ಮಹದಾಯಿ ನೀರಿಲ್ಲದಿದ್ರೂ ಮದ್ಯಕ್ಕೆ ಬರವಿಲ್ಲ!


Team Udayavani, Jan 2, 2018, 6:25 AM IST

Happy-New-Year.jpg

ಮೈಸೂರು: 2017ನೇ ವರ್ಷವನ್ನು ಬೀಳ್ಕೊಟ್ಟು, 2018ನೇ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕರ್ನಾಟಕದ ಮದ್ಯಪ್ರಿಯರು, ಭಾರೀ ಕಿಕ್‌ ಏರಿಸಿಕೊಂಡಿದ್ದಾರೆ.

ಡಿಸೆಂಬರ್‌ 30 ಮತ್ತು 31 ವಾರಾಂತ್ಯದ ಜತೆಗೆ ವರ್ಷಾಂತ್ಯವೂ ಆಗಿದ್ದರಿಂದ ಹೊಸ ವರ್ಷಾಚರಣೆಯನ್ನು ಭರ್ಜರಿಯಾಗಿಯೇ ಆಚರಿಸಲು ಪ್ಲಾನ್‌ ಮಾಡಿಕೊಂಡಿದ್ದ ಮದ್ಯಪ್ರಿಯರು, ಎರಡೂ ದಿನಗಳ ಕಾಲ ಎಣ್ಣೆ ಹೊಳೆಯಲ್ಲಿ ಮಿಂದೆದ್ದಿರುವುದರಿಂದ ರಾಜ್ಯದಲ್ಲಿ ಈ ಎರಡು ದಿನಗಳಲ್ಲಿ ಬರೋಬ್ಬರಿ 200 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಡಿಸೆಂಬರ್‌ ತಿಂಗಳ ಮದ್ಯ ಮಾರಾಟದಲ್ಲಿ 245 ಕೋಟಿ ರೂ. ಹೆಚ್ಚಳವಾಗಿದೆ. 2016ರ ಡಿಸೆಂಬರ್‌ನಲ್ಲಿ ಅಂದಾಜು 1,855 ಕೋಟಿ ರೂ. ಮದ್ಯ ಎತ್ತುವಳಿಯಾಗಿದ್ದರೆ, 2017ರ ಡಿಸೆಂಬರ್‌ನಲ್ಲಿ 2,100 ಕೋಟಿ ರೂ. ಮೌಲ್ಯದ ಮದ್ಯ ಎತ್ತುವಳಿಯಾಗಿದೆ.

ಕರ್ನಾಟಕ ರಾಜ್ಯ ಪಾನೀಯ ನಿಗಮದ ದಾಸ್ತಾನು ಮಳಿಗೆಗಳಲ್ಲಿ ಶನಿವಾರ 166 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾದರೆ, ಭಾನುವಾರ 34.50 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.

ವರ್ಷಾಂತ್ಯದ ದಿನಗಳು ಶನಿವಾರ, ಭಾನುವಾರವೇ ಬಂದಿದ್ದರಿಂದ ಹೆಚ್ಚಿನ ಮದ್ಯಪ್ರಿಯರು ಶನಿವಾರವೇ ಎರಡು ದಿನಗಳಿಗೆ ತಮಗೆ ಬೇಕಾದಷ್ಟು ಮದ್ಯವನ್ನು ಖರೀದಿಸಿ ಕೊಂಡೊಯ್ದಿದ್ದಾರೆ. ಹೀಗಾಗಿ ಡಿ.30ರ ಶನಿವಾರ ಸಾಮಾನ್ಯ ದಿನಗಳಿಗಿಂತ ನಾಲ್ಕು ಪಟ್ಟು ಹೆಚ್ಚಿನ ಮದ್ಯ ಮಾರಾಟವಾಗಿದೆ. ರಾಜಾÂದ್ಯಂತ ಇರುವ ನಿಗಮದ 69 ದಾಸ್ತಾನು ಮಳಿಗೆಗಳಿಂದ ಅಬಕಾರಿ ಇಲಾಖೆಯವರು ಆರ್‌ಟಿಜಿಎಸ್‌ ಮೂಲಕವೇ ಮದ್ಯವನ್ನು ಎತ್ತುವಳಿ ಮಾಡುತ್ತಾರೆ. 

