Mysore Dasara: ಜನ ಸಾಮಾನ್ಯರಿಗೆ ದುಬಾರಿಯಾದ ದಸರೆ


Team Udayavani, Sep 26, 2024, 6:12 PM IST

Mysore Dasara: ಜನ ಸಾಮಾನ್ಯರಿಗೆ ದುಬಾರಿಯಾದ ