MUDA CASE: 2 ಪುಟಗಳಲ್ಲಿ 41 ಪ್ರಶ್ನೆ ಮುಂದಿಟ್ಟ ಇ.ಡಿ.; ಅಯುಕ್ತರಿಗೆ ಪ್ರಶ್ನೆಗಳ ಸುರಿಮಳೆ


Team Udayavani, Oct 19, 2024, 12:47 AM IST

MUDA CASE: 2 ಪುಟಗಳಲ್ಲಿ 41 ಪ್ರಶ್ನೆ ಮುಂದಿಟ್ಟ ಇ.ಡಿ.; ಅಯುಕ್ತರಿಗೆ ಪ್ರಶ್ನೆಗಳ ಸುರಿಮಳೆ

ಮೈಸೂರು: ನಿವೇಶನ ಹಗರಣ ಕುರಿತಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಚೇರಿ ಮೇಲೆ ದಾಳಿ ಮಾಡಿರುವ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಮುಡಾ ಅಯುಕ್ತ ರಘುನಂದನ್‌ ಅವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇಡಿ ಅಧಿಕಾರಿಗಳು 2 ಪುಟಗಳಲ್ಲಿ 41 ಪ್ರಶ್ನೆಗಳನ್ನು ಆಯುಕ್ತರ ಮುಂದಿಟ್ಟು, ಉತ್ತರ ನೀಡುವಂತೆ ಕೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಬದಲಿ ನಿವೇಶನದ ಸುತ್ತಲೇ ಪ್ರಶ್ನೆಗಳು ಗಿರಕಿ ಹೊಡೆದಿದ್ದು, 2004ರಿಂದ 2023ರ ವರೆಗಿನ ಎಲ್ಲ ಮೂಲ ದಾಖಲೆಗಳನ್ನು ನೀಡುವಂತೆ ಕೇಳಲಾಗಿದೆ ಎನ್ನಲಾಗಿದೆ. ದೇವನೂರು ಬಡಾವಣೆ ರಚನೆಗಾಗಿ ಭೂಸ್ವಾದೀನ ಸಂಬಂಧ ಇಡಿ ಅಧಿಕಾರಿಗಳು ಮುಡಾ ಆಯುಕ್ತರಿಗೆ ಕೇಳಿರುವ ಪ್ರಶ್ನೆಗಳು ಇಂತಿವೆ.

– ದೇವನೂರು ಬಡಾವಣೆಯ ಭೂಸ್ವಾದೀನ ಕುರಿತು 18-09-1992ರಂದು ಹೊರಡಿಸಿದ ಸುತ್ತೋಲೆ ನೀಡಬೇಕು. ಭೂಸ್ವಾದೀನಕ್ಕೆ ಯಾವ ರೀತಿಯ ನಿಯಮ ಹಾಗೂ ನಿಬಂಧನೆ ಹೇರಲಾಗಿತ್ತು? 19 ಜನರಿಗೆ ಹಂಚಲಾಗಿರುವ ನಿವೇಶನದ ದಾಖಲೆ ಕೊಡಿ. ಬದಲಿ ನಿವೇಶನದ ಪರಿಹಾರದ ಮೊತ್ತ ಎಷ್ಟು ? ಡಿ ನೋಟಿಫಿಕೇಷನ್‌ ಕುರಿತ ಮೂಲ ದಾಖಲೆ ನೀಡಿ. ಡಿ ನೋಟಿಫಿಕೇಷನ್‌ ಮಾಡಲು ಕಾರಣ ಏನು ? ಅಂದಿನ ಸಭೆಯ ಮೂಲ ದಾಖಲೆ ನೀಡಿ.

-ಭೂಸ್ವಾದೀನ ಮಾಡಲು ಅನುಮತಿ ನೀಡಿದವರು ಯಾರು? ನೋಟಿಫಿಕೇಷನ್‌ ಆದ ಭೂಮಿ ಮಾರಾಟ ಮಾಡಲು ಹಾಗೂ ಪರಿಹಾರ ನೀಡಲು ಅವಕಾಶ ಇದೆಯಾ?ಭೂಸ್ವಾದೀನಕ್ಕೊಳಗಾದ ಸರ್ವೇ ನಂ. 462 ಮತ್ತು 464ರ ಸರ್ವೇ ಸ್ಕೆಚ್‌ ಕಾಪಿ ಕೊಡಿ. ನಿವೇಶನ ಪಡೆದ 19 ಜನರ ಹಣ ಪಡೆದುಕೊಳ್ಳಲಾಗಿದೆಯೇ? ಭೂಮಿ ಸಂಬಂಧ ಭೂಮಾಲಕ ದೇವರಾಜು ನೀಡಿದ ಪ್ರತಿಯನ್ನು ಯಾವ ರೀತಿ ಪಡೆದು ಕೊಳ್ಳಲಾಗಿದೆ? ಇತರ ಭೂಮಿಯ ಡಿ ನೋಟಿಫಿಕೇಷನ್‌ ದಾಖಲೆ ಕೊಡಿ. ಭೂಸ್ವಾದೀನ ಪ್ರಕ್ರಿಯೆ ಕುರಿತ ಸಂಪೂರ್ಣ ದಾಖಲೆ ನೀಡಿ.