ಶೇ.60ರಷ್ಟು ಮದ್ಯ ಎತ್ತುವಳಿ ಆರ್‌ಟಿಜಿಎಸ್‌ ಮೂಲಕವೇ ನಡೆಯುತ್ತದೆ. ಆದರೆ, ಡಿ.31ರ ಭಾನುವಾರ ಕೂಡ ಪಾನೀಯ ನಿಗಮದ ದಾಸ್ತಾನು ಮಳಿಗೆಗಳು ಕಾರ್ಯ ನಿರ್ವಹಿಸಲು ಶನಿವಾರ ಸಂಜೆ ವೇಳೆಗೆ ತೀರ್ಮಾನ ಕೈಗೊಂಡಿದ್ದು ಹಾಗೂ ಭಾನುವಾರ ಬ್ಯಾಂಕ್‌ಗಳು ರಜೆ ಇದ್ದುದರಿಂದ ಆರ್‌ಟಿಜಿಎಸ್‌ ಮಾಡಲಾಗದೆ ಎತ್ತುವಳಿ ಕಡಿಮೆಯಾಗಿದೆ ಎನ್ನುತ್ತಾರೆ ಪಾನೀಯ ನಿಗಮದ ಅಧಿಕಾರಿಗಳು.ಶನಿವಾರ 147.62 ಕೋಟಿ ರೂ. ಮೌಲ್ಯದ ಐಎಂಎಲ್‌ ಎಂದು ಕರೆಯಲಾಗುವ ವಿಸ್ಕಿ, ಬ್ರಾಂಡಿ ಮೊದಲಾದ ಪಾನೀಯಗಳು ಮಾರಾಟವಾಗಿದ್ದರೆ, 18.66 ಕೋಟಿ ರೂ. ಮೌಲ್ಯದ ಬಿಯರ್‌ ಮಾರಾಟವಾಗಿದೆ.

ಇನ್ನು ವರ್ಷದ ಕಡೆಯ ದಿನವಾದ ಡಿ.31ರಂದು 29.10 ಕೋಟಿ ರೂ. ಮೌಲ್ಯದ ಐಎಂಎಲ್‌ ಮದ್ಯ ಮಾರಾಟವಾಗಿದ್ದರೆ, 5.40 ಕೋಟಿ ರೂ. ಮೌಲ್ಯದ ಬಿಯರ್‌ ಮಾರಾಟವಾಗಿದೆ.

ಹೊಸ ವರ್ಷಾಚರಣೆಗೆ ಮಧ್ಯರಾತ್ರಿ 1 ಗಂಟೆವರೆಗೆ ಅವಕಾಶ ನೀಡಿದ್ದರಿಂದ ನಗರ ಮತ್ತು ಪಟ್ಟಣ ಪ್ರದೇಶಗಳ ಬಾರ್‌ ಮತ್ತು ವೈನ್‌ಶಾಪ್‌ಗ್ಳಲ್ಲಿ ಮಧ್ಯರಾತ್ರಿವರೆಗೂ ಮದ್ಯಪ್ರಿಯರ ಸರತಿ ಸಾಲು ಕಂಡುಬಂತು. ಗ್ರಾಮೀಣ ಪ್ರದೇಶದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಗುಂಪು ಗುಂಪಾಗಿ ಬಾರ್‌ಗಳಿಗೆ ಬಂದು ತಮ್ಮ ನೆಚ್ಚಿನ ಬ್ರಾಂಡ್‌ ಖರೀದಿಸಿ ಕೊಂಡೊಯ್ದು, ಗೆಳೆಯರ ಜೊತೆ ಸೇರಿ ಮದ್ಯ ಸೇವಿಸುವ ಮೂಲಕ 2017ನೇ ವರ್ಷವನ್ನು ಬೀಳ್ಕೊಟ್ಟು, 2018ನೇ ಹೊಸ ವರ್ಷವನ್ನು ಸಖತ್‌ ಟೈಟ್‌ ಆಗಿ ಬರಮಾಡಿಕೊಂಡಿದ್ದಾರೆ.

– ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kota-shivanand

ಕಾಳಿಂಗ ನಾವಡ ಪ್ರಶಸ್ತಿಗೆ ಕೋಟ ಶಿವಾನಂದ ಆಯ್ಕೆ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

BYV

Talk Fight: ಯಾರು ಏನೇ ಅಂದ್ರೂ ಬಿಜೆಪಿ ಕಾರ್ಯಕರ್ತರು ನನ್ನ ಒಪ್ಪಿದ್ದಾರೆ: ವಿಜಯೇಂದ್ರ

COngress-Meet

Munirathna:ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ; ಸಮುದಾಯದ ಸಚಿವ, ಶಾಸಕರಿಂದ ಸಿಎಂಗೆ ಮನವಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.