ಲಲಿತಮಹಲ್‌ ಅಂಗಳದಲ್ಲಿ ಗಾಳಿಪಟ ಉತ್ಸವ


Team Udayavani, Sep 29, 2018, 11:31 AM IST

m1-lalita.jpg

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿ ನಗರಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಗಾಳಿಪಟ ಉತ್ಸವ ಸೆ.29 ಮತ್ತು 30ರಂದು ನಗರದ ಲಲಿತಮಹಲ್‌ ಹೆಲಿಪ್ಯಾಡ್‌ ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್‌ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಆಕರ್ಷಣೆ ಹೆಚ್ಚಿಸಲು ಪೂರ್ವ ಕಾರ್ಯಕ್ರಮವಾಗಿ ಮೊದಲಿಗೆ ಗಾಳಿಪಟ ಉತ್ಸವ ನಡೆಸಲಾಗುತ್ತಿದೆ. ಈ ಉತ್ಸವದಲ್ಲಿ ಗಾಳಿಪಟದ ಸಂಸ್ಕೃತಿಯನ್ನು ಪರಿಚಯಿಸುವ ಜತೆಗೆ ಮಕ್ಕಳು ಹಾಗೂ ಯುವಜನರಲ್ಲಿ ಸೃಜನಶೀಲತೆ, ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶವಿದೆ. ಗಾಳಿಪಟ ಉತ್ಸವದ ಜತೆಗೆ ಮಕ್ಕಳಿಗಾಗಿ ಕಾರ್ಯಾಗಾರ, ಮನರಂಜನಾ ಕಾರ್ಯಕ್ರಮಗಳ ಜತೆಗೆ ಫ‌ುಡ್‌ ಟ್ರಕ್‌ ಇರಲಿದೆ ಎಂದು ಹೇಳಿದರು. 

ಎರಡು ದಿನಗಳ ಉತ್ಸವ: ಟೀಮ್‌ ಮಂಗಳೂರು ನೇತೃತ್ವದಲ್ಲಿ ಎರಡು ದಿನಗಳವರೆಗೆ ಗಾಳಿಪಟ ಉತ್ಸವ ನಡೆಯಲಿದೆ. ಇದರಲ್ಲಿ ಮುಂಬೈನಿಂದ 4, ಅಹಮದಾಬಾದ್‌ 6, ಸೂರತ್‌ 5, ಹೈದರಾಬಾದ್‌ 3 ಮತ್ತು ಮಂಗಳೂರಿನ 10ಕ್ಕೂ ಹೆಚ್ಚು ವೃತ್ತಿನಿರತ ಕೈಟ್‌ ಫ್ಲೆಯರ್‌ಗಳು ಭಾಗವಹಿಸಲಿದ್ದಾರೆ.
 

ಸೆ.29ರಂದು ಸಂಜೆ 4 ಗಂಟೆಗೆ ನಡೆಯುವ ಗಾಳಿಪಟ ಉತ್ಸವಕ್ಕೆ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಲಿದ್ದಾರೆ. ಗಾಳಿಪಟ ಉತ್ಸವದಲ್ಲಿ ಲಲಿತಮಹಲ್‌ ಹೆಲಿಪ್ಯಾಡ್‌ ಮೈದಾನದ ಸುತ್ತಲಿನ ಎಲ್ಲಾ ಶಾಲೆಯ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳ ಮೂಲಕ ಸುತ್ತೋಲೆ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಗಾಳಿಪಟಗಳ ಆಕರ್ಷಣೆ: ಟೀಮ್‌ ಮಂಗಳೂರು ತಂಡದ ಸರ್ವೇಶ್‌ ಮಾತನಾಡಿ, ಲಲಿತಮಹಲ್‌ ಹೆಲಿಪ್ಯಾಡ್‌ ಅಂಗಳದಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ವಿವಿಧ ಬಗೆಯ 25ಕ್ಕೂ ಹೆಚ್ಚು ಆಕರ್ಷಕ ಗಾಳಿಪಟಗಳ ಹಾರಾಟ ಮತ್ತು ಪ್ರದರ್ಶನ ನಡೆಯಲಿದೆ.

