ಅಂತರ್ಜಾಲದಲ್ಲಿ ಗ್ರಾಪಂ ಹೆಸರು ಬದಲಾಗಿಲ್ಲ : ಐದು ವರ್ಷಗಳಿಂದಲೂ ಅಧಿಕಾರಿಗಳ ನಿರ್ಲಕ್ಷ್ಯ

ನರೇಗಾ, ಪಂಚತಂತ್ರದಲ್ಲಿ ಹಳೇ ವಿಳಾಸ

Team Udayavani, Dec 15, 2020, 2:39 PM IST

ಅಂತರ್ಜಾಲದಲ್ಲಿ ಗ್ರಾಪಂ ಹೆಸರು ಬದಲಾಗಿಲ್ಲ : ಐದು ವರ್ಷಗಳಿಂದಲೂ ಅಧಿಕಾರಿಗಳ ನಿರ್ಲಕ್ಷ್ಯ

ಮಂಡ್ಯ: ಮಳವಳ್ಳಿ ತಾಲೂಕಿನ ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿಯಾಗಿ ಬದಲಾದವಣೆ ಗೊಂಡು ಐದು ವರ್ಷ ಕಳೆದರೂ ಇನ್ನೂ ನರೇಗಾ ಹಾಗೂ ಪಂಚತಂತ್ರ ಅಂತರ್ಜಾಲಗಳಲ್ಲಿ ಬದಲಾವಣೆಯಾಗಿಲ್ಲ. 2014-15ರಲ್ಲಿ ಮಾರೇಹಳ್ಳಿ ಗ್ರಾಮ ಪಂಚಾಯಿತಿಯನ್ನು ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿಯಾಗಿ ಬದಲಾವಣೆ  ಮಾಡಲಾಗಿದೆ. ಆದರೆ, ಐದು ವರ್ಷ ಕಳೆಯುತ್ತಾ ಬಂದರೂ, ನರೇಗಾ ಹಾಗೂ ಪಂಚತಂತ್ರಗಳಲ್ಲಿ ಇನ್ನೂ ಮಾರೇಹಳ್ಳಿ ಗ್ರಾಪಂ ಎಂದು ನಮೂದಾಗಿದೆ.

ಮಾರೇಹಳ್ಳಿ ಪುರಸಭೆ ವ್ಯಾಪ್ತಿಗೆ: ಮಾರೇಹಳ್ಳಿ ಗ್ರಾಮವನ್ನು ಐದು ವರ್ಷಗಳ ಹಿಂದೆ ಮಳವಳ್ಳಿ ಪಟ್ಟಣದ ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಆಗ ನಾಗೇಗೌಡನದೊಡ್ಡಿಯನ್ನು ಗ್ರಾಮ ಪಂಚಾಯಿತಿ ಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ವ್ಯಾಪ್ತಿಗೆ ಬೋಸೇಗೌಡನದೊಡ್ಡಿ, ವಡ್ಡರಹಳ್ಳಿ, ಚನ್ನೇಗೌಡ ನದೊಡ್ಡಿ, ತಮ್ಮಡಹಳ್ಳಿ, ಅಂಚೇದೊಡ್ಡಿ, ಅಣ್ಣೆಕೊಪ್ಪಲು ಗ್ರಾಮಗಳು ಒಳಪಟ್ಟಿವೆ.

ಅಂತರ್ಜಾಲದಲ್ಲೂ ಮಾರೇಹಳ್ಳಿ: ಪಂಚತಂತ್ರ ಹಾಗೂ ನರೇಗಾ ಅಂತರ್ಜಾಲಗಳಲ್ಲಿ ಮಾರೇಹಳ್ಳಿ ಗ್ರಾಮಪಂಚಾಯಿತಿಎಂದೇ ನಮೂದಾಗಿದ್ದು, ಇನ್ನೂಬದಲಾವಣೆಯಾಗಿಲ್ಲ. ಇದರಿಂದ ಆಯಾಗ್ರಾಮಗಳಲ್ಲಿ ಪಂಚಾಯಿತಿಯ ಹೆಸರು ಮಾರೇಹಳ್ಳಿ ಎಂದೇ ನಮೂದಾಗುತ್ತದೆ.

ದಾಖಲೆಗಳಲ್ಲೂ ಬದಲಾವಣೆ ಇಲ್ಲ: ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಯಾವುದೇ ದಾಖಲಾತಿಗಳು ಮಾರೇಹಳ್ಳಿ ಗ್ರಾಮ ಪಂಚಾಯಿತಿ ಎಂದು ತೋರಿಸುತ್ತದೆ. ನಾಗೇಗೌಡನದೊಡ್ಡಿಯಲ್ಲಿದ್ದರೂ ಮಾರೇಹಳ್ಳಿ ಗ್ರಾಮ ಪಂಚಾಯಿತಿ ಎಂದು ದಾಖಲೆ ಪಡೆಯಬೇಕಾಗಿದೆ. ಅಲ್ಲದೆ, ತಾಲೂಕು ಕಚೇರಿಯಲ್ಲೂ, ನರೇಗಾ ಜಾಬ್‌ ಕಾರ್ಡ್‌ ಹಾಗೂ ಆರ್‌ಟಿಸಿಯಲ್ಲೂ ಮಾರೇಹಳ್ಳಿ ಎಂದೇ ನಮೂದಾಗುತ್ತಿದೆ.

