![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, May 26, 2021, 1:41 PM IST
ಎಚ್.ಬಿ.ಬಸವರಾಜು
ಎಚ್.ಡಿ.ಕೋಟೆ: ಕೊರೊನಾ ಹಾಗೂ ಲಾಕ್ಡೌನ್ನಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವಪರಿಸ್ಥಿತಿಯಲ್ಲಿ ವಾರದಲ್ಲಿ ಸತತ 4 ದಿನ ಅಂಗಡಿಗಳನ್ನು ಮುಚ್ಚುವ ತೀರ್ಮಾನ ಕೈಗೊಂಡಿರುವುದುಸರಿಯಲ್ಲ. ಇದರಿಂದ ಅಂದಿನ ದುಡಿಮೆಯಲ್ಲೇಅಂದಿನ ಹಣದಿಂದ ಹೊಟ್ಟೆ ತುಂಬಿಸಿಕೊಳ್ಳುವಕೂಲಿ ಕಾರ್ಮಿಕರಿಗೆ ಹೊಡೆತ ಬೀಳಲಿದೆ.ಮತ್ತೂಂದಡೆ 4 ದಿನ ಬಿಟ್ಟು ಅಂಗಡಿಗಳನ್ನುತೆರೆದಾಗ ಒಮ್ಮೆಲೆ ಜನರು ಮುಗಿ ಬೀಳುವುದರಿಂದ ಜನಜಂಗುಳಿ ನಿರ್ಮಾಣವಾಗಿ ಸೋಂಕು ಹರಡುವ ಸಾಧ್ಯತೆ ಇದೆ.
ಇದು ಅವ್ಯವಸ್ಥೆಯಿಂದ ಕೂಡಿದನಿಯಮವಾಗಿದೆ.ಬಹುತೇಕ ಕೂಲಿ ಕಾರ್ಮಿಕರನ್ನೇಹೊಂದಿರುವ ಪಟ್ಟಣಕ್ಕೆ ಈ ನಿಯಮಪಾಲಿಸುವುದು ಕಷ್ಟವಾಗಿದೆ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ.ಪಟ್ಟಣದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲುಭಾನುವಾರ ಸೋಮವಾರ ಮತ್ತು ಮಂಗಳವಾರಮಾತ್ರ ಬೆಳಗಿನ 6ಗಂಟೆಯಿಂದ 10ಗಂಟೆ ತನಕನಿಯಮದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆಅವಕಾಶ ನೀಡಲಾಗಿದೆ.
ಬುಧವಾರ, ಗುರುವಾರ,ಶುಕ್ರವಾರ ಮತ್ತು ಶನಿವಾರ ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿದೆ. ವೈದ್ಯಕೀಯ ಸೇವೆಗಳಿಗೆಮಾತ್ರ ಅವಕಾಶ ನೀಡಲಾಗಿದ್ದು, ನಾಲ್ಕು ದಿನಅಂಗಡಿಗಳನ್ನು ಸಂಪೂರ್ಣ ಬಂದ್ ಆಗಿರುತ್ತವೆ.ಹಾಲು ಮಾರಾಟದ ಅಂಗಡಿಗೆ ಬೆಳಗಿನ 6ರಿಂದ10ಗಂಟೆ ತನಕ ಮಾತ್ರ ಅವಕಾಶಕಲ್ಪಿಸಲಾಗಿದೆ.ಈ ಕಠಿಣ ನಿರ್ಬಂಧ ಪ್ರಕಾರ, ಮಂಗಳವಾರಅಗತ್ಯ ವಸ್ತುಗಳ ಖರೀದಿಗೆ ಕೊನೆಯ ದಿನ.
