ಸ್ವಾರ್ಥಕ್ಕಾಗಿ ದಲಿತ ಯುವಕರ ದುರ್ಬಳಕೆ ಸಲ್ಲ
Team Udayavani, Jan 30, 2018, 12:44 PM IST
ಹುಣಸೂರು: ದಲಿತ ಸಮುದಾಯದವರು ಕೇವಲ ಸರ್ಕಾರಿ ಉದ್ಯೋಗಕ್ಕೆ ಕಾಯದೇ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು, ದಲಿತ ಯುವಕರನ್ನು ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುವವರ ಬಗ್ಗೆ ಎಚ್ಚರದಿಂದರಬೇಕೆಂದು ಉಪ ವಿಭಾಗಾಧಿಕಾರಿ ಕೆ.ನಿತೀಶ್ ಸೂಚಿಸಿದರು.
ನಗರದ ಆಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕು ದಸಂಸ ವತಿಯಿಂದ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ದಲಿತರ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಟ ಸಂವಿಧಾನ. ನಮ್ಮ ಸಂವಿಧಾನದಲ್ಲಿ ಎಲ್ಲಾ ಜಾತಿ, ಧರ್ಮ, ಭಾಷೆ ವಿವಿಧ ಸಂಸ್ಕೃತಿ ಜನರಿಗೂ ಸಮಾನ ಆವಕಾಶ ಕಲ್ಪಿಸಿದೆ,
ಇಲ್ಲಿ ಪ್ರತಿಯೊಬ್ಬರೂ ಸಮಾನರು ಶೋಷಣೆಗೆ ಒಳಗಾದ ದಲಿತರಿಗೆ ಪ್ರತ್ಯೇಕವಾಗಿ ಮೀಸಲಾತಿಯನ್ನು ಸಂವಿಧಾನದಲ್ಲಿ ಕಲ್ಪಿಸಲಾಗಿದ್ದು, ಅದರಂತೆ ಸೌಲಭ್ಯ ವಂಚಿತ ಸಮುದಾಯಗಳು ಮೀಸಲಾತಿಯಿಂದ ಶಿಕ್ಷಣ, ಆರ್ಥಿಕ, ರಾಜಕೀಯ, ಸಮಾಜಿಕ ಕ್ಷೇತ್ರಗಳಲ್ಲಿ ಪ್ರಗತಿ ಹೊಂದಲು ಸಾಧ್ಯ, ದಲಿತರು ಶಿಕ್ಷಣ ಪಡೆದು ವಿದ್ಯಾವಂತರಾಗಿ ಸಮಾಜದಲ್ಲಿ ಸಮಾಜಿಕ ನ್ಯಾಯ ಪಡೆಯುವ ಅಗತ್ಯವಿದೆ ಎಂದರು.
ದಲಿತರಲ್ಲೇ ತಾರತಮ್ಯ ನೀತಿ: ಅಧ್ಯಕ್ಷತೆ ವಹಿಸಿದ್ದ ದಸಂಸದ ಜಿಲ್ಲಾ ಪ್ರಧಾನ ಸಂಚಾಲಕ ನಿಂಗರಾಜ್ ಮಲ್ಲಾಡಿ ಮಾತನಾಡಿ, ಮೀಸಲಾತಿಯು ಸೌಲಭ್ಯವನ್ನು ಪಡೆದವರೆ ಪಡೆಯುತ್ತಿದ್ದು, ವಂಚಿತ ದಲಿತರು ಇಂದಿಗೂ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ದಲಿತರಲ್ಲೆ ಉಳ್ಳವರು ಮತ್ತು ದುರ್ಬಲರೆಂಬ ತಾರತಮ್ಯ ಹೆಚ್ಚಿದೆ. ಕನಿಷ್ಟ ಸೂರಿಲ್ಲದೆ ಬೀದಿಯಲ್ಲಿ ಬದುಕುವ ದಲಿತ ಸಮಾಜ ಇಂದಿಗೂ ನಮ್ಮ ಕಣ್ಮುಂದೆ ಇದೆ.
