ಪದೇ ಪದೇ ಸುಟ್ಟು ಹೋಗುವ ಟ್ರಾನ್ಸ್ಫಾರ್ಮರ್
Team Udayavani, May 22, 2017, 1:03 PM IST
ಎಚ್.ಡಿ.ಕೋಟೆ: ರೈತರ ಜಮೀನುಗಳಲ್ಲಿ ಕೊರೆದಿರುವ ಬೋರ್ಗಳಿಗೆ ವಿದ್ಯುತ್ ಸಂಪರ್ಕ ನೀಡುವ ಸಲುವಾಗಿ ಸೆಸ್ಕ್ ವತಿಯಿಂದ ಅಳವಡಿಸಿರುವ ಟ್ರಾನ್ಸ್ಫಾರ್ಮರ್ ಹೆಚ್ಚಿನ ಲೋಡ್ನಿಂದಾಗಿ ಪದೇ ಪದೇ ಸುಟ್ಟುಹೊಗುತ್ತಿದ್ದು, ಈ ಭಾಗಕ್ಕೆ ಹೆಚ್ಚುವರಿ ಅಡಿಸನಲ್ ಟಿ.ಸಿ ಗಳನ್ನು ಅಳವಡಿಸಬೇಕೆಂದು ಪಟ್ಟಣದ ರೈತರು ಆಗ್ರಹಿಸಿದ್ದಾರೆ.
ತಾಲೂಕಿನ ಸೋನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಈ ಪರಿಸ್ಥಿತಿ ಕಂಡು ಬಂದಿದ್ದು, ಅನೇಕ ವರ್ಷಗಳ ಹಿಂದೆ ಟ್ರಾನ್ಸ್ಫಾರ್ಮರ್ವೊಂದನ್ನು ಸೆಸ್ಕ್ ನವರು ಅಳವಡಿಸಿದ್ದು, ಇದರಿಂದ ಪ್ರಾರಂಭದಲ್ಲಿ ಆರೇಳು ಜನ ರೈತರು ಮಾತ್ರ ತಮ್ಮ ಬೋರ್ಗೆ ಸಂಪರ್ಕ ಪಡೆದಿದ್ದರು.
ಆದರೆ ಕಳೆದ 3 ವರ್ಷಗಳಿಂದ ತಲೆದೂರಿದ್ದ ತೀವ್ರ ಬರದಿಂದ ಮಳೆ ಇಲ್ಲದೇ ತತ್ತರಿಸಿದ್ದ ಇಲ್ಲಿನ ಬಹುತೇಕ ಮಂದಿ ರೈತರು ತಮ್ಮ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಸಿ ದ್ವಿ-ದಳ ಧಾನ್ಯ ಬೆಳೆಗಳು ಸೇರಿದಂತೆ ಕಬ್ಬು ಇನ್ನಿತರ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದರು. ಇಂದು ಈ ಭಾಗದಲ್ಲಿ ಅನೇಕ ರೈತರು ಬೋರ್ ಕೊರೆಸಿದ್ದು, ಇಲ್ಲಿ ಇರುವ ಒಂದೇ ಟ್ರಾನ್ಸ್ಫಾರ್ಮರ್ನಿಂದ ಸುಮಾರು 30ಕ್ಕೂ ಹೆಚ್ಚು ರೈತರು ಸಂಪರ್ಕ ಪಡೆದಿದ್ದಾರೆ.
ಈ ಭಾಗದಲ್ಲೂ ಪ್ರತಿನಿತ್ಯ ಅನಿಯಮಿತ ಲೋಡ್ ಸೆಡ್ಡಿಂಗ್ ಇರುವುದರಿಂದ ಕರೆಂಟ್ ಬಂದ ತಕ್ಷಣ ಎಲ್ಲ ರೈತರ ಬೋರ್ನ ಮೋಟರ್ ಚಾಲನೆ ಗೊಳ್ಳುವುದರಿಂದ ಟ್ರಾನ್ಸ್ಫಾರ್ಮರ್ಗೆ ಲೋಡ್ ಹೆಚ್ಚಾಗಿ ವಾರದಲ್ಲಿ ಎರಡು, ಮೂರು ದಿನಕ್ಕೊಮ್ಮೆ ಸುಟ್ಟು ಹೋಗುತ್ತಿದ್ದು, ಸೆಸ್ಕ್ ಸಿಬ್ಬಂದಿ ಬಂದು ಬದಲಿ ಟ್ರಾನ್ಸ್ಫಾರ್ಮರ್ ಅಳವಡಿಸುವವರೆಗೂ ರೈತರು ಜಮೀನಿನಲ್ಲಿ ಬೆಳೆದಿರುವ ಬೆಳೆಗಳಿಗೆ ನೀರು ಹಾಯಿಸಲು ಆಗದೆ ಪರಿತಪಿಸಬೇಕಾದ ದುಸ್ಥಿತಿ ನಿರ್ಮಾಣವಾಗುತ್ತಿದೆ.