-ಒತ್ತುವರಿಗೆ ಪರಿಹಾರವಾಗಿ ನೀಡಲಾಗಿರುವ ಬದಲಿ ನಿವೇಶನಗಳನ್ನು ಯಾವ ಮಾನದಂಡದ ಆಧಾರದ ಮೇಲೆ ನೀಡಿದ್ದೀರಿ ?ಒತ್ತುವರಿ ಮಾಡಿಕೊಂಡ ಭೂಮಿಗೆ ಬದಲಿ ನಿವೇಶನ ನೀಡಲು ಅರ್ಜಿ ಸ್ವೀಕರಿಸಲಾಗಿದೆಯೇ? ಯಾರ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ? ಜಂಟಿ ಸರ್ವೇ, ಸ್ಕೆಚ್‌ ಕಾಪಿ ಕೊಡಿ

– ಜಮೀನಿನ ಜಾಗದಲ್ಲಿ ಮೂಲಸೌಕರ್ಯ ಒದಗಿಸಲಾಗಿದೆಯೇ? ಬದಲಿ ನಿವೇಶನ ಹಂಚಿಕೆಯ ಬಳಿಕ ಪ್ರಸ್ತುತ ಆ ನಿವೇಶನದ ಪರಿಸ್ಥಿತಿ ಏನು? ಒತ್ತುವರಿ ಮಾಡಿಕೊಂಡ ಭೂಮಿಗೆ ಯಾವ ರೀತಿ ಪರಿಹಾರವನ್ನು ನಿಗದಿ ಮಾಡಲಾಯಿತು?

– 2017ರಂದು ನಡೆದ ಮುಡಾ ಸಭೆಯ ಸಂಪೂರ್ಣ ವಿವರ ಹಾಗೂ ನಿರ್ಣಯದ ಶಿಫಾರಸು ಪತ್ರ ನೀಡಿ. ಪಾರ್ವತಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಭೂಮಿ ಹಾಗೂ ನಿವೇಶನಗಳ ಮೂಲ ದಾಖಲೆ ನೀಡಿ. ದಾಖಲೆಯೊಂದಕ್ಕೆ ವೈಟ್ನರ್‌ ಹಾಕಿರುವುದು ಯಾರು ? ಅದರ ಹಿಂದಿನ ಉದ್ದೇಶ ಏನು ? ವೈಟ್ನರ್‌ ಹಾಕಿರುವ ಜಾಗದಲ್ಲಿ ಇದ್ದ ಅಂಶ ಯಾವುದು ಎಂದು ಇಡಿ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಟಾಪ್ ನ್ಯೂಸ್

