![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, May 24, 2022, 5:47 PM IST
ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿನಿರ್ಮಾಣ ಕಾಮಗಾರಿಗೆ ಸಂಬಂಧಿ ಸಿದಂತೆ ಸಂಸದೆಸುಮಲತಾಅಂಬರೀಷ್, ಮೈಸೂರು ಸಂಸದ ಪ್ರತಾಪಸಿಂಹ ನಡುವೆ ಶೀತಲ ಸಮರ ಶುರುವಾಗಿದ್ದುಜಗಳ ಮತ್ತೂಮ್ಮೆ ಸ್ಫೋಟಿಸುವ ಸಾಧ್ಯತೆ ಹೆಚ್ಚಿದೆ.ಭಾನುವಾರ ಸಂಸದ ಪ್ರತಾಪಸಿಂಹ ಮಂಡ್ಯನಗರದಲ್ಲಿ ಮಳೆಯಿಂದ ಜಲಾವೃತಗೊಂಡಿದ್ದವಿವೇಕಾನಂದ ಬಡಾವಣೆ, ಬೀಡಿ ಕಾರ್ಮಿಕರಕಾಲೋನಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದರು.
ಬೈಪಾಸ್ ನಿರ್ಮಾಣದಿಂದ ನೀರು ನುಗ್ಗಿತ್ತು ಎಂಬಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಭೇಟಿ ನೀಡಿದ್ದರು. ಅಲ್ಲದೇ, ಸ್ಥಳೀಯರು ಸಮಸ್ಯೆ ಬಗೆಹರಿಸಲುಮನವಿ ಸಲ್ಲಿಸಿದ್ದರು. ಈ ಮೂಲಕ ಸಂಸದೆಸುಮಲತಾ ಕ್ಷೇತ್ರಕ್ಕೆ ಪ್ರತಾಪಸಿಂಹ ಭೇಟಿ ಇಬ್ಬರನಡುವಿನ ವಾಕ್ಸಮರಕ್ಕೆ ಮತ್ತೂಮ್ಮೆ ವೇದಿಕೆಯಾಗಲಿದೆಎಂಬ ಮಾತು ಕೇಳಿ ಬರುತ್ತಿವೆ.
ಹೆದ್ದಾರಿ ವಿಚಾರದಲ್ಲಿ ವಾಕ್ಸಮರ: ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಕಾಮಗಾರಿವಿಚಾರದಲ್ಲಿ ಈ ಹಿಂದೆ ಇಬ್ಬರ ನಡುವೆ ವಾಕ್ಸಮರನಡೆದಿತ್ತು. ಯಲಿಯೂರು ಬಳಿ ಸೇತುವೆ ನಿರ್ಮಾಣವಿಚಾರಕ್ಕೆ ಸಂಬಂಧಿ ಸಿದಂತೆ ಸ್ಥಳೀಯರುಪ್ರತಾಪಸಿಂಹಗೆ ಮನವಿ ಮಾಡಿದ್ದರು. ಆಗಪ್ರತಾಪಸಿಂಹ ಮಂಡ್ಯ ಸಂಸದರು ಸಮಸ್ಯೆಗೆಸ್ಪಂದಿಸುತ್ತಿಲ್ಲ ಎಂಬ ಹೇಳಿಕೆ ನೀಡಿದ್ದರು. ಹೀಗಾಗಿಇಬ್ಬರ ನಡುವೆ ಮಾತಿನ ಸಮರವೇ ನಡೆದಿತ್ತು.
You seem to have an Ad Blocker on.
To continue reading, please turn it off or whitelist Udayavani.