ಟೀಮ್‌ ಮಂಗಳೂರು ತಂಡ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಗಾಳಿಪಟಗಳನ್ನು ಉತ್ಸವದಲ್ಲಿ ಹಾರಾಟ ಮತ್ತು ಪ್ರದರ್ಶನಕ್ಕಿಡಲಾಗುವುದು.  ಪ್ರಮುಖವಾಗಿ ಕಥಕ್ಕಳಿ, ಯಕ್ಷಗಾನ, ಭರತನಾಟ್ಯ, ದುರ್ಗಾ, ಗಜೇಂದ್ರ, ಡ್ರ್ಯಾಗನ್‌, ಭೂತಕೋಲು, ಕೊರಿಯನ್‌ ಕೈಟ್‌ ಮತ್ತಿತರ ಗಾಳಿಪಟಗಳ ಹಾರಾಟ ನಡೆಯಲಿದೆ. ಈ ಎಲ್ಲಾ ಗಾಳಿಪಟಗಳನ್ನು ಪೇಪರ್‌ ಬಳಸದೆ, ಪ್ಯಾರಾಚೂಟ್‌ ಮತ್ತು ಬೋಟ್‌ ತಯಾರಿಸಲು ಬಳಸುವ ಬಟ್ಟೆ ಬಳಸಲಿದ್ದು,

36 ಅಡಿ ಎತ್ತರ ಮತ್ತು 10 ಅಡಿ ಅಗಲವಿರುವ ಕಥಕ್ಕಳಿ ಶೈಲಿಯ ಗಾಳಿಪಟ ಎಲ್ಲರ ಆಕರ್ಷಣೆಯಾಗಲಿದೆ. ಇದೇ ವೇಳೆ ನಡೆಯುವ ಕಾರ್ಯಾಗಾರದಲ್ಲಿ ಮಕ್ಕಳಿಗೆ ಸುಲಭವಾಗಿ ಗಾಳಿಪಟ ತಯಾರಿಕೆ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.  ಸುದ್ದಿಗೋಷ್ಠಿಯಲ್ಲಿ ಪ್ರವಾಸೋದ್ಯಮ ಇಲಾಖೆ ಉಪ ನಿದೇರ್ಶಕ ಜನಾರ್ದನ್‌, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಇನ್ನಿತರರಿದ್ದರು.

ನಾಳೆ ವಿಂಟೇಜ್‌ ಕಾರು ಉತ್ಸವ: ದಸರೆ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಫೆಡರೇಷನ್‌ ಆಫ್ ಹಿಸ್ಟಾರಿಕ್‌ ವೆಹಿಕಲ್ಸ್‌ ಆಫ್ ಇಂಡಿಯಾ ವತಿಯಿಂದ ಸೆ.30 ಮತ್ತು ಅ.1ರಂದು ವಿಂಟೇಜ್‌ ಕಾರ್‌ ಉತ್ಸವ ಏರ್ಪಡಿಸಿದೆ. ಭಾನುವಾರ ಬೆಳಗ್ಗೆ 8ಕ್ಕೆ ನಡೆಯುವ ವಿಂಟೇಜ್‌ ಕಾರು ಉತ್ಸವಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡುವರು.

ರ್ಯಾಲಿಯಲ್ಲಿ 1925ರಿಂದ 1975ರವರೆಗೆ ತಯಾರಾಗಿರುವ 50 ಬಗೆಯ ಕಾರುಗಳನ್ನು ಪ್ರದರ್ಶನದಲ್ಲಿ ನೋಡಬಹುದು. ಸೆ.30ರಂದು ಸಂಜೆ 4.15ಕ್ಕೆ ಆರಂಭವಾಗುವ ರ್ಯಾಲಿಯು ಪ್ರಮುಖ ರಸ್ತೆಗಳಲ್ಲಿ ವಿಂಟೇಜ್‌ ಕಾರು ಸಂಚರಿಸಲಿದ್ದು, ಅ.1ರಂದು  ವಿಂಟೇಜ್‌ ಕಾರುಗಳ ಪ್ರದರ್ಶನದ ಜತೆಗೆ ಇನ್ನಿತರ ಕಾರ್ಯಕ್ರಮ ನಡೆಯಲಿದೆ. 