Bihar-tragey

Tragedy: ಬಿಹಾರದ 2 ಜಿಲ್ಲೆಗಳಲ್ಲಿ ಕಳ್ಳಭಟ್ಟಿ ದುರಂತ: ಒಟ್ಟು 35 ಮಂದಿ ಸಾವು

Maha-Rig

Maharashtra: ವಾಣಿಜ್ಯ ವಾಹನಗಳಿಗೂ ಇನ್ನು ಡೀಲರ್‌ಗಳಿಂದಲೇ ನೋಂದಣಿ

supreme-Court

Court: ಬಾಲ್ಯವಿವಾಹ ತಡೆ ಕಾನೂನಿಗೆ ವೈಯಕ್ತಿಕ ಕಾನೂನು ಅಡ್ಡಿ ಆಗಬಾರದು: ಸುಪ್ರೀಂ

GOLD2

Gold Price: ದೆಹಲಿಯಲ್ಲಿ 80 ಸಾವಿರ ರೂ.ಗಳ ಸನಿಹಕ್ಕೆ ಚಿನ್ನದ ದರ

NZ-Rachin

India Vs New Zealand Test: ಇನ್ನಿಂಗ್ಸ್‌ ಸೋಲು ತಪ್ಪಿಸಲು ಭಾರತ ಹೋರಾಟ

ranaj

Ranaji Trophy: ಹೊರಮೈದಾನ ಒದ್ದೆ : ಕರ್ನಾಟಕ-ಕೇರಳ ಪಂದ್ಯಕ್ಕೆ ತೊಂದರೆ

Udupi: ಗೀತಾರ್ಥ ಚಿಂತನೆ-68: ಅರ್ಜುನನ ಅಹಂ ಮರ್ದನ

Udupi: ಗೀತಾರ್ಥ ಚಿಂತನೆ-68: ಅರ್ಜುನನ ಅಹಂ ಮರ್ದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಚೆ ಮೂಲಕ ತರಿಸಿದ್ದ 21 ಕೋಟಿ ರೂ. ಡ್ರಗ್ಸ್‌ ಜಪ್ತಿ!ಅಂಚೆ ಮೂಲಕ ತರಿಸಿದ್ದ 21 ಕೋಟಿ ರೂ. ಡ್ರಗ್ಸ್‌ ಜಪ್ತಿ!

CCB Police: ಅಂಚೆ ಮೂಲಕ ತರಿಸಿದ್ದ 21 ಕೋಟಿ ರೂ. ಡ್ರಗ್ಸ್‌ ಜಪ್ತಿ!

ಡಿ. 9ರಿಂದ 20ರ ವರೆಗೆ ಚಳಿಗಾಲ ಅಧಿವೇಶನ?

Assembly Session: ಡಿ. 9ರಿಂದ 20ರ ವರೆಗೆ ಚಳಿಗಾಲ ಅಧಿವೇಶನ?

ಕಲೆಕ್ಷನ್‌ ಬಿಟ್ಟು ನನ್ನ ಬಗೆಗಿನ ತೀರ್ಪು ಓದಲಿ: ಪರಂಗೆ ಯತ್ನಾಳ್‌ ತಿರುಗೇಟು

ಕಲೆಕ್ಷನ್‌ ಬಿಟ್ಟು ನನ್ನ ಬಗೆಗಿನ ತೀರ್ಪು ಓದಲಿ: ಪರಂಗೆ ಯತ್ನಾಳ್‌ ತಿರುಗೇಟು

ಮುಡಾ ಕಚೇರಿಗೆ ಇ.ಡಿ. ದಾಳಿ: ಸರಕಾರ-ವಿಪಕ್ಷ ವಾಗ್ಧಾಳಿಮುಡಾ ಕಚೇರಿಗೆ ಇ.ಡಿ. ದಾಳಿ: ಸರಕಾರ-ವಿಪಕ್ಷ ವಾಗ್ಧಾಳಿ

ಮುಡಾ ಕಚೇರಿಗೆ ಇ.ಡಿ. ದಾಳಿ: ಸರಕಾರ-ವಿಪಕ್ಷ ವಾಗ್ಧಾಳಿ

MUDA Case: ದಾಖಲೆ ಪರಿಶೀಲನೆಗಿಂತ ಹೆಚ್ಚಿನದೇನು ಸಾಧ್ಯ: ಡಿ.ಕೆ. ಶಿವಕುಮಾರ್‌

MUDA Case: ದಾಖಲೆ ಪರಿಶೀಲನೆಗಿಂತ ಹೆಚ್ಚಿನದೇನು ಸಾಧ್ಯ: ಡಿ.ಕೆ. ಶಿವಕುಮಾರ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Bihar-tragey

Tragedy: ಬಿಹಾರದ 2 ಜಿಲ್ಲೆಗಳಲ್ಲಿ ಕಳ್ಳಭಟ್ಟಿ ದುರಂತ: ಒಟ್ಟು 35 ಮಂದಿ ಸಾವು

Maha-Rig

Maharashtra: ವಾಣಿಜ್ಯ ವಾಹನಗಳಿಗೂ ಇನ್ನು ಡೀಲರ್‌ಗಳಿಂದಲೇ ನೋಂದಣಿ

supreme-Court

Court: ಬಾಲ್ಯವಿವಾಹ ತಡೆ ಕಾನೂನಿಗೆ ವೈಯಕ್ತಿಕ ಕಾನೂನು ಅಡ್ಡಿ ಆಗಬಾರದು: ಸುಪ್ರೀಂ

GOLD2

Gold Price: ದೆಹಲಿಯಲ್ಲಿ 80 ಸಾವಿರ ರೂ.ಗಳ ಸನಿಹಕ್ಕೆ ಚಿನ್ನದ ದರ

NZ-Rachin

India Vs New Zealand Test: ಇನ್ನಿಂಗ್ಸ್‌ ಸೋಲು ತಪ್ಪಿಸಲು ಭಾರತ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.