ಉಪನ್ಯಾಸಕಿಯರಿಗೆ ಇಷ್ಟ ಬಂದಲ್ಲಿಗೆ ವರ್ಗ


Team Udayavani, Jun 10, 2017, 1:59 PM IST

mys1.jpg

ಹುಣಸೂರು: ಸರ್ಕಾರಿ ಕೆಲಸ ಸಿಗುವವರೆಗೆ ಎಲ್ಲಿ ಬೇಕಾದರೂ ಕೆಲಸ ನಿರ್ವಹಿಸುತ್ತೇವೆಂದು ಕೆಲಸ ಗಿಟ್ಟಿಸಿದ ನಂತರ ರಾಜಕಾರಣಿಗಳ ಪ್ರಭಾವ ಬೀರಿ ತಮಗಿಷ್ಟ ಬಂದಲ್ಲಿಗೆ ನಿಯೋಜನೆಗೊಂಡು ಐಷಾರಾಮಿ ಜೀವನ ನಡೆಸುತ್ತಿರುವುದಕ್ಕೆ ತಾಲೂಕಿನ ರತ್ನಪುರಿ ಪದವಿ ಪೂರ್ವ ಕಾಲೇಜಿನ ಉಪ್ಯಾಸಕರಿಬ್ಬರು ತಾಜಾ ಉದಾಹರಣೆಯಾಗಿದ್ದಾರೆ.

ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಒತ್ತುನೀಡಿ ಸ್ಥಳೀಯರ ಮನವಿ ಮೇರೆಗೆ ಕಳೆದ 10 ವರ್ಷದ ಹಿಂದೆ ತಾಲೂಕಿನ ರತ್ನಪುರಿ ಪ.ಪೂ ಕಾಲೇಜಿಗೆ ಕಲಾ ವಿಭಾಗ, ನಾಲ್ಕು ವರ್ಷಗಳ ನಂತರ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ವಿಜ್ಞಾನ ವಿಭಾಗ ತೆರೆಯಲಾಗಿತ್ತು.

ಪಾಠಪ್ರವಚನ ಉತ್ತಮವಾಗಿದ್ದರಿಂದ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದಾಗಿ ಉತ್ತಮ ಫ‌ಲಿತಾಂಶ ಬಂದಿತ್ತಾದರೂ ಕಳೆದನಾಲ್ಕು ವರ್ಷಗಳಿಂದ ಇಲ್ಲಿಗೆ ನೇಮಕಗೊಂಡ ಉಪನ್ಯಾಸಕರು ಮಾತ್ರ ಇಲ್ಲಿ ಸಂಬಳ ಪಡೆದು ಪ್ರಭಾವ ಬೀರಿ ಬೇರೆಡೆಗೆ ನಿಯೋಜನೆಗೊಳ್ಳುತ್ತಿದ್ದಾರೆ !.

ರತ್ನಪುರಿ ಪ. ಪೂ. ಕಾಲೇಜಿನ ಗಣಿತ ಶಾಸ್ತ್ರದ ಉಪನ್ಯಾಸಕಿ ಎ.ವೀಣಾರನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೋಮಯಾಜನಹಳ್ಳಿಯ ಕಾಲೇಜಿಗೂ, ಜೀವಶಾಸ್ತ್ರ ಉಪನ್ಯಾಸಕಿ ಬಿ.ಆರ್‌.ತ್ರಿವೇಣಿರನ್ನು ಮೈಸೂರು ನಗರದ ಲಕ್ಷ್ಮೀಪುರಂ ಕಾಲೇಜಿಗೂ ನಿಯೋಜನೆಗೊಳಿಸಿ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಕಳೆದ ಶೆಕ್ಷಣಿಕ ಸಾಲಿನಲ್ಲಿ ಪ್ರತಿಭಟನೆ, ಪತ್ರಿಕಾ ವರದಿಯಿಂದ ಎಚ್ಚೆತ್ತ ಶಾಸಕ ಮಂಜುನಾಥ್‌ ಶಿಕ್ಷಣ ಸಚಿವ ತನ್ವೀರ್‌ಸೇs…ರ ಮೇಲೆ ಒತ್ತಡ ತಂದ ಮೇರೆಗೆ ಮಾರ್ಚ್‌ನಲ್ಲಿ ನಿಯೋಜನೆ ರದ್ದುಗೊಂಡು ವಾಪಾಸ್‌ ಬಂದಿದ್ದ ಇಬ್ಬರು ಉನ್ಯಾಸಕಿಯರು ಪುನಃ ಮತ್ತೆ ತಮ್ಮ ಪ್ರಭಾವ ಬಳಸಿ ನಿಯೋಜನೆಗೊಂಡಿರುವ ವಿಷಯ ಬೆಳಕಿಗೆ ಬರುತ್ತಿದ್ದಂತೆ ಪೋಷಕರು ಆಕ್ರೋಶ ಭರಿತರಾಗಿದ್ದಾರೆ.

