ಶಿಕ್ಷಣ ಕ್ಷೇತ್ರಕ್ಕೆ ಎಲ್ಲಾ ರೀತಿಯ ನೆರವು: ಶಾಸಕ ಎಚ್‌.ಪಿ.ಮಂಜುನಾಥ್‌

ಮಿಮಿಕ್ರಿ ಪ್ರದರ್ಶನ ವಂತೂ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು.

Team Udayavani, Oct 19, 2022, 4:32 PM IST

ಶಿಕ್ಷಣ ಕ್ಷೇತ್ರಕ್ಕೆ ಎಲ್ಲಾ ರೀತಿಯ ನೆರವು: ಶಾಸಕ ಎಚ್‌.ಪಿ.ಮಂಜುನಾಥ್‌

ಹುಣಸೂರು: ಆದರ್ಶ ಶಾಲೆಯಲ್ಲಿ ನಡೆದ ಕಿರಿಯ, ಹಿರಿಯ, ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಚಿಣ್ಣರು ತಮ್ಮೊಳಗಿನ ಪ್ರತಿಭೆ ಹೊರಸೂಸುವ ಮೂಲಕ ಸಾಂಸ್ಕೃತಿಕ ಕಾರಂಜಿಯಲ್ಲಿ ಮಿಂದೆದ್ದರು.

ಮಣ್ಣಿನಲ್ಲಿ ಪ್ರಾಣಿಗಳು, ಜಲಾಶಯ, ಶಿವಲಿಂಗ ಅರಳಿದರೆ, ಛದ್ಮವೇಷದಲ್ಲಿ ಬುದ್ಧ, ಸರಸ್ವತಿ, ಶ್ರೀರಾಮ, ಶಿಲಾಬಾಲಕಿ ಕಣ್ಮನ ಸೆಳೆ ದರು. ಜಾನಪದ ಕಲರವ, ಆಕರ್ಷಕ ಭರತ ನಾಟ್ಯ, ಇಂಪಾದ ಗಾಯನ ನೆರೆದಿದ್ದವ ರನ್ನು ಮಂತ್ರಮುಗ್ಧರನ್ನಾಗಿಸಿತು. ಅಶೋಕನ ಪ್ರಾಣಿಗಳ ಧ್ವನಿ ಅನುಕರಣೆಗೆ ಸಭಿಕರು ಫಿದಾ ಆದರು.

ಛದ್ಮವೇಷದಲ್ಲಿ ಮಿಂಚಿದ ಮಕ್ಕಳು: ಮೂರು ವಿಭಾಗದ ಛದ್ಮವೇಷದಲ್ಲಿ ಮಕ್ಕಳು ಸರಸ್ವತಿ, ಶ್ರೀರಾಮ, ಕಾವೇರಿ, ಬುದ್ಧ, ಚಾಮುಂಡೇಶ್ವರಿ, ಪಂಜುರ್ಲಿ ಕೋಲ, ಹುಲಿ ವೇಷ, ಉಗ್ರನರಸಿಂಹನ ಅವತಾರದಲ್ಲಿ ಮಿಂಚಿದರೆ, ಶಿಲಾಬಾಲಕಿಯರಿಬ್ಬರ ವೇಷವಂತೂ ಬೇಲೂರು-ಹಳೇಬೀಡಿನ ದೇವಾಲಯದ ಶಿಲಾಬಾಲಕಿ ಯರು ತದ್ರೂಪಿನಲ್ಲಿ ನಿಂತು ಎಲ್ಲರ ಕಣ್ಮನ ಸೆಳೆದರು.

ಮಣ್ಣಿನಲ್ಲಿ ಅರಳಿದ ಕಲಾಕೃತಿಗಳು: ಶಾಲಾ ಆವರಣದಲ್ಲಿ ಜೇಡಿ ಮಣ್ಣಿನಿಂದ ಮೊಸಳೆ, ಮರದ ಮೇಲಿನ ಅಟ್ಟಣೆ, ಕಾಡುಕುಡಿಗಳಿಂದ ಜಿಂಕೆ, ಶಿವಲಿಂಗ, ಅಣೆಕಟ್ಟು, ಜಲಾಶಯ, ಮಾನವನ ಅಂಗಾಂಗಗಳು, ಗಾಂಧಿಧೀಜಿ ಸೇರಿ ವಿವಿಧ ಬಗೆಯ ಆಕರ್ಷಕ ಕಲಾಕೃತಿಗಳನ್ನು ನಿರ್ಮಿಸಿ ಕೈಚಳಕ ಪ್ರದರ್ಶಿಸಿದರು.

