ಸನ್ನಢತೆ ಆಧಾರದಲ್ಲಿ 10 ಕೈದಿ ಬಿಡುಗಡೆ
Team Udayavani, Oct 6, 2018, 11:33 AM IST
ಮೈಸೂರು: 150ನೇ ವರ್ಷದ ಗಾಂಧಿಜಯಂತಿ ಹಿನ್ನೆಲೆಯಲ್ಲಿ ಸನ್ನಡೆತೆ ಆಧಾರದಲ್ಲಿ ಮೈಸೂರಿನ ಕೇಂದ್ರ ಕಾರಾಗೃಹದ ಹತ್ತು ಮಂದಿ ಕೈದಿಗಳಿಗೆ ಶನಿವಾರ ಬಿಡುಗಡೆ ಭಾಗ್ಯ ಲಭಿಸಿತು.
ಅರಕಲಗೂಡು ತಾಲೂಕು ವಡ್ಡರಹಳ್ಳಿಯ ಈರಪ್ಪ, ನೆಲಮನೆ ಗ್ರಾಮದ ತಿಮ್ಮೇಗೌಡ, ಕೊಡಗು ಜಿಲ್ಲೆಯ ಮೆಣಸ ಗ್ರಾಮದ ನಾಗರಾಜ, ನಲ್ಕೇರಿ ಗ್ರಾಮದ ಎಚ್.ಪಿ.ಶಿವಕುಮಾರ್, ನಂಜನಗೂಡಿನ ಚಂದ್ರಶೇಖರ್, ಚಿಕ್ಕಮಗಳೂರಿನ ಹಳಗಂಗೂರಿನ ಚೆನ್ನಪ್ಪ, ಅಪ್ಪಣ್ಣ, ಹೂಟಗಳ್ಳಿ ನಿವಾಸಿ ಶಿವಲಿಂಗ, ಬೇಲೂರಿನ ರಾಜು, ತಮಿಳುನಾಡಿನ ಸತ್ಯಮಂಗಲದ ದೇವರಾಜು ಅವನ್ನು ಸರ್ಕಾರದ ಅನುಮತಿ ಮೇರೆಗೆ ಬಿಡುಗಡೆ ಮಾಡಲಾಯಿತು.
ಸನ್ನಢತೆಯ ಆಧಾರದಲ್ಲಿ ಬಿಡುಗಡೆಯಾದ ಕೈದಿಗಳಲ್ಲಿ ಹೆಚ್ಚಿನವರು ಜೈಲಿನಲ್ಲಿ ಗರಿಷ್ಠ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಸರ್ಕಾರದ ಆದೇಶದಂತೆ ಶೇ.66 ಶಿಕ್ಷೆಯನ್ನು ಪೂರ್ಣಗೊಳಿಸಿದ ಕೈದಿಗಳಿಗೆ ಬಿಡುಗಡೆ ಮಾಡಲಾಯಿತು.
ಕೈದಿಗಳಿಂದ ಪಾವತಿಸಬೇಕಿದ್ದ 20 ಸಾವಿರ ರೂ. ದಂಡದ ಮೊತ್ತವನ್ನು ಕಾರಾಗೃಹಗಳ ಸಚಿವಾಲಯದಿಂದ ಪಾವತಿಸಲಾಯಿತು. ಕೈದಿಗಳ ಬಿಡುಗಡೆ ವೇಳೆ ಮೈಸೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ, ಕಾರಾಗೃಹ ಅಧೀಕ್ಷಕ ಆನಂದ ರೆಡ್ಡಿ ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Flipkart Big Billion Day ಸೆ. 27 ರಿಂದ ಆರಂಭ
FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ
Belagavi: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಶೆಟ್ಟರ್
Ankola: ಶಿರೂರು ಗುಡ್ಡ ಕುಸಿತ ಪ್ರಕರಣ; ಗೋವಾದಿಂದ ಯಂತ್ರ; ಇಂದಿನಿಂದ ಶೋಧ ಕಾರ್ಯ
Moradabad ರಕ್ತದಾನಿಯಂತೆ ಪೋಸ್ ನೀಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಬಿಜೆಪಿ ಮೇಯರ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.