ಕಾಯಂಮಾತಿಯೇ ಆಗಿಲ್ಲ ಆಗಲೇ ನಿಯೋಜನೆ ಭಾಗ್ಯ: ಈ ಇಬ್ಬರು ಉಪನ್ಯಾಸಕಿಯರು ಕಳೆದ ನಾಲ್ಕುವರ್ಷಗಳ ಹಿಂದಷ್ಟೆ ಸೇವೆಗೆ ಸೇರಿದ್ದು, ಹುದ್ದೆಯೇ ಕಾಯಂ ಆಗಿಲ್ಲವಾದರೂ  ಪ್ರತಿ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ಪ್ರಭಾವ ಬೀರಿ ತಮಗಿಷ್ಟವಾದ ಸ್ಥಳಕ್ಕೆ ನಿಯೋಜನೆ ಮೇಲೆ ತೆರಳುತ್ತಿದ್ದಾರೆ. ಮತ್ತೆ ಮಾರ್ಚ್‌ನಲ್ಲಿ ಕಾಲೇಜಿಗೆ ಬಂದು ವರದಿ ಮಾಡಿಕೊಳ್ಳುತ್ತಿದ್ದು, ಈ ಕಾಲೇಜಿನಿಂದ ಸಂಬಳ, ಸವಲತ್ತುಗಳನ್ನು ಪಡೆದು ಬೇರೆಡೆ ಕೆಲಸ ಮಾಡುವುದಾದರೂ ಏಕೆ ಅಲ್ಲಿಗೆ ವರ್ಗಮಾಡಿಸಿಕೊಂಡು ಹೋಗಲಿ, ನಮ್ಮ ಮಕ್ಕಳನ್ನು ಬೇರೆಡೆಯಾದರೂ ಓದಿಸುತ್ತೇವೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ನಿಯೋಜನೆಗೆ ನಿಯಮ: ನೇಮಕಗೊಂಡಿರುವ ಶಾಲಾ-ಕಾಲೇಜಿನಿಂದ 18 ಕಿ.ಮೀದೂರದ ಕಾಲೇಜಿಗೆ ಮಾತ್ರ ನಿಯೋಜನೆ ಮಾಡಬೇಕು ಹಾಗೂ ವಾರದಲ್ಲಿ ಮೂರುದಿನ ಮರಳಿ ಕಾಲೇಜಿಗೆ ಬಂದು ಪಾಠ ಮಾಡಬೇಕೆಂಬ ನಿಯಮವಿದೆ ಆದರಿಲ್ಲಿ ರಾಜಕೀಯ ಪ್ರಭಾವಬೀರಿ 400 ಕಿ.ಮೀ ದೂರದ ಶ್ರೀನಿವಾಸಪುರ ತಾಲೂಕಿಗೆ ನಿಯೋಜನೆಗೊಳಿಸಿರುವುದು ಇಲಾಖೆಯಲ್ಲೇ ಚರ್ಚಾಗ್ರಾಸವಾಗಿದೆ. ಇದೀಗ ಈ ಕಾಲೇಜಿಗೆ ಸೇರುವುದೋ ಬೇಡವೋ ಎಂಬ ಜಿಜ್ಞಾಸೆ ವಿದ್ಯಾರ್ಥಿಗಳದ್ದಾಗಿದೆ.