ಜಾನಪದ ರಂಗು: ಗಾವಡಗೆರೆ ಪಬ್ಲಿಕ್‌ ಶಾಲೆಯ ಮಕ್ಕಳ ವೀರಗಾಸೆ, ಪಟಕುಣಿತ, ಪೂಜಾಕುಣಿತ, ಡೊಳ್ಳು ಕುಣಿತ, ಮರಗಾಲಿನ ಕುಣಿತದ ಜಾನಪದ ನೃತ್ಯ ವೈಭವ, ಮನುಗನಹಳ್ಳಿ ಸರ್ಕಾರಿ ಪ್ರೌಢಶಾಲೆ ಮಕ್ಕಳ ಬೀಸುಕಂಸಾಳೆ, ಪಟಕುಣಿತದ ಮಜಲು, ಕಡೇಮನು ಗನಹಳ್ಳಿ ಸರ್ಕಾರಿ ಪ್ರೌಢಶಾಲೆ ಮಕ್ಕಳ ಪೂಜಾ ಕುಣಿತ, ಪಟಕುಣಿತದ ರಂಗು ಜಾನಪದವನ್ನು ಮೇಳೈಸಿತು.

ಸಾಂಸ್ಕೃತಿಕ ಸಂಭ್ರಮ: ಮಕ್ಕಳ ಭರತನಾಟ್ಯ, ಲಘುಸಂಗೀತ, ಭಾವಗೀತೆ, ಅಭಿನಯಗೀತೆ, ಭಕ್ತಿಗೀತೆಗಳಂತೂ ಸಾಂಸ್ಕೃತಿಕ ಸಂಭ್ರಮವನ್ನು ಉಣ ಬಡಿಸಿದರೆ, ಇನ್ನು ಪಠ್ಯಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಪಠಣ, ಹಿಂದಿ, ಇಂಗ್ಲಿಷ್‌ ಕಂಠಪಾಠ, ಆಶುಭಾಷಣ, ನವಿರಾದ ಹಾಸ್ಯ ಸೇರಿ ಎಲ್ಲಾ ಸ್ಪರ್ಧೆಗಳು ಆಕರ್ಷಕವಾಗಿತ್ತು. ಕಟ್ಟೆಮಳಲವಾಡಿಯ ವಿಕಲಚೇತನ ಅಶೋಕ್‌ನ ವಿವಿಧ ಪ್ರಾಣಿಗಳ ಮಿಮಿಕ್ರಿ ಪ್ರದರ್ಶನ ವಂತೂ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು.

ಪ್ರತಿಭೆಗಳಿಗೆ ಬೆನ್ನೆಲುಬಾಗಿರುವೆ: ಉದ್ಘಾಟನಾ ಸರಮಾರಂಭದಲ್ಲಿ ಮಾತನಾಡಿದ ಶಾಸಕ ಎಚ್‌ .ಪಿ.ಮಂಜುನಾಥ್‌, ಮಕ್ಕಳು ಅದ್ಬುತ ಕಲಾ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದರಲ್ಲೂ, ಹೆಣ್ಣು ಮಕ್ಕಳೇ ಹೆಚ್ಚಿನ ರೀತಿಯಲ್ಲಿ ಭಾಗವ ಹಿಸಿದ್ದು, ಗಂಡು ಮಕ್ಕಳು ಬೆರಳೆಣಿಕೆಯಷ್ಟಿದ್ದಾರೆ. ಮುಂದಿನ ದಿನಗಳಲ್ಲಿ ಆದ್ಯತೆ ನೀಡುವಂತೆ ಸೂಚಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಸ್ಪರ್ಧಿಗಳಿಗೆ ಸಹಕಾರ ನೀಡುವೆ ಎಂದು ಘೋಷಿಸಿದರು.

ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗಿ: ಬಿಇಒ ರೇವಣ್ಣ ಮಾತನಾಡಿ, ಈ ಸ್ಪರ್ಧೆಯಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಮೊದಲ ಸ್ಥಾನ ಪಡೆದವರು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗುವರೆಂದು ತಿಳಿಸಿದರು. ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಗೋವಿಂದೇಗೌಡ, ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಶಾಸಕ ಮಂಜುನಾಥ್‌ ಅವರು ಅಪಾರವಾಗಿ ಶ್ರಮಿಸಿದ್ದಾರೆ ಎಂದು ಪ್ರಶಂಸಿಸಿದರು. ಜಿಲ್ಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಯ್ಯ, ತಾಲೂಕು ಅಧ್ಯಕ್ಷ ಮೋಹನ್‌ ಕುಮಾರ್‌ ಮಾತನಾಡಿದರು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಆಶಾ, ಸ್ಥಾಯಿಸಮಿತಿ ಅಧ್ಯಕ್ಷೆ ಶ್ವೇತಾ, ತಾಲೂಕು ದೈಹಿಕಶಿಕ್ಷಣ ಪರಿವೀಕ್ಷಕ ಲೋಕೇಶ್‌, ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ, ಉಪಾಧ್ಯಕ್ಷ ರಂಗಸ್ವಾಮಿ, ಸಹಕಾರ ಸಂಘದ ಅಧ್ಯಕ್ಷ ಮಹದೇವ್‌, ಎಸ್‌ಡಿಎಂಸಿ ಅಧ್ಯಕ್ಷೆ ಶೈಲಜಾ ಪ್ರಕಾಶ್‌ ಅನೇಕರಿದ್ದರು.