ಈ ದಿನಬೆಳಗಿನ 10ಗಂಟೆ ಕಳೆದರೆ ಇನ್ನು ಭಾನುವಾರಬೆಳಗಿನ ತನಕ ಅಂದರೆ ಸತತ ನಾಲ್ಕು ದಿನಯಾವುದೇ ಅಗತ್ಯವಸ್ತುಗಳ ಖರೀದಿಗೆ ಅವಕಾಶಇಲ್ಲ. ಅನಗತ್ಯವಾಗಿ ನಿಯಮ ಉಲ್ಲಂಘಿಸಿವ್ಯಾಪಾರ ವಹಿವಾಟು ನಡೆಸುವ ಅಂಗಡಿಗಳವಿರುದ್ಧ ಕೋವಿಡ್ ಮಾರ್ಗಸೂಚಿ ಅನ್ವಯಕಾನೂನು ಕ್ರಮ ಕೈಗೊಳ್ಳುವುದಾಗಿ ಪುರಸಭೆ ಎಚ್ಚರಿಕೆ ನೀಡಿದೆ. ಇದಕ್ಕಾಗಿ ಶಾಸಕ ಅನಿಲ್ ಚಿಕ್ಕಮಾದುಅವರು ತಾಲೂಕು ಅಧಿಕಾರಿಗಳ ಟಾಸ್ಕ್ಫೋರ್ಸ್ಸಮಿತಿ ಹಾಗೂ ವರ್ತಕರ ಸಭೆ ನಡೆಸಿ, ಈ ನಿಯಮಜಾರಿಗೆಕಟ್ಟುನಿಟ್ಟಿನ ಆದೇಶ ನೀಡಿದ್ದರು.ಹೀಗಾಗಿ ಪಟ್ಟಣದಲ್ಲಿ ಹೊಸ ನಿಯಮ ಜಾರಿಯಾಗಿದ್ದು, ಮಂಗಳವಾರ ಬಿಟ್ಟರೆ ಅಗತ್ಯ ವಸ್ತುಗಳಖರೀದಿಗೆ4ದಿನ ಕಾಯಬೇಕಾಗುತ್ತದೆ.
ಆದ್ದರಿಂದಗ್ರಾಹಕರು ಮಂಗಳವಾರ ವಸ್ತುಗಳನ್ನು ಕೊಳ್ಳಲುಅಂಗಡಿ, ಮಳಿಗೆಗಳು ಮುಂದೆ ಸಾಲಗಟ್ಟಿ ನಿಂತಿದ್ದರು. ಜನಜಂಗುಳಿ ನಿರ್ಮಾಣವಾಗಿತ್ತು. ಸಾಮಾಜಿಕ ಅಂತರ ಮಾಯವಾಗಿದ್ದು, ಬೇಕಾಬಿಟ್ಟಿಯಾಗಿಮಾಸ್ಕ್ ಧರಿಸಲಾಗಿತ್ತು. ಜೊತೆಗೆ ವಾಹನಗಳಸಂಚಾರಕೂಡ ಅಧಿಕವಾಗಿತ್ತು.
ಗುಂಪುಗೂಡಲು ಸಹಕಾರಿ: ವಾರದಲ್ಲಿ3ದಿನಮಾತ್ರ ವ್ಯಾಪಾರ ನಡೆಸಿ 4 ದಿನ ಬಂದ್ ಮಾಡುವುದರಿಂದ ಭಾನುವಾರ ಅಂಗಡಿಗಳು ಬಾಗಿಲು ತೆರೆಯುತ್ತಿದ್ದಂತೆಯೇ ಅಗತ್ಯ ವಸ್ತುಗಳ ಖರೀದಿಗೆ ಜನಮುಗಿ ಬೀಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ.ಒಮ್ಮೆಲೆ ದಿನಸಿ, ತರಕಾರಿ ಖರೀದಿಗೆ ಜನರುದುಂಬಾಲು ಬೀಳುತ್ತಾರೆ. ಅದರಲ್ಲೂ ಬೆಳಗ್ಗೆ ಮಾತ್ರಅವಕಾಶ ನೀಡಿರುವುದರಿಂದ ಈ ಅವಧಿಯಲ್ಲಿಜನರು ಗುಂಪುಗೂಡುತ್ತಾರೆ. ಜನದಟ್ಟಣೆಉಂಟಾಗುತ್ತದೆ. ಈ ವೇಳೆ ಸೋಂಕು ಹರಡುವಸಾಧ್ಯತೆ ಇರುತ್ತದೆ. ಈ ಹೊಸ ನಿಯಮಅಷ್ಟೊಂದು ಸಮಂಜಸವಾಗಿಲ್ಲ ಎಂಬ ಮಾತುಗಳುಸಾರ್ವಜನಿಕ ವಲಯದಲ್ಲಿಕೇಳಿ ಬರುತ್ತಿವೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.