ಕಂದಾಯ ಗ್ರಾಮವಾಗಿಲ್ಲ: ಮೊದಲು ಮಾರೇಹಳ್ಳಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಿ ಗ್ರಾಪಂ ಮಾಡಲಾಗಿತ್ತು. ಮಾರೇಹಳ್ಳಿ ಪುರಸಭೆಗೆ ಸೇರ್ಪಡೆಗೊಂಡ ಬಳಿಕ ನಾಗೇಗೌಡನದೊಡ್ಡಿ ಗ್ರಾಮವನ್ನು ಗ್ರಾಪಂನ್ನಾಗಿ ಮಾಡಲಾಗಿದೆ. ಆದರೆ, ಇನ್ನೂ ಕಂದಾಯ ಗ್ರಾಮ ವನ್ನಾಗಿ ಘೋಷಣೆಮಾಡಿಲ್ಲ. ಕಂದಾಯ ಗ್ರಾಮದ ವ್ಯಾಪ್ತಿಗೆ ಒಳಪಟ್ಟರೆಎಲ್ಲ ದಾಖಲಾತಿಗಳು ಬದಲಾಗಲಿವೆ. ಕೂಡಲೇ ಅಧಿಕಾರಿಗಳು ಇತ್ತ ಗಮನಹರಿಸಿ ಅಂತರ್ಜಾಲ ಹಾಗೂ ದಾಖಲಾತಿಗಳಲ್ಲಿ ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿ ಎಂದು ಬದಲಾಯಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ದಾಖಲೆಗಳ ಬದಲಾವಣೆಗೆ ನಿರ್ಲಕ್ಷ್ಯ :  ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೂ ದಾಖಲೆಗಳಲ್ಲಿ ಬದಲಾವಣೆಯಾಗಿಲ್ಲ. ಐದು ವರ್ಷ ಕಳೆಯುತ್ತಾ ಬಂದರೂ ಇನ್ನೂ ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿಯನ್ನಾಗಿ ಮಾರ್ಪಡಿಸಿರುವುದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ. ನರೇಗಾ ಹಾಗೂ ಪಂಚತಂತ್ರ ಅಂತರ್ಜಾಲದಲ್ಲಿ ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿಯನ್ನಾಗಿ ಬದಲಾಯಿಸುವಂತೆ ಸರ್ಕಾರ, ತಹಶೀಲ್ದಾರ್‌, ಪಂಚಾಯತ್‌ ರಾಜ್‌ ಇಲಾಖೆಯ ಅಂತರ್ಜಾಲ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ಆದರೂ, ಇನ್ನೂ ಕ್ರಮ ಕೈಗೊಂಡಿಲ್ಲ.

ನಾಗೇಗೌಡನದೊಡ್ಡಿ ಗ್ರಾಮವನ್ನು ಗ್ರಾಮ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿ ಐದು ವರ್ಷಗಳು ಕಳೆಯುತ್ತಾ ಬಂದರೂ,ಇನ್ನೂ ದಾಖಲಾತಿಗಳಲ್ಲಿ ಬದಲಾಗಿಲ್ಲ. ಕೂಡಲೇ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಂಡು ನಾಗೇಗೌಡನದೊಡ್ಡಿ ಗ್ರಾಪಂ ಎಂದು ಎಲ್ಲ ದಾಖಲಾತಿಗಳಲ್ಲೂ ಬದಲಾಯಿಸಬೇಕು. -ರಮೇಶ್‌ ಪಟೇಲ್‌, ನಾಗೇಗೌಡನದೊಡ್ಡಿ

ನರೇಗಾ ಹಾಗೂ ಪಂಚತಂತ್ರ ಅಂತರ್ಜಾಲದಲ್ಲಿ ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿಯನ್ನಾಗಿ ಬದಲಾಯಿಸುವಂತೆ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೂ,ಇನ್ನೂ ಬದಲಾವಣೆ ಮಾಡಿಲ್ಲ. ನಾನೇ ಖುದ್ದಾಗಿ ಹೋಗಿ ಬದಲಾಯಿಸಲು ಕ್ರಮ ಕೈಗೊಳ್ಳುತ್ತೇನೆ. ಕಂದಾಯ ಗ್ರಾಮವನ್ನಾಗಿ ಮಾರ್ಪಡಿಸಿಲ್ಲ. ಮಂಗಳಾ, ಪಿಡಿಒ, ನಾಗೇಗೌಡನದೊಡ್ಡಿ ಗ್ರಾಪಂ

 

– ಎಚ್‌.ಶಿವರಾಜು

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya-Mur

Mandya: ತಮ್ಮನ ಕೊಲೆಗೆ ಸುಪಾರಿ ನೀಡಿ, ಕುಂಭಮೇಳಕ್ಕೆ ಹೋದ ಅಣ್ಣ!

Mandya: ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಇಳಿದ ಇಬ್ಬರು ಮಹಿಳೆಯರು ನೀರುಪಾಲು

Mandya: ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಇಳಿದ ಇಬ್ಬರು ಮಹಿಳೆಯರು ನೀರುಪಾಲು

ರೇವಣ್ಣಗೆ ವೋಟ್‌ಗೆ ಮಾತ್ರ ಮಂಡ್ಯ,ಅಭಿವೃದ್ಧಿಗೆ ಹಾಸನ: ಚಲುವರಾಯಸ್ವಾಮಿ

ರೇವಣ್ಣಗೆ ವೋಟ್‌ಗೆ ಮಾತ್ರ ಮಂಡ್ಯ,ಅಭಿವೃದ್ಧಿಗೆ ಹಾಸನ: ಚಲುವರಾಯಸ್ವಾಮಿ

1-dess

Mandya: ಬೆಳ್ಳಂಬೆಳಗ್ಗೆ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹ*ತ್ಯೆ

ಇಂದಿನಿಂದ ದಕ್ಷಿಣ ಭಾರತದ ಮಹಾಕುಂಭಮೇಳ

ಇಂದಿನಿಂದ ದಕ್ಷಿಣ ಭಾರತದ ಮಹಾಕುಂಭಮೇಳ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.