ಆದರೆ, ಮೀಸಲಾತಿಯ ಫಲದಿಂದ ರಾಜಕಾರಣಿಯ ಮಗ ರಾಜಕಾರಣಿಯಾಗಿ ಎಂಜಿನಿಯರ್, ಡಾಕ್ಟರ್ ಮಕ್ಕಳು ಉನ್ನತ ಕೆಲಸ ಪಡೆಯುತ್ತಿದ್ದಾರೆ. ಕೂಲಿ ಮಾಡುವ ದಲಿತರ ಮಕ್ಕಳು ಮೀಸಲಾತಿಯ ಸೌಲಭ್ಯದಿಂದ ವಂಚಿತರಾಗಿ ತಮ್ಮ ಬದುಕಿಗಾಗಿ ಹಪಹಪಿಸುತ್ತಿದ್ದಾರೆ. ಇಂತಹ ಅನ್ಯಾಯ ವಿರುದ್ಧ ಎಲ್ಲಾ ಮೀಸಲಾತಿ ವಂಚಿತ ದಲಿತರು ಹೋರಾಟ ಮಾಡುವ ಅಗತ್ಯವಿದೆ ಎಂದರು.
ಕಾನೂನು ನೆರವು ಪಡೆತಯಿರಿ: ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮೋಹನ್, ಸಮಾಜ ಕಲ್ಯಾಣಧಿಕಾರಿ ಹೊನ್ನೇಗೌಡ ಮಾತನಾಡಿ, ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಸೌಲಭ್ಯದಿಂದ ವಂಚಿತರಾದವರು ಇಲಾಖೆ ಅಥವಾ ಸ್ಥಳೀಯ ನ್ಯಾಯಾಲಯದಲ್ಲಿ ತೆರೆದಿರುವ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ನೆರವು ಪಡೆದುಕೊಳ್ಳಬಹುದೆಂದರು.
ದಲಿತ ಮುಖಂಡರಾದ ಡಿ.ಕುಮಾರ್ ಮಾತನಾಡಿದರು. ಬನ್ನಿಕುಪ್ಪೆ ಚಿಕ್ಕಸ್ವಾಮಿ, ಧರ್ಮಪುರ ಕಾಳ್ಯಯ್ಯ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮುರುಗೇಶ, ಬೇಳೂ¤ರ್ ಮಹದೇವ, ಬಲ್ಲೇನಹಳ್ಳಿ ಕೆಂಪರಾಜ್, ನಾಯಕ ಸಮಾಜದ ಮಹದೇವನಾಯಕ, ಆಲೆಮಾರಿ ಸಮಾಜದ ಎಲ್ಲಪ್ಪ, ಹರೀಶ, ಪಿ.ಪುಟ್ಟರಾಜು, ಶಿವು, ಆಂಜನೇಯ, ಸಂತೋಷ, ಕೆ.ಆರ್. ನಸ್ರುಲ್ಲಾಖಾನ್,
ದಸಂಸದ ಸಾಕಯ್ಯ, ಬೈರಯ್ಯ, ಸಣ್ಣಯ್ಯ, ನರಸಿಂಹಸ್ವಾಮಿ ತಿಟ್ಟಿನ ಲಕ್ಷೀ, ಕುಮಾರಿ, ಸಾಕಮ್ಮ, ಮುತಾಂದ ನೂರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾಲೂಕು ಸಂಚಾಲಕ ದೇವೇಂದ್ರ ಕಿರಿಜಾಜಿ ಗಜೇಂದ್ರ ಹೊನ್ನೇನಹಳ್ಳಿ ವಸಂತಾ ಮತ್ತು ಕಲಾ ತಂಡದವರು ಹೋರಾಟದ ಗೀತೆಗಳನ್ನು ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ
1 ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್ ಸಿಂಗ್
Road Mishap ಸ್ಲೀಪರ್ ಕೋಚ್ ಬಸ್ ಪಲ್ಟಿ: ಓರ್ವ ಮೃತ್ಯು; 11 ಮಂದಿಗೆ ಗಾಯ
Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ
Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.