ರ್ಯಾಲಿಯಲ್ಲಿ ಇಂಗ್ಲೆಂಡ್‌, ಯುಕೆ, ಶ್ರೀಲಂಕಾ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವಿಂಟೇಜ್‌ ಕಾರುಗಳು ಪಾಲ್ಗೊಳ್ಳಲಿದ್ದು, 1920ನೇ ಸಾಲಿನಲ್ಲಿ ತಯಾರಾಗಿರುವ ಇಂಗ್ಲೆಂಡ್‌ನ‌ ವಿಂಟೇಜ್‌ ಕಾರುಗಳು ನೋಡುಗರ ಗಮನ ಸೆಳೆಯಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ತಿಳಿಸಿದರು. 

ವಿವಿಧ ಕಾರ್ಯಕ್ರಮ: ನಾಡಹಬ್ಬ ದಸರಾ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಈ ವರ್ಷ ಶ್ವಾನ ಪ್ರದರ್ಶನ, ಮತ್ಸ ಮೇಳ, ನಿಧಿ ಶೋಧ, ಟ್ರಯಥ್ಲಾನ್‌ ನಡೆಯಲಿದೆ. ಏರ್‌ ಶೋ ಪ್ರದರ್ಶನಕ್ಕೆ ಪ್ರಾಥಮಿಕ ಕೆಲಸ ಈಗಾಗಲೇ ಆರಂಭವಾಗಿದೆ.

ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರು ಹಾಗೂ ಸ್ಥಳೀಯರು ದಸರಾ ಮಹೋತ್ಸವದ ಆಕರ್ಷಣೆ ಕಣ್ತುಂಬಿಕೊಳ್ಳುವ ಜತೆಗೆ ದಸರೆಯ ಅನುಭವ ಪಡೆಯಬೇಕೆಂಬ ಉದ್ದೇಶದಿಂದ ಹಲವು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಮಾಹಿತಿ ನೀಡಿದರು.

ಟಾಪ್ ನ್ಯೂಸ್

ಸಂತೋಷ್ ಲಾಡ್

Shiggavi Bypoll; ಗೆಲ್ಲುವ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಲಿದೆ: ಸಂತೋಷ್ ಲಾಡ್

ನಿಮ್ಮ ಸಹಪಾಠಿಗಳು ಎಲ್ಲಿದ್ದಾರೆ ?: ಜೀವನದ ಪ್ರಯಾಣದಲ್ಲಿ ಎಲ್ಲವನ್ನು ಅನುಭವಿಸಬೇಕು

INDWvsSAW: ತಪ್ಪಿತು ರಿಚಾ ಶತಕ; ವಿಶ್ವದಾಖಲೆಯ ಮೊತ್ತ ಕಲೆ ಹಾಕಿದ ಭಾರತ

INDWvsSAW: ತಪ್ಪಿತು ರಿಚಾ ಶತಕ; ವಿಶ್ವದಾಖಲೆಯ ಮೊತ್ತ ಕಲೆ ಹಾಕಿದ ಭಾರತ

Dharmapuri Srinivas: ಹೃದಯಾಘಾತದಿಂದ ಕಾಂಗ್ರೆಸ್ ಹಿರಿಯ ನಾಯಕ ಧರ್ಮಪುರಿ ಶ್ರೀನಿವಾಸ್ ನಿಧನ

Dharmapuri Srinivas: ಹೃದಯಾಘಾತದಿಂದ ಕಾಂಗ್ರೆಸ್ ಹಿರಿಯ ನಾಯಕ ಧರ್ಮಪುರಿ ಶ್ರೀನಿವಾಸ್ ನಿಧನ

8-ptr-bus-campaign

Udayavani Campaign: 14 ಹೊಸ ಬಸ್‌ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಸಿದ್ಧ

ವಿಜಯೇಂದ್ರ

Shimoga; ಸಿಎಂ ಗಮನಕ್ಕೆ ಬಾರದೆ ವಾಲ್ಮೀಕಿ ನಿಗಮ ಹಣ ಲೂಟಿ ಸಾಧ್ಯವಿಲ್ಲ: ವಿಜಯೇಂದ್ರ ಆರೋಪ

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ಕೊಡಗು, ನಾಗರಹೊಳೆಯಲ್ಲಿ ಭಾರೀ ಮಳೆಗೆ ತುಂಬಿದ ಹನಗೋಡು ಅಣೆಕಟ್ಟೆ

