![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 13, 2020, 10:35 PM IST
ಮೈಸೂರು: ಕೋವಿಡ್ ವೈರಸ್ ಹಾಟ್ ಸ್ಪಾಟ್ ಆಗು ಮೂಲಕ ಜಿಲ್ಲೆಯ ಜನರ ನಿದ್ದೆ ಗೆಡಿಸಿದ್ದ ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆಯು ಇದೀಗ ಕೋವಿಡ್ ವೈರಸ್ ಗೆ ಔಷಧ ತಯಾರಿಸಲು ಮುಂದಡಿಯಿಟ್ಟಿದೆ.
ರಾಜ್ಯ ಸರ್ಕಾರದಿಂದ ನಂಜನಗೂಡಿನ ಕಾರ್ಖಾನೆಯ ಪುನಾರಂಭಕ್ಕೆ ಅನುಮತಿ ದೊರೆತರೆ ಸದ್ಯದಲ್ಲಿಯೇ ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆಯಲ್ಲಿ ಕೋವಿಡ್ ಔಷಧಿ ಉತ್ಪಾದನಾ ಕಾರ್ಯ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ.
ಅಮೆರಿಕದ ಗಿಲೀಡ್ ಸೈನ್ಸಸ್ ಸಂಸ್ಥೆಯು ಕೋವಿಡ್ ಮಹಾಮಾರಿಗೆ ಔಷಧಿಯೊಂದನ್ನು ಪತ್ತೆಹಚ್ಚಿದ್ದು, ಆ ಔಷಧವನ್ನು ಅಮೆರಿಕದಲ್ಲಿ ಈಗಾಗಲೇ ಬಳಕೆ ಮಾಡಲಾಗುತ್ತಿದೆ.
ಗಿಲೀಡ್ ಸೈನ್ಸಸ್ ಸಂಸ್ಥೆ ಕಂಡು ಹಿಡಿದ ‘ರೆಮ್ಡೆಸಿವಿರ್’ನ ಔಷಧವನ್ನು ಭಾರತ ಸೇರಿದಂತೆ 128 ದೇಶಗಳಲ್ಲಿ ಉತ್ಪಾದನೆ ಮಾಡುವ ಹಕ್ಕನ್ನು ಇದೀಗ ಜುಬಿಲೆಂಟ್ ಕಂಪನಿ ಪಡೆದುಕೊಂಡಿದೆ.
ಕೋವಿಡ್ ಸೋಂಕು ಕರ್ನಾಟಕದಲ್ಲಿ ಹಬ್ಬುತ್ತಿದ್ದ ಪ್ರಾರಂಭದ ದಿನಗಳಲ್ಲಿ ಸೋಂಕಿನ ಹಾಟ್ ಸ್ಪಾಟ್ ಆಗಿ ಈ ಜುಬಿಲೆಂಟ್ ಕಂಪನಿ ಕುಖ್ಯಾತಿ ಪಡೆದುಕೊಂಡಿತ್ತು. ಜಿಲ್ಲೆಯಲ್ಲಿ 90 ಕೋವಿಡ್ ಸೋಂಕಿತರ ಪೈಕಿ 72 ಸೋಂಕಿತರು ಜುಬಿಲೆಂಟ್ ನೇರ ಸಂಪರ್ಕ ಹೊಂದಿದವರೇ ಆಗಿದ್ದರು. ಈ ಕಾರಣಕ್ಕೆ ಈ ಕಂಪನಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ, ಇದೀಗ ಜುಬಿಲೆಂಟ್ ಕಂಪನಿ ಕೋವಿಡ್ ಔಷಧ ತಯಾರಿಕೆಯ ಹಕ್ಕು ಪಡೆಯುವ ಮೂಲಕ ದೇಶದ ಗಮನ ಸೆಳೆದಿದೆ.
ನಂಜನಗೂಡು ಸೇರಿದಂತೆ ದೇಶದ ಏಳು ಕಡೆಗಳಲ್ಲಿ ಜುಬಿಲೆಂಟ್ ಕಾರ್ಖಾನೆಗಳು ಇವೆ. ನಂಜನಗೂಡು ಹೊರತುಪಡಿಸಿ ಉಳಿದ ಎಲ್ಲ ಕಡೆ ಶೀಘ್ರದಲ್ಲಿಯೇ ಕಾರ್ಖಾನೆಯ ಕೆಲಸ ಕಾರ್ಯಗಳು ಪುನರಾರಂಭಗೊಳ್ಳಲಿದೆ. ನಂಜನಗೂಡಿನಲ್ಲಿ ಕಾರ್ಖಾನೆ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದರೆ ಇಲ್ಲೂ ಕೂಡ ಕೋವಿಡ್ ವೈರಸ್ ಗೆ ಔಷಧ ತಯಾರಾಗಲಿದೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.