ನಗರದಲ್ಲೂ ಗಣಿತ ಉಪನ್ಯಾಸಕರಿಲ್ಲ: ಹುಣಸೂರು ಬಾಲಕಿಯರ ಕಾಲೇಜಿನಲ್ಲಿದ್ದ ಏಕೈಕ ಗಣಿತ ಉಪನ್ಯಾಸಕ ಮಂಜೇಗೌಡ ಸಹ ವರ್ಗಾವಣೆ ಕೋರಿದ್ದರು. ಇದೀಗ ಕಾಲೇಜು ಶಿಕ್ಷಣ ಇಲಾಖೆ ಹುದ್ದೆ ಸಹಿತ ಮೈಸೂರಿನ ಮಹಾರಾಣಿ ಕಾಲೇಜಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಈಗಾಗಲೇ  ಬಿಡುಗಡೆ ಹೊಂದಿ ಅವರು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು. ಇಲ್ಲಿನ ಕಾಲೇಜಿನಲ್ಲಿ ಗಣಿತ ವಿಷಯ ಉಪನ್ಯಾಸಕರು ಮತ್ತೆ ಆ ಹುದ್ದೆಯೊಂದಿಗೆ ಬರಬೇಕು ಅಲ್ಲಿಯವರೆಗೆ ಇಲ್ಲಿನ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ಪ್ರತಿಭಟನೆ: ಕಾಲೇಜು ಆವರಣದಲ್ಲಿ ಜಮಾವಣೆಗೊಂಡಿದ್ದ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ಹಾದಿ ಹಿಡಿಯುತ್ತಿರುವುದನ್ನು ಶಾಸಕ ಮಂಜುನಾಥ್‌ ಗಮನಕ್ಕೆ ತಂದ ವೇಳೆ ತಾವು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಅವರ ಗಮನಕ್ಕೆ ವಿಷಯ ತಂದು ಉನ್ಯಾಸಕಿಯರ ನಿಯೋಜನೆ ರದ್ದುಗೊಳಿಸುವ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟಿದ್ದಾರೆ.

ಶಿಕ್ಷಣ ಸಚಿವರ ತವರಲ್ಲೇ ಈ ಸ್ಥಿತಿ?: ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ತನ್ವೀರ್‌ ಸೇs…, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪರ ತವರು ಜಿಲ್ಲೆಯಲ್ಲೇ ಈ ಪರಿಸ್ಥಿತಿಯಾದರೆ ಉಳಿದೆಡೆಗಳಲ್ಲಿ ಇನ್ಯಾವ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿ ಇದ್ದರೂ ಮತ್ತಷ್ಟು ಶಾಲಾ-ಕಾಲೇಜು ತೆರೆಯಲು ಹೊರಟಿರುವ ಶಿಕ್ಷಣ ಇಲಾಖೆ ಕಾಲೇಜುಗಳನ್ನು ತೆರೆಯುವ ಮೊದಲು ಸಮರ್ಪಕ ಮೂಲಭೂತ ಸೌಲಭ್ಯ ಕಲ್ಪಿಸಿ ನಂತರವೇ ಕಾಲೇಜುಗಳನ್ನು ತೆರೆಯುವಂತಾಗಲಿ ಎಂಬುದು ಪೋಷಕರ ಆಶಯವಾಗಿದೆ.