Hunasur: ಪತ್ನಿ ಮನೆಗೆ ಹೋಗಿ ಹಿಂತಿರುಗುವ ವೇಳೆ ರಸ್ತೆ ಅಪಘಾತ… ಪತಿ ಮೃತ್ಯು

Hunasur: ಪತ್ನಿ ಮನೆಗೆ ಹೋಗಿ ಹಿಂತಿರುಗುವ ವೇಳೆ ರಸ್ತೆ ಅಪಘಾತ… ಪತಿ ಮೃತ್ಯು

Hunasuru: ಮನೆ ಬಳಿ ಮಂಗಳಮುಖಿಯರ ಗಲಾಟೆ, ಆತ್ಮಹತ್ಯೆಗೆ ಶರಣಾದ ಬಾಲಕ

Hunasuru: ಮನೆ ಬಳಿ ಮಂಗಳಮುಖಿಯರ ಗಲಾಟೆ, ಹೆದರಿ ಆತ್ಮಹತ್ಯೆಗೆ ಶರಣಾದ ಬಾಲಕ

B.Y. Vijayendra “ಅಭ್ಯರ್ಥಿ ಇನ್ನೂ ತೀರ್ಮಾನ ಆಗಿಲ್ಲ’; ನಾಡಿದ್ದು ದಿಲ್ಲಿಗೆ ತೆರಳಿ ಚರ್ಚೆ

B.Y. Vijayendra “ಅಭ್ಯರ್ಥಿ ಇನ್ನೂ ತೀರ್ಮಾನ ಆಗಿಲ್ಲ’; ನಾಡಿದ್ದು ದಿಲ್ಲಿಗೆ ತೆರಳಿ ಚರ್ಚೆ

ನಕಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ: 3 ಕೋಟಿ ರೂ. ಕಳೆದುಕೊಂಡ ಯುವಕ!

Fake ಷೇರು ಮಾರುಕಟ್ಟೆಯಲ್ಲಿ ಹೂಡಿಕೆ: 3 ಕೋಟಿ ರೂ. ಕಳೆದುಕೊಂಡ ಯುವಕ!

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

Bengaluru: ನಗರದಲ್ಲಿ ಡೆಂಘೀ ರೋಗಕ್ಕೆ ಇಬ್ಬರು ಬಲಿ?

Bengaluru: ನಗರದಲ್ಲಿ ಡೆಂಘೀ ರೋಗಕ್ಕೆ ಇಬ್ಬರು ಬಲಿ?

ಸಂತೋಷ್ ಲಾಡ್

Shiggavi Bypoll; ಗೆಲ್ಲುವ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಲಿದೆ: ಸಂತೋಷ್ ಲಾಡ್

ನಿಮ್ಮ ಸಹಪಾಠಿಗಳು ಎಲ್ಲಿದ್ದಾರೆ ?: ಜೀವನದ ಪ್ರಯಾಣದಲ್ಲಿ ಎಲ್ಲವನ್ನು ಅನುಭವಿಸಬೇಕು

INDWvsSAW: ತಪ್ಪಿತು ರಿಚಾ ಶತಕ; ವಿಶ್ವದಾಖಲೆಯ ಮೊತ್ತ ಕಲೆ ಹಾಕಿದ ಭಾರತ

INDWvsSAW: ತಪ್ಪಿತು ರಿಚಾ ಶತಕ; ವಿಶ್ವದಾಖಲೆಯ ಮೊತ್ತ ಕಲೆ ಹಾಕಿದ ಭಾರತ

Dharmapuri Srinivas: ಹೃದಯಾಘಾತದಿಂದ ಕಾಂಗ್ರೆಸ್ ಹಿರಿಯ ನಾಯಕ ಧರ್ಮಪುರಿ ಶ್ರೀನಿವಾಸ್ ನಿಧನ

Dharmapuri Srinivas: ಹೃದಯಾಘಾತದಿಂದ ಕಾಂಗ್ರೆಸ್ ಹಿರಿಯ ನಾಯಕ ಧರ್ಮಪುರಿ ಶ್ರೀನಿವಾಸ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.