ಟಾಪ್ ನ್ಯೂಸ್

1-aaatttt

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹೊತ್ತಿ ಉರಿದ ಬೆಂಕಿ

1-air-india

Emergency; ಟೇಕ್ ಆಫ್ ಆದ ಕೂಡಲೇ ತೊಂದರೆ: ತಪ್ಪಿದ ಭಾರಿ ವಿಮಾನ ಅವಘಡ

1-kajol

Viral video; ದುರ್ಗಾ ಪೂಜೆ ಸ್ಥಳದಲ್ಲೇ ಕಿಡಿ ಕಿಡಿಯಾದ ನಟಿ ಕಾಜೋಲ್!

1-agni

Agniveer; ಫೈರಿಂಗ್ ತರಬೇತಿ ವೇಳೆ ಪ್ರಾಣ ಕಳೆದುಕೊಂಡ ಇಬ್ಬರು ಅಗ್ನಿವೀರ್ ಗಳು

ISREL

UN posts ಮೇಲೆಯೇ ಇಸ್ರೇಲ್ ದಾಳಿ! ; 600 ಭಾರತೀಯ ಸೈನಿಕರು ಅಪಾಯದಲ್ಲಿ!!

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Haveri: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್… ಗೊರವಯ್ಯ ಕಾರ್ಣಿಕದ ನುಡಿ

Haveri: ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್… ಗೊರವಯ್ಯ ಕಾರ್ಣಿಕದ ನುಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-mysore

Mysore: ನಾಳೆ ಅರಮನೆ ನಗರಿಯಲ್ಲಿ ಐತಿಹಾಸಿಕ ಜಂಬೂಸವಾರಿ

13-mysore

Mysore Dasara: ಮೈಸೂರು ದಸರಾಗೆ ದಾಖಲೆ ಜನ!

Muda Case: 8 ಗಂಟೆ ಕಾಲ ಸಿಎಂ ಭಾಮೈದನ ವಿಚಾರಣೆ

Muda Case: 8 ಗಂಟೆ ಕಾಲ ಸಿಎಂ ಭಾಮೈದನ ವಿಚಾರಣೆ

001

Mysore Dasara: ಕಾಣ ಬನ್ನಿ … ಬೆಳಕಿನರಮನೆ

ಮೈಸೂರಲ್ಲೂ “ಜಾರಕಿಹೊಳಿ’ ಸಂಚಲನ; ಸಿಎಂ ಬದಲಾವಣೆ ಚರ್ಚೆ ಹಿನ್ನೆಲೆ ತೀವ್ರ ಕುತೂಹಲ

ಮೈಸೂರಲ್ಲೂ “ಜಾರಕಿಹೊಳಿ’ ಸಂಚಲನ; ಸಿಎಂ ಬದಲಾವಣೆ ಚರ್ಚೆ ಹಿನ್ನೆಲೆ ತೀವ್ರ ಕುತೂಹಲ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

14

Punjalkatte; ಸರಕಾರಿ ಶಾಲೆ ಉಳಿಸಲು ನವರಾತ್ರಿ ವೇಷ!

1-aaatttt

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹೊತ್ತಿ ಉರಿದ ಬೆಂಕಿ

1-air-india

Emergency; ಟೇಕ್ ಆಫ್ ಆದ ಕೂಡಲೇ ತೊಂದರೆ: ತಪ್ಪಿದ ಭಾರಿ ವಿಮಾನ ಅವಘಡ

1-kajol

Viral video; ದುರ್ಗಾ ಪೂಜೆ ಸ್ಥಳದಲ್ಲೇ ಕಿಡಿ ಕಿಡಿಯಾದ ನಟಿ ಕಾಜೋಲ್!

1-agni

Agniveer; ಫೈರಿಂಗ್ ತರಬೇತಿ ವೇಳೆ ಪ್ರಾಣ ಕಳೆದುಕೊಂಡ ಇಬ್ಬರು ಅಗ್ನಿವೀರ್ ಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.