ಈ ಬಗ್ಗೆ ರೈತರು ಹಲವಾರು ಬಾರಿ ಪಟ್ಟಣದ ಸೆಸ್ಕ್ ಅಧಿಕಾರಿಗಳಿಗೆ ಈ ಭಾಗಕ್ಕೆ ಎರಡು ಹೆಚ್ಚುವರಿ ಅಡಿಸನಲ್ ಟ್ರಾನ್ಸ್ಫಾರ್ಮರ್ ಅಳವಡಿಸಬೇಕೆಂದು ಮನವಿ ಮಾಡಿಕೊಂಡರು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟ ಸೆಸ್ಕ್ನ ಮೇಲಾಧಿಕಾರಿಗಳು, ಇಲ್ಲಿನ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಈ ಭಾಗದಲ್ಲಿ ಹೆಚ್ಚುವರಿ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಲು ಕ್ರಮವಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ನಾನು ಸೇರಿದಂತೆ 30ಕ್ಕೂ ಹೆಚ್ಚು ರೈತರು ಇಲ್ಲಿ ಇರುವ ಒಂದೇ ಟ್ರಾನ್ಸ್ಫಾರ್ಮರ್ನಿಂದ ನಮ್ಮ ಜಮೀನುಗಳ ಬೋರ್ಗಳಿಗೆ ಸಂಪರ್ಕ ಪಡೆದಿದ್ದು, ಟಿ.ಸಿ ಲೋಡ್ ತಡೆಯದೇ ಪದೇ ಪದೇ ಸುಟ್ಟು ಹೋಗುತ್ತಿದೆ. ಹಾಗಾಗಿ ಈ ಭಾಗಕ್ಕೆ ಎರಡು ಅಡಿಶನಲ್ ಟಿ.ಸಿ ಅಳವಡಿಸುವಂತೆ ಸೆಸ್ಕ್ ಅಧಿಕಾರಿಗಳನ್ನು ನಾಮ ಹಲವು ಬಾರಿ ಕೇಳಿಕೊಂಡರು ಇನ್ನು ಅಳವಡಿಸಿಲ್ಲ ಶೀಘ್ರ ಅಡಿಶಿನಲ್ ಟಿ.ಸಿ ಅಳವಡಿಸಿ ಅನುಕೂಲ ಮಾಡಿಕೊಡಿ.
-ಮಂಜೇಗೌಡ, ಸೋನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಮಹಿಷಾ ಪ್ರತಿಮೆ ಪುಷ್ಪಾರ್ಚನೆಗೆ ಪೊಲೀಸರ ತಡೆ: ಆಕ್ರೋಶ
Mysuru: ನಾನು ಹೆದರುವ, ಜಗ್ಗುವ, ಬಗ್ಗುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
K.S.Bhagawan ವಿವಾದ;ಮಾನ ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು…
Udupi: ಚಾಮುಂಡಿ ಬೆಟ್ಟದ ಮೇಲೆ ಮಹಿಷ ದಸರಾ ಸರಿಯಲ್ಲ: ಸಂಸದ ಯದುವೀರ್
Mysuru ಸಾಂಸ್ಕೃತಿಕ ನಗರಿಯಲ್ಲಿ ರೇವ್ ಪಾರ್ಟಿ: ಪೊಲೀಸ್ ದಾಳಿ, 50ಕ್ಕೂ ಹೆಚ್ಚು ಮಂದಿ ಬಂಧನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Chitradurga: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ… ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ
Influencer: ತನ್ನನ್ನು ತಾನೇ ಮದುವೆಯಾಗಿದ್ದ 26ರ ಯುವತಿ ಕಟ್ಟಡದಿಂದ ಜಿಗಿದು ಆ*ತ್ಮಹ*ತ್ಯೆ
Shivamogga: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ… ಅಧಿಕಾರಿಗಳಿಂದ ದಾಳಿ
BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’
Israel: ಹಮಾಸ್,ಹೆಜ್ಬುಲ್ಲಾ, ಸಿರಿಯಾ ಜೊತೆಗೆ ಯೆಮೆನ್ ಹೌತಿ ನೆಲೆಗಳ ಮೇಲೆ ಇಸ್ರೇಲ್ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.