![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 20, 2021, 12:51 PM IST
ಶ್ರೀರಂಗಪಟ್ಟಣ: ಕೆಆರ್ಎಸ್ ಅಣೆಕಟ್ಟೆಯ ಒಳ ಭಾಗದ ಬಳಿ ಇರುವ ಉದ್ಯಾನವನಕ್ಕೆ ಹೋಗುವ ರಸ್ತೆಯ ಪ್ರದೇಶದ ಕಟ್ಟಡದಲ್ಲಿ ಕಲ್ಲುಗಳು ಕುಸಿದಿದೆ ಹೊರೆತು ಅಣೆಕಟ್ಟೆಗೆಯಾವುದೇ ಸಂಬಂಧವಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
ಕುಸಿತ ಹಿನ್ನೆಲೆ ಪರಿಶೀಲನೆ ನಡೆಸಿದಬಳಿಕ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು. ಈಗಾಗಲೇ ಸ್ಥಳ ಪರಿಶೀಲನೆ, ಅಧಿಕಾರಿಗಳೊಂದಿಗೆ ಈ ಸಂಬಂಧ ಚರ್ಚೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಅಣೆಕಟ್ಟೆಗೂ ಕುಸಿತದ ಪ್ರದೇಶಕೂ ಸುಮಾರು16ಮೀಟರ್ ಅಂತರವಿದೆ. ಆ ಗೋಡೆಯನ್ನು ಮಣ್ಣಿನಿಂದ ನಿರ್ಮಿಸಲಾಗಿದೆ. ಅಧಿಕಾರಿ ಗಳಿಗೆ ತಕ್ಷಣದಲ್ಲಿ ದುರಸ್ತಿ ಕಾರ್ಯಕ್ಕೆ ಸೂಚನೆ ನೀಡಿದ್ದೇನೆ. ಕಾಮಗಾರಿ ಕೂಡ ಈಗಾಗಲೇ ನಡೆಯುತ್ತಿರುವುದರಿಂದ ಸರ್ಕಾರಕೂಡಅಣೆಕಟ್ಟೆಪರಿಶೀಲನೆನಡೆಸಿಈ ವಿಚಾರದಲ್ಲಿ ಸುಭದ್ರವಾಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.
ದೃಷ್ಟಿಹೋಮ ಮಾಡಬೇಕು: ಪದೇ ಪದೆ ಎಷ್ಟೋ ಮಂದಿ ಕೆಆರ್ಎಸ್ ವಿಚಾರದಲ್ಲಿ ಮಾತನಾಡುವ ವೃತ್ತಿ ಮಾಡಿ ಕೊಂಡಿದ್ದಾರೆ. ಆದ್ದರಿಂದ ಅಣೆಕಟ್ಟೆಗೆ ದೃಷ್ಟಿಯಾಗಿದೆ. ದೃಷ್ಟಿಹೋಮ ಮಾಡಿಸಿ ಎಂದು ಸರ್ಕಾರಕ್ಕೂ ಈ ವಿಷಯ ತಿಳಿಸಿದ್ದೇನೆ. ಸರ್ಕಾರ ಮಾಡದಿದ್ದರೆ ನಾನೇ ಒಂದು ದಿನ ಹೋಮಪೂಜೆ ಮಾಡುವ ಯೋಚನೆ ಮಾಡಿದ್ದೇನೆ. ಅಣೆಕಟ್ಟೆ ರಾಷ್ಟ್ರೀಯ ಸಂಪತ್ತು ಆಗಿರುವುದರಿಂದ ಕಟ್ಟಡ ಕುಸಿತದ ಫೋಟೊಗಳು ಬಹು ಬೇಗನೆ ಒಬ್ಬರನ್ನು ನೆಚ್ಚಿಸಿಕೊಳ್ಳಲು ಯಾರೋ ಬಹಿರಂಗವಾಗಿ ಲೀಕ್ ಮಾಡುತ್ತಿದ್ದಾರೆ. ಈ ಬಗ್ಗೆ ಭದ್ರತಾ ವ್ಯವಸ್ಥೆಯ ಲೋಪವೂ ಇದೆ. ಯಾರೊಬ್ಬರೂ ಕಳಂಕ ತರುವ ಕೆಲಸ ಮಾಡಬಾರದು ಎಂದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.