![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 16, 2022, 9:04 PM IST
ಹುಣಸೂರು: ಕೆ.ಆರ್.ನಗರ ತಾಲೂಕಿನ ಹಳ್ಳಿಗಳಲ್ಲಿ ಅಡ್ಡಾಡಿ ಅವಾಂತರ ಸೃಷ್ಟಿಸಿದ್ದ ಎರಡು ಸಲಗಗಳನ್ನು ತಾಲೂಕಿನ ಅರಬ್ಬಿತಿಟ್ಟು ಅರಣ್ಯ ಪ್ರದೇಶಕ್ಕೆ ಗುರುವಾರ ರಾತ್ರಿ ಸೇರಿಸುವಲ್ಲಿ ಯಶಸ್ವಿಯಾದ ಅರಣ್ಯ ಸಿಬಂದಿ, ಅಲ್ಲಿಂದ ಕಾಡಿಗಟ್ಟುವ ಹರಸಾಹಸ ಪಟ್ಟರೂ ಯಶಸ್ವಿಯಾಗದೆ ಅಲ್ಲಿಯೇ ಬೀಡು ಬಿಟ್ಟಿವೆ.
ಈ ಸಲಗಗಳು ಅರಬ್ಬಿತಿಟ್ಟು ಅರಣ್ಯ ಪ್ರದೇಶದ ಸುತ್ತಮುತ್ತಲಿನ ಕೊಳಗಟ್ಟ,ಕುಪ್ಪೆ,ರಾಯನಹಳ್ಳಿ ಮತ್ತಿತರ ಕಡೆ ಅಡ್ಡಾಡಿ ಬೆಳೆಗಳನ್ನು ತಿಂದು-ತುಳಿದು ನಾಶಪಡಿಸಿವೆ. ಭೀಮ ಮತ್ತು ಮಹೇಂದ್ರ ಸಾಕಾನೆಗಳು ಸಾಕಷ್ಟು ಸಾಹಸಮೆರೆದರೂ ಮತ್ತೆ ಅರಬ್ಬಿತಿಟ್ಟು ಅರಣ್ಯ ಪ್ರದೇಶವನ್ನು ಸೇರಿಕೊಂಡಿವೆ.
ಸಾಕಾನೆ ಜೊತೆಗೆ ಕುಮ್ಕಿ ಆನೆಯನ್ನು ಸಹ ಕಾರ್ಯಾಚರಣೆಯಲ್ಲಿ ಬಳಸಿದ್ದು, ರಾತ್ರಿ ವೇಳೆ ಕಾಡಿಗಟ್ಟಲು ವಿಶೇಷ ಶ್ರಮ ಹಾಕಲಾಗಿದೆ. ಒಂದೊಮ್ಮೆ ಸಾದ್ಯವಾಗದಿದ್ದಲ್ಲಿ ಅವುಗಳನ್ನು ಸೆರೆ ಹಿಡಿಯಲು ಅನುಮತಿಗೆ ಪತ್ರ ಬರೆಯಲಾಗಿದ್ದು, ಅನುಮತಿ ಸಿಕ್ಕಲ್ಲಿ ಅರವಳಿಗೆ ನೀಡಿ ಸೆರೆ ಹಿಡಿಯಲಾಗುವುದೆಂದು ಡಿಸಿಎಫ್ ಸೀಮಾ ಮಾಹಿತಿ ನೀಡಿದ್ದಾರೆ.
ಮಹಿಳೆಗೆ ಗಾಯ
ಕೆ.ಆರ್.ನಗರ ಕಡೆಯಿಂದ ಬಂದ ಕಾಡಾನೆಗಳು ಗುರುವಾರ ರಾತ್ರಿ ಅರಬನ್ಬಿ ತಿಟ್ಟು ಅರಣ್ಯದಲ್ಲಿ ಬೀಡು ಬಿಟ್ಟಿದ್ದವು, ಆದರೆ ಶುಕ್ರವಾರ ಬೆಳಗ್ಗೆ ಮತ್ತೆ ತನ್ನ ಉಪಟಳ ಮುಂದುವರೆಸಿದ್ದು, ಶುಕ್ರವಾರ ತಾಲೂಕಿನ ಕೊಳಗಟ್ಟ ಗ್ರಾಮದ ಮಹೇಶ್ರ ಪತ್ನಿ ಸಿದ್ದಮ್ಮ ಅವರೆಕಾಯಿ ಬಿಡಿಸುವಾಗ ಅರಬ್ಬಿತಿಟ್ಟು ಕಡೆಯಿಂದ ಬಂದ ಕಾಡಾನೆಗಳೆರಡು ಓಡಿಬರುವ ಸಂದರ್ಭದಲ್ಲಿ ಸಿದ್ದಮ್ಮರನ್ನು ಸೊಂಡಿಲಿನಿAದ ತಳ್ಳಿದ ಪರಿಣಾಮ ಬಿದ್ದು ಬೆನ್ನಿಗೆ ತೀವ್ರತರ ಪೆಟ್ಟಾಗಿ ಹುಣಸೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದ ಆರ್.ಎಫ್.ಓ. ನಂದಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಸಿದ್ದಮ್ಮಳಿಗೆ ಧೈರ್ಯ ತುಂಬಿ ಚಿಕಿತ್ಸೆ ಕೊಡಿಸಿದ್ದಾರೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.