![City](https://www.udayavani.com/wp-content/uploads/2025/02/City-1-415x249.jpg)
![City](https://www.udayavani.com/wp-content/uploads/2025/02/City-1-415x249.jpg)
Team Udayavani, Sep 3, 2017, 4:25 PM IST
ಮಂಡ್ಯ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಿತ್ಯವೂ ನಡೆಯುತ್ತಿವೆ. ಅದಕ್ಕಾಗಿ ಸಂಶೋಧನಾ ಕ್ಷೇತ್ರದತ್ತ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸುವಂತೆ ಎಸ್.ಬಿ.
ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮೀರಾ ಸಲಹೆ ನೀಡಿದರು.
ನಗರದ ಮಾಂಡವ್ಯ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು, ಕಾಲೇಜು ಶಿಕ್ಷಣ ಇಲಾಖೆ, ಎಸ್.ಬಿ.ಸಮೂಹ ಶಿಕ್ಷಣ ಸಂಸ್ಥೆಗಳು,
ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾರ್ಗದರ್ಶನ ಅಗತ್ಯ: ವಿಜ್ಞಾನದ ಬೆಳವಣಿಗೆಯನ್ನು ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಗಮನಿಸಬೇಕು. ವೈಜ್ಞಾನಿಕ ಪ್ರಯೋಗಗಳು ಹಾಗೂ ವಿಜ್ಞಾನ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ
ಜ್ಞಾನ ವೃದ್ಧಿಯಾಗಲಿದೆ. ಜೀವನದಲ್ಲಿ ಸಾಧನೆಯ ಕಡೆ ಹೆಜ್ಜೆ ಇಡುವಾಗ ಗುರುಗಳ ಮಾರ್ಗದರ್ಶನ ಅಗತ್ಯ. ಅದರ ಜೊತೆ ಸ್ವಂತ ಬುದ್ಧಿ, ಸಹಚರರ ಸಲಹೆ ಹಾಗೂ ಅನುಭಾವದೊಂದಿಗೆ ಕಲಿಯುವ ಶಿಕ್ಷಣದಿಂದ ಸಾಧನೆ ಮಾಡಿದಲ್ಲಿ ಎಲ್ಲವನ್ನೂ ಸಿದ್ಧಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರಯತ್ನ ನಿರಂತರವಾಗಿಬೇಕು ಎಂದು ಸಲಹೆ ನೀಡಿದರು.
ಗುರಿಯತ್ತ ಹೆಜ್ಜೆ ಹಾಕಿ: ನಮ್ಮನ್ನು ನಾವು ಅರಿತುಕೊಳ್ಳುವ ಪ್ರಯತ್ನವನ್ನು ಮಾಡಬೇಕು. ನಮ್ಮ ಅಂತರಂಗವನ್ನು ನಾವು ವೀಕ್ಷಣೆ ಮಾಡಿಕೊಂಡು ಆತ್ಮಸಾಕ್ಷಾತ್ಕಾರದಿಂದ ಹೆಚ್ಚಿನ ಜ್ಞಾನ
ಪಡೆದುಕೊಳ್ಳುವತ್ತ ಮುಖ ಮಾಡಬೇಕು. ಕಲಿಯುವ ವಯಸ್ಸಿನಲ್ಲಿ ಮೋಜಿನ ಜೀವನದತ್ತ ಗಮನಹರಿಸಬಾರದು. ಶೈಕ್ಷಣಿಕ ಸಾಧನೆಯ ಗುರಿಯತ್ತ ಹೆಜ್ಜೆ ಹಾಕಬೇಕು ಎಂದು ಹೇಳಿದರು.
ಅಬ್ದುಲ್ ಕಲಾಂ ಪ್ರೇರಣೆ: ವಿಜ್ಞಾನ ವಿಚಾರದಲ್ಲಿ ಬದ್ಧತೆ ಇಟ್ಟುಕೊಂಡು ಪ್ರಯೋಗಗಳನ್ನು ನಡೆಸಿದಾಗ ಯಶಸ್ವಿಯಾಗಲು ಸಾಧ್ಯ. ಇದಕ್ಕೆ ಡಾ.ಅಬ್ದುಲ್ ಕಲಾಂರಂತಹ ಮಹಾ ವಿಜ್ಞಾನಿಗಳು ಎಲ್ಲರಿಗೂ ಪ್ರೇರಣೆಯಾಗಿ ನಿಲ್ಲುತ್ತಾರೆ. ಪ್ರತಿಯೊಬ್ಬರೂ ಅಂತಹ ಮಹನೀಯರ ಆದರ್ಶಗಳನ್ನು
ಇಟ್ಟುಕೊಂಡು ಸತತ ಅಭ್ಯಾಸ ನಡೆಸಿದಾಗ ಉತ್ತಮ ಸಂಶೋಧಕನಾಗಿ ಹೊರಹೊಮ್ಮಲು
ಸಾಧ್ಯ ಎಂದು ಅಭಿಪ್ರಾಯಿಸಿದರು. ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಡಾ.ರಾಮಲಿಂಗಯ್ಯ, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷ ಚಿಕ್ಕಸ್ವಾಮಿ, ಇಸ್ರೋ ವಿಜ್ಞಾನ ಪ್ರೊ. ಸಿ.ಡಿ. ಪ್ರಸಾದ್, ವಿಜ್ಞಾನ
ಪರಿಷತ್ ರಾಜ್ಯ ಸಮಿತಿ ಸದಸ್ಯ ಸಿ. ಕೃಷ್ಣೇಗೌಡ, ಜಿಲ್ಲಾ ಸಮಿತಿ ಖಜಾಂಚಿ ಡಾ. ಬಿ.ಪಿ. ಶಿವಶಂಕರ್, ರಮೇಶ್, ರಾಮಚಂದ್ರು ಇತರರು ಭಾಗವಹಿಸಿದ್ದರು.
ಬಹುಮಾನ ವಿಜೇತರು: ಉತ್ತಮ ಪ್ರದರ್ಶನ ನೀಡಿದ ಶೃಂಗೇರಿಯ ಜೆಸಿಬಿಎಂ ಕಾಲೇಜಿನ ಸಂಚಿತ್ ಜೈನ್ ಪ್ರಥಮ ಬಹುಮಾನ, ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸರಸ್ವತಿ ಕೆಂಚಿನಗೌಡರ್ ದ್ವಿತೀಯ ಬಹುಮಾನ, ಹಗರಿಬೊಮ್ಮನಹಳ್ಳಿ ಎಂ.ಜಿ.ವಿ.ಪಿ.ಪಿ. ಕಾಲೇಜಿನ ಕೆ.ನಿತೀಶ್ ಕುಮಾರ್ ತೃತೀಯ ಬಹುಮಾನ, ದಾವಣಗೆರೆ ಡಿಆರ್ಎಂ ವಿಜ್ಞಾನ ಕಾಲೇಜಿನ
ಅಂಚಲ್ ಜೈನ್, ಪುತ್ತೂರಿನ ಸಂತ ಪೀಲೋಮಿನ ಕಾಲೇಜಿನ ಜೀವನ್ ಶೈಲೇಶ್ ಲೋಬೊ ಸಮಾಧಾನಕರ ಬಹುಮಾನ ಪಡೆದುಕೊಂಡರು.
Modern City: ದುಬಾೖ ಮಾದರಿ ದೇಶದಲ್ಲೂ ಫಿನ್ಟೆಕ್ ಸಿಟಿ ನಿರ್ಮಾಣ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
You seem to have an Ad Blocker on.
To continue reading, please turn it off or whitelist Udayavani.