ಅಕ್ರಮ ಮಾಂಸದ ಅಂಗಡಿಗಳಿಗೆ ಬೀಗ
Team Udayavani, Jul 6, 2018, 11:56 AM IST
ಪಿರಿಯಾಪಟ್ಟಣ: ಅಕ್ರಮವಾಗಿ ನಡೆಸುತ್ತಿದ್ದ ಮಾಂಸದ ಅಂಗಡಿಗಳನ್ನು ಪಿಡಿಒ ನೇತೃತ್ವದಲ್ಲಿ ಬಾಗಿಲು ಮುಚ್ಚಿಸಿದ ಘಟನೆ ನಡೆದಿದೆ. ಬೆಟ್ಟದಪುರ ಗ್ರಾಪಂ ವತಿಯಿಂದ ಮಾಂಸದಂಗಡಿಗಳನ್ನು ಹರಾಜು ನಡೆಸಲಾಗಿತ್ತು.
ಹರಾಜಿನ ಸಮಯ ಮುಗಿದಿದ್ದು ನವೀಕರಣ ಮಾಡಿಕೊಂಡು ಹಣಪಾವತಿ ಮಾಡದೆ ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ಪಿಡಿಒ ಚಿದಾನಂದ್ ಮತ್ತು ಸಿಬ್ಬಂದಿ ಅಂಗಡಿಗಳಿಗೆ ಬೀಗ ಜಡಿದರು.
ಪಿಡಿಒ ಚಿದಾನಂದ್ ಮಾತನಾಡಿ, ಪಂಚಾಯಿತಿ ಒಪ್ಪಂದದಂತೆ ಪ್ರತಿವರ್ಷವೂ ಹಣ ಪಾವತಿ ಮಾಡಿ ಅಂಗಡಿಗಳನ್ನು ತಮ್ಮ ಜಾಗದಲ್ಲಿ ವ್ಯಾಪಾರ ಮಾಡಲು ಪಂಚಾಯಿತಿಯಿಂದ ತೀರ್ಮಾನಿಸಲಾಗಿತ್ತು. ಅದರಂತೆ ಕಳೆದ ವರ್ಷ ವ್ಯಾಪಾರ ಆರಂಭಿಸಿದ ಹಲವು ಅಂಗಡಿ ಈ ವರ್ಷಕ್ಕೆ ನವೀಕರಣ ಮಾಡಿಕೊಳ್ಳದೆ
ಪಂಚಾಯಿತಿ ಗಮನಕ್ಕೆ ಬಾರದಂತೆ ಅಕ್ರಮವಾಗಿ ವ್ಯಾಪಾರ ನಡೆಸುತ್ತಿರುವ ಬಗ್ಗೆ ಸಾರ್ವಜನಿಕ ದೂರು ಬಂದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬೀಗ ಹಾಕಲಾಗಿದೆ. ನಿಗದಿಪಡಿಸಿದ ಹಣ ಪಾವತಿ ಮಾಡುವವರೆಗೆ ಮಾಂಸ ಮಾರಾಟಕ್ಕೆ ಅವಕಾಶ ನೀಡುವುದಿಲ್ಲಾ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಂಗಡಿ ಮಾಲಿಕರ ಸಂಘದ ಅಧ್ಯಕ್ಷ ಇಕ್ಬಾಲ್ ಷರೀಫ್, ಗ್ರಾಪಂ ಮಾಜಿ ಸದಸ್ಯ ಮುನಾವರ್ಪಾಷಾ ಮತ್ತು ಪೊಲೀಸ್ ಇಲಾಖೆ ಎಎಸ್ಐ ರುದ್ರೇಗೌಡ ಮತ್ತು ಬಿಲ್ಕಲೆಕ್ಟರ್ ಮಂಜೇಗೌಡ ಮತ್ತಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.