![vijayapura](https://www.udayavani.com/wp-content/uploads/2024/07/vijayapura-415x249.jpg)
Hunsur; ಮನೆಗೆ ಕನ್ನ ಹಾಕಿದ ಕಳ್ಳರಿಂದ ಕೋಟ್ಯಂತರ ರೂ. ನಗ, ನಗದು ದರೋಡೆ
Team Udayavani, Jun 30, 2024, 11:27 PM IST
![robbers](https://www.udayavani.com/wp-content/uploads/2024/06/robbers-1-620x366.jpg)
ಹುಣಸೂರು: ಮನೆ ಹಿಂಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ಕೋಟ್ಯಂತರ ರೂ ನಗದು, ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಭಾನುವಾರ ಸಂಜೆ ನಗರದ ಮಂಜುನಾಥ ಬಡಾವಣೆಯಲ್ಲಿ ನಡೆದಿದೆ.
ಗೋಕುಲ ರಸ್ತೆಯ ಸಗಟು ರಸಗೊಬ್ಬರ ವ್ಯಾಪಾರಿ ಗಿರೀಶ್ ಎಂಬುವವರ ಮನೆಯಲ್ಲಿ ದರೋಡೆ ನಡೆದಿದ್ದು, ಭಾನುವಾರ ಸಂಜೆ ಕುಟುಂಬದವರು ಮನೆಯಲ್ಲಿರಲಿಲ್ಲ. ಈ ವೇಳೆ ತಾಯಿಯನ್ನು ಬಿಟ್ಟು ಬರಲು ಮನೆ ಬೀಗ ಹಾಕಿ ಹೊಗಿದ್ದ ವೇಳೆ ಹಿಂಬಾಗಿಲು ಮುರಿದು ಒಳ ಪ್ರವೇಶಿಸಿರುವ ಕಳ್ಳರು ಬೀರು ಬೀಗ ಒಡೆದು ತಿಚೋರಿಯಲ್ಲಿದ್ದು 1.80 ಕೋಟಿರೂ ನಗದು ಹಾಗೂ 22 ಲಕ್ಷರೂ ಬೆಲೆ ಬಾಳುವ ಚಿನ್ನಾಭರಣ ದರೋಡೆ ಮಾಡಿ ಹಿಂಬಾಗಿಲಿನಿಂದಲೇ ಪರಾರಿಯಾಗಿದ್ದಾರೆ.
ತಾಯಿಯನ್ನು ಬಿಟ್ಟು ರಾತ್ರಿ ಮನೆಗೆ ಬಂದ ಗಿರೀಶ್ ಬೀಗ ತೆಗೆದು ಒಳ ಪ್ರವೇಶಿಸಿದ ವೇಳೆ ಹಿಂದಿನ ಬಾಗಿಲು ತೆಗೆದಿರುವುದನ್ನ ಕಂಡು ಒಳಗೆ ಹೋಗಿ ನೋಡಿದ ವೇಳೆ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ರಾತ್ರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸ್ಥಳಕ್ಕೆ ಎಸ್ ಪಿ ಸೀಮಾ ಲಾಟ್ಕರ್. ಅಡಿಷನಲ್ ಎಸ್.ಪಿ. ಡಾ.ನಂದಿನಿ. ಡಿವೈಎಸ್ ಪಿ ಗೋಪಾಲಕೃಷ್ಣ. ಇನ್ಸ್ ಪೆಕ್ಟರ್ ಸಂತೋಷ್ ಕಶ್ಯಪ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಬೇಕಿದೆ.
ಟಾಪ್ ನ್ಯೂಸ್
![vijayapura](https://www.udayavani.com/wp-content/uploads/2024/07/vijayapura-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![vijayapura](https://www.udayavani.com/wp-content/uploads/2024/07/vijayapura-150x90.jpg)
Vijayapura; ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಹಲವರು ನಾಪತ್ತೆ, ಓರ್ವನ ಶವ ಪತ್ತೆ
![3-crime](https://www.udayavani.com/wp-content/uploads/2024/07/3-crime-150x90.jpg)
Crime News: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
![Krishna-Byregowda](https://www.udayavani.com/wp-content/uploads/2024/07/Krishna-Byregowda-150x90.jpg)
DK, Udupi: ಕಾಲು ಸಂಕಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಕೃಷ್ಣ ಭೈರೇಗೌಡ
![Kishkindha Anjanadri ,ಅಂಜನಾದ್ರಿ ಹುಂಡಿ,Africa, Italy, England currency](https://www.udayavani.com/wp-content/uploads/2024/07/TEMPLE-150x87.jpg)
Kishkindha ಅಂಜನಾದ್ರಿ ಹುಂಡಿಯಲ್ಲಿ ಆಫ್ರಿಕಾ, ಇಟಲಿ, ಇಂಗ್ಲೆಂಡ್ ಕರೆನ್ಸಿ
![ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ](https://www.udayavani.com/wp-content/uploads/2024/07/eshwar-150x83.jpg)
Trekking: ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.