![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jun 12, 2022, 11:20 PM IST
ಹುಣಸೂರು : ಮಾಹಿತಿ ಹಕ್ಕು ಕಾಯ್ದೆಯಡಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಕಾಲದಲ್ಲಿ ಮಾಹಿತಿ ನೀಡದೆ, ಆಯೋಗದ ಆದೇಶವನ್ನು ಪಾಲಿಸದ ಹುಣಸೂರು ನಗರಸಭೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಕಂದಾಯಾಧಿಕಾರಿಗೆ 20 ಸಾವಿರ ರೂ ದಂಡ ವಿಧಿಸಿದೆ.
ಹುಣಸೂರಿನ ಜೆ.ಬಿ.ಒಬೆದುಲ್ಲಾರವರು ಕಳೆದ ವರ್ಷದ ಫೆಬ್ರವರಿ, ಮಾರ್ಚ್ನಲ್ಲಿ ಹತ್ತು ಮಂದಿಯ ಖಾತೆದಾರರಿಗೆ ಸಂಬಂಧಿಸಿದ ನಮೂನೆ- 3ರಡಿ 2014-17 ರವರೆಗೆ ಶುಲ್ಕ ಪಾವತಿಸಿರುವ ಬಗ್ಗೆ ರಸೀದಿಗಳ ನಕಲು ಕೋರಿದ್ದರು. ದಾಖಲೆ ನೀಡಲು ವಿಫಲವಾಗಿದ್ದರ ವಿರುದ್ದ ಕರ್ನಾಟಕ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಹಾಜರಾದ ಕಂದಾಯಾಧಿಕಾರಿ ಸಿದ್ದರಾಜ್ ತಾವು ಹೊಸಬರಾಗಿದ್ದು, ಮಾಹಿತಿ ನೀಡಲು 15 ದಿನಗಳ ಕಾಲ ಕಾಲಾವಕಾಶ ಕೋರಿದ್ದರು, ಆದರೆ ಕಂದಾಯಾಧಿಕಾರಿ ಮಾಹಿತಿಯನ್ನು ನೀಡದೆ, ಆಯೋಗದ ವಿಚಾರಣೆಗೂ ಹಾಜರಾಗದ್ದನ್ನು ಗಂಭೀರವಾಗಿ ಪರಿಗಣಿಸಿ, ಪ್ರಕರಣಕ್ಕೆ ತಲಾ 10 ಸಾವಿರದಂತೆ 20 ಸಾವಿರ ರೂ ದಂಡ ವಿಧಿಸಿ, ದಂಡದ ಹಣವನ್ನು ಜೂನ್ ಮತ್ತು ಜುಲೈ ಮಾಹೆಯ ಸಂಬಳದಲ್ಲಿ ರೂ 10 ಸಾವಿರದಂತೆ ಕಡಿತಗೊಳಿಸಿ ಸರಕಾರಕ್ಕೆ ಜಮಾ ಮಾಡುವಂತೆ ರಾಜ್ಯ ಮಾಹಿತಿ ಆಯುಕ್ತ ಡಾ.ಕೆ.ಇ.ಕುಮಾರಸ್ವಾಮಿಯವರು ಆದೇಶಿಸಿದ್ದು, ಜಮಾ ಮಾಡಿದ ರಸೀದಿಯೊಂದಿಗೆ ಅದರ ಅನುಪಾಲನ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಪೌರಾಯುಕ್ತರಿಗೆ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ : ಲಾಡ್ಜ್ ಮೇಲೆ ದಾಳಿ : ಮತದಾರರಿಗೆ ಹಂಚಲು ತಂದಿದ್ದ ನಗದು, ಪ್ರಚಾರ ಸಾಮಗ್ರಿ ವಶ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.