ಕಾಯಂ ಉಪನ್ಯಾಸಕರ ನೇಮಕವಾಗುವವರೆಗೆ ಕಾಲೇಜಿನ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಬೇರೆ ಕಾಲೇಜಿನ ಉಪನ್ಯಾಸಕರನ್ನು ವಾರಕ್ಕೆ ಮೂರುದಿನ ನಿಯೋಜನೆ ಮಾಡಲು ಕೋರಲಾಗುವುದು ಅಥವಾ ಸಿಡಿಸಿ ಸಮಿತಿ ವತಿಯಿಂದ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುವುದು.
-ಚೆಲುವಯ್ಯ, ಪ್ರಾಚಾರ್ಯ ಬಾಲಕಿಯರ ಪಪೂ ಕಾಲೇಜು

* ಸಂಪತ್‌ಕುಮಾರ್‌

ಟಾಪ್ ನ್ಯೂಸ್

kejriwal-2

AAP ಬೇಡಿಕೆ: ನಿರ್ಗಮಿತ ಸಿಎಂ ಕೇಜ್ರಿವಾಲ್ ಅವರಿಗೆ ಸರಕಾರಿ ವಸತಿ ಕಲ್ಪಿಸಿ

Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು

Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು

1-ashwin

147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್

Mudhol: ಸಮಸ್ಯೆ ಆಲಿಸಲು ಬಂದ ಅಧಿಕಾರಿಗಳ ದರ್ಪದ ನಡೆಗೆ ಗ್ರಾಮಸ್ಥರ ಆಕ್ರೋಶ

Mudhol: ಸಮಸ್ಯೆ ಆಲಿಸಲು ಬಂದ ಅಧಿಕಾರಿಗಳ ದರ್ಪದ ನಡೆಗೆ ಗ್ರಾಮಸ್ಥರ ಆಕ್ರೋಶ

Roopali Naik: ರಾಷ್ಟ್ರದ ಸಮಗ್ರ ಅಭಿವೃದ್ಧಿಯೇ ಬಿಜೆಪಿಯ ಗುರಿ

Roopali Naik: ರಾಷ್ಟ್ರದ ಸಮಗ್ರ ಅಭಿವೃದ್ಧಿಯೇ ಬಿಜೆಪಿಯ ಗುರಿ

1-modi

Congress ಪಕ್ಷವನ್ನು ತುಕ್ಡೆ ತುಕ್ಡೆ ಗ್ಯಾಂಗ್, ನಗರ ನಕ್ಸಲರು ನಡೆಸುತ್ತಿದ್ದಾರೆ:ಮೋದಿ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM Siddaramaiah slams BJP about Ganeshotsav riot

Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Mysuru; ಟಿಕೆಟ್‌ ಆಕಾಂಕ್ಷಿಗಳು ಸಕ್ರಿಯವಾಗಿರಬೇಕು: ಸಾ.ರಾ

Mysuru; ಟಿಕೆಟ್‌ ಆಕಾಂಕ್ಷಿಗಳು ಸಕ್ರಿಯವಾಗಿರಬೇಕು: ಸಾ.ರಾ ಮಹೇಶ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

kejriwal-2

AAP ಬೇಡಿಕೆ: ನಿರ್ಗಮಿತ ಸಿಎಂ ಕೇಜ್ರಿವಾಲ್ ಅವರಿಗೆ ಸರಕಾರಿ ವಸತಿ ಕಲ್ಪಿಸಿ

Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು

Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು

1-ashwin

147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್

Mudhol: ಸಮಸ್ಯೆ ಆಲಿಸಲು ಬಂದ ಅಧಿಕಾರಿಗಳ ದರ್ಪದ ನಡೆಗೆ ಗ್ರಾಮಸ್ಥರ ಆಕ್ರೋಶ

Mudhol: ಸಮಸ್ಯೆ ಆಲಿಸಲು ಬಂದ ಅಧಿಕಾರಿಗಳ ದರ್ಪದ ನಡೆಗೆ ಗ್ರಾಮಸ್ಥರ ಆಕ್ರೋಶ

Priya Shatamarshan spoke about her fame after Bheema movie

Priya Shatamarshan: ಇನ್ಸ್ ಪೆಕ್ಟರ್‌ ಗಿರಿಜಾ ರಿಪೋರ್ಟಿಂಗ್‌ ಸಾರ್‌..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.