![police crime](https://www.udayavani.com/wp-content/uploads/2024/07/police-crime-2-415x256.jpg)
Drought Relief: 4168 ರೈತರ ಖಾತೆಗೆ 2.25ಕೋಟಿ ಜಮೆ
11 ರೈತ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿದ ಶಾಸಕ ಹರೀಶ್ಗೌಡ
Team Udayavani, Jul 2, 2024, 6:44 PM IST
![Drought Relief: 4168 ರೈತರ ಖಾತೆಗೆ 2.25ಕೋಟಿ ಜಮೆ](https://www.udayavani.com/wp-content/uploads/2024/07/Drought-Relief-620x337.jpg)
ಹುಣಸೂರು: ಬರ ಪರಿಹಾರ ಯೋಜನೆಯಡಿ ತಾಲೂಕಿನ 4168 ರೈತರಿಗೆ 2.25 ಕೋಟಿ ರೂಗಳ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಅನಿಲ್ಕುಮಾರ್ ತಿಳಿಸಿದ್ದಾರೆ.
ಕಳೆದ ಸಾಲಿನಲ್ಲಿ ಬರದಿಂದಾಗಿ ತಾಲೂಕಿನಲ್ಲಿ 622.32 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆ ನಷ್ಟವಾಗಿತ್ತು. ಬೆಳೆ ನಷ್ಟದ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಲಾಗಿತ್ತು. ಅದರಂತೆ ಸರಕಾರದಿಂದ ಒಣ ಭೂಮಿಗೆ ಪ್ರತಿ ಹೆಕ್ಟೇರ್ಗೆ 8.5ಸಾವಿರ, ನೀರಾವರಿ ಬೆಳೆಗೆ 17ಸಾವಿರ ರೂ, ತೋಟಗಾರಿಕೆ ಬೆಳೆಗೆ ಪ್ರತಿ ಹೆಕ್ಟೇರ್ಗೆ 22,500 ಹಾಗೂ ರೇಷ್ಮೆ ಬೆಳೆಗೆ 6,500 ರಿಂದ 7ಸಾವಿರ ರೂವರೆಗೆ ದೊರೆಯಲಿದೆ.
ಪ್ರತಿ ರೈತನಿಗೆ ಎರಡು ಹೆಕ್ಟೇರ್ ಬೆಳೆ ನಷ್ಟಕ್ಕೆ ಮಾತ್ರ ಪರಿಹಾರ ಸಿಗಲಿದೆ. ಕಡಿಮೆ ಭೂಮಿ ಹೊಂದಿರುವ ರೈತರಿಗೆ ಕುಂಟೆ ಲೆಕ್ಕದಲ್ಲಿ ಪರಿಹಾರ ದೊರೆಯಲಿದೆ. ಆದರೆ ವಾಣಿಜ್ಯ ಬೆಳೆಯಾದ ತಂಬಾಕು, ಶುಂಠಿ ಬೆಳೆ ನಷ್ಟಕ್ಕೆ ಪರಿಹಾರ ಸಿಗುವುದಿಲ್ಲವೆಂದರು.
ಪರಿಹಾರದ ಹಣ ಜಮೆಯಾಗದ ರೈತರು ಸಮಸ್ಯೆಗಳಿದ್ದಲ್ಲಿ ತಾಲೂಕು ಕಚೇರಿ, ನಾಡ ಕಚೇರಿ, ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ ಎಂದು ಸಹಾಯಕ ಕೃಷಿ ನಿರ್ಧೇಶಕ ಅನಿಲ್ಕುಮಾರ್ ಮನವಿ ಮಾಡಿದರು.
11 ರೈತ ಕುಟುಂಬಗಳಿಗೆ ಪರಿಹಾರ
2023-24ನೇ ಸಾಲಿನಲ್ಲಿ ತಾಲೂಕಿನಲ್ಲಿ 13ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ 11ಮಂದಿಗೆ ಸರಕಾರದ ವತಿಯಿಂದ ತಲಾ ಐದು ಲಕ್ಷರೂಗಳ ಪರಿಹಾರದ ಚೆಕ್ನ್ನು ಶಾಸಕ ಜಿ.ಡಿ.ಹರೀಶ್ಗೌಡರು ತಾಲೂಕು ಕಚೇರಿಯಲ್ಲಿ ಮೃತರ ಕುಟುಂಬದವರಿಗೆ ವಿತರಿಸಿ, ಹಣವನ್ನು ಸದ್ಬಳಕೆ ಮಾಡಿಕೊಳ್ಳಿರೆಂದು ಸಲಹೆ ನೀಡಿದರು.
ಈ ಕುಟುಂಬದ ಮಂದಿಗೆ ಪ್ರತಿ ಮಾಹೆ ತಲಾ ಎರಡು ಸಾವಿರ ರೂ ಮಾಶಾಸನ, ಆರೋಗ್ಯ ಕಾರ್ಡ್ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯಲಿದೆ. ಇಬ್ಬರು ರೈತರ ಅರ್ಜಿ ತಿರಸ್ಕೃತಗೊಂಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಅನಿಲ್ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
![police crime](https://www.udayavani.com/wp-content/uploads/2024/07/police-crime-2-415x256.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.