ಸಾಧಕರನ್ನು ಗೌರವಿಸುವುದು ಕರ್ತವ್ಯ
Team Udayavani, Mar 16, 2022, 3:06 PM IST
ಮಂಡ್ಯ: ನಿಜವಾದ ಸಾಧಕರ ಕೆಲಸವನ್ನು ಗುರುತಿಸಿ ನೀಡುವ ಗೌರವ ಶ್ರೇಷ್ಠವಾಗಿದ್ದು, ಮನುಷ್ಯ ಸರಳತೆ ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ರಾಮಚಂದ್ರೇಗೌಡ ತಿಳಿಸಿದರು.
ನಗರದ ಕರ್ನಾಟಕ ಸಂಘದ ಆವರಣದಲ್ಲಿ ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಐದನೇ ವರ್ಷದ ಎಂ.ಶಿವಲಿಂಗಯ್ಯ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಯಂ ಪ್ರೇರಣೆಯಿಂದ ಮನ್ನಣೆ: ಪ್ರತಿ ಯೊಬ್ಬರಿಗೂ ಸಮಾಜದಲ್ಲಿ ತನ್ನನ್ನು ಗುರುತಿಸಿ ಗೌರವಿಸಬೇಕು ಎಂಬ ಮನ್ನಣೆ ದಾಹ ಇರು ತ್ತದೆ. ಆದರೆ, ನಿಜವಾಗಿ ಸಾಧಕರ ಕೆಲಸವನ್ನು ಗುರುತಿಸಿ ನೀಡುವ ಗೌರವ ಶ್ರೇಷ್ಠವಾಗಿರು ತ್ತದೆ. ಯಾವುದಕ್ಕೂ ಆಸೆ ಪಡದೇ ಅದಕ್ಕೂ ಮೀರಿ ಏನನ್ನು ಅಪೇಕ್ಷಿಸದ ಸಾಧಕರ ಕಾರ್ಯವನ್ನು ಗುರುತಿಸಿ ಸ್ವಯಂ ಪ್ರೇರಣೆ ಯಿಂದ ಮನ್ನಣೆ ನೀಡುತ್ತಿರುವುದು ಅಭಿನಂದನೀಯ ಎಂದರು. ಮಂಡ್ಯ ಪ್ರಾಮುಖ್ಯತೆ: ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಬಿ.ಪ್ರಭುದೇವ್, ಹಳ್ಳಿಯಿಂದ ಅಮೆರಿಕದವರೆಗೆ ಎಲ್ಲೇ ಹೋದರೂ ಪ್ರತಿಯೊಬ್ಬರಿಗೂ ಮಂಡ್ಯ ಎಂದರೆ ವಿಶೇಷ ಭಾವನೆ ವ್ಯಕ್ತಪಡಿಸುತ್ತಾರೆ. ಎಲ್ಲಾ ರಂಗದಲ್ಲಿ ಮಂಡ್ಯ ಪ್ರಾಮುಖ್ಯತೆ ಪಡೆದಿದೆ ಎಂದು ಹೇಳಿದರು.
ನಂಬಿಕೆಯಿಂದ ಮುನ್ನಡೆಯಿರಿ: ಎಂ. ಶಿವಲಿಂಗಯ್ಯ ಸಮಾಜ ಸೇವಾ ಪ್ರಶಸ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಮಾಜ ಸೇವಕಿ ವೀಣಾ, ಆರ್ಥಿಕವಾಗಿ, ಸಾಮಾಜಿಕವಾಗಿ ನಡೆಯುವ ಘಟನೆಗಳು ಮಹಿಳೆಗೆ ಸಮಸ್ಯೆ ಸೃಷ್ಟಿಸುತ್ತವೆ. ಮಹಿಳೆ ಯಾವುದೇ ಸಂದರ್ಭ ದಲ್ಲಿ ಕುಗ್ಗದೆ ವಿಶ್ವಾಸ ಮತ್ತು ನಂಬಿಕೆಗಳಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ಇಲಾಖೆ ಆಯುಕ್ತ ಜಯರಾಂ ರಾಯಪುರ, ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶ ಗೌಡ, ಕಾರ್ಯದರ್ಶಿ ಲೋಕೇಶ್ ಚಂದ ಗಾಲು, ದತ್ತಿದಾನಿ ಎಂ.ಕೆ.ಲಕ್ಷ್ಮೀ, ಮಂಜುಳಾ ಉದಯಶಂಕರ್, ತಗ್ಗಹಳ್ಳಿ ವೆಂಕಟೇಶ್, ಎಂ. ಕೆ.ಹರೀಶ್ಕುಮಾರ್, ವಿಜಯಲಕ್ಷ್ಮೀ ರಘು ನಂದನ್ ಮತ್ತಿತರರು ಭಾಗವಹಿಸಿದ್ದರು.
ಮನುಷ್ಯ ಯಾವುದೇ ಅಂತಸ್ತಿ ಇರಲಿ. ಎಲ್ಲೇ ಹುಟ್ಟಿ ರಲಿ, ಬೆಳೆದಿರಲಿ, ಅವನು ತನ್ನ ಕ್ಷೇತ್ರದಲ್ಲಿ ಕೆಲಸ ಮಾಡಿ ತೋರಿಸಬೇಕು. ಸರಳತೆಯಿಂದ ಬದುಕು ನಡೆಸಿ ಮತ್ತೂಬ್ಬರಿಗೆ ಪ್ರೇರಣೆ ಎನಿಸಬೇಕು.– ರಾಮಚಂದ್ರೇಗೌಡ, ಮಾಜಿ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
BBK-11: ಬಿಗ್ ಬಾಸ್ ಮನೆಯೊಳಗೆ ಜತೆಯಾಗಿ ಹೋದ ಕಿರುತೆರೆ ಸ್ನೇಹಿತರು
Udupi: ಸ್ಕೂಟರ್ ಮೇಲೆ ವಿದ್ಯುತ್ ತಂತಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು
Malayalam ಚಿತ್ರರಂಗ; ಆ ದೃಶ್ಯಗಳನ್ನು ನೋಡುವಂತೆ ಬಲವಂತ: ನಟಿಯ ಆರೋಪ
Manipal:ಪರ್ಕಳದ ಸಾಮಾನ್ಯ ತಂತ್ರಜ್ಞ ಆರ್. ಮನೋಹರ್ ಅಸಾಮಾನ್ಯ ಸಂಶೋಧಕರಾದ ಕುತೂಹಲಕಾರಿ ಕಥೆ
Kulur ಫ್ಲೈ ಓವರ್ ಕೆಳಗೆ ಅನಧಿಕೃತ ಅಂಗಡಿ, ದುರ್ನಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.