಳವಡಿಕೆಗೆ ಹಲವು ರೈತರ ವಿರೋಧವಿದೆ. ಹೊಸದಾಗಿ ರೈತರ ಜಮೀನಿನಲ್ಲಿ ವಿದ್ಯುತ್‌ ಲೈನ್‌ಗೆ ಟವರ್‌ ನಿರ್ಮಿಸಬೇಕಿದೆ. ರೈತರೊಂದಿಗೆ ಸಂಧಾನ ಮಾಡಲಾಗುತ್ತಿದೆ. ಸುಖ್ಯಾಂತವಾದರೆ ಒಂದೆರಡು ತಿಂಗಳಲ್ಲಿ ಕನಿಷ್ಠ ಅಘಲಯ ಕೆರೆ ತುಂಬಿಸಬಹುದು. ●ಚಂದ್ರೇಗೌಡ, ಎಇಇ, ಎಚ್‌ಎಲ್‌ಬಿಸಿ.

ಯೋಜನೆಯಿಂದ ರೈತನ ಬದುಕು ನೆಮ್ಮದಿ, ಆರ್ಥಿಕ ಸುಸ್ಥಿರತೆ ಕಾಣಬಹುದು. ಗೂಡೆಹೊಸಹಳ್ಳಿ ರೈತರಿಗೆ ಯೋಜನೆ ಅನುಕೂಲವಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ರೈತರತ್ತ ಗಮನ ಹರಿಸಬೇಕು. -ಕುಮಾರ್‌, ರೈತ, ಗೂಡೆಹೊಸಹಳ್ಳಿ.

ತ್ರಿವೇಣಿ

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BIO-METRIC

Model for Schools: ಮಂಡ್ಯ ಸರಕಾರಿ ಶಾಲೆಗೆ ಫೇಸ್‌ ಬಯೋಮೆಟ್ರಿಕ್‌!

HDK-1

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್‌ಡಿಕೆ 

Pandavapura ಸಾಲ ಬಾಧೆ ತಾಳಲಾರದೇ ರೈತ ಆತ್ಮಹತ್ಯೆ

Pandavapura ಸಾಲ ಬಾಧೆ ತಾಳಲಾರದೇ ರೈತ ಆತ್ಮಹತ್ಯೆ

Nagamangala ಕಿರಣ್‌ ಅಂತಿಮ ದರ್ಶನ ಪಡೆದ ನಿಖಿಲ್‌ ಕುಮಾರಸ್ವಾಮಿ

Nagamangala ಕಿರಣ್‌ ಅಂತಿಮ ದರ್ಶನ ಪಡೆದ ನಿಖಿಲ್‌ ಕುಮಾರಸ್ವಾಮಿ

R. Ashok: “ಮುಸ್ಲಿಂ ಭಯೋತ್ಪಾದಕರಿಗೆ ಸರಕಾರದಿಂದಲೇ ಕುಮ್ಮಕ್ಕು’

R. Ashok: “ಮುಸ್ಲಿಂ ಭಯೋತ್ಪಾದಕರಿಗೆ ಸರಕಾರದಿಂದಲೇ ಕುಮ್ಮಕ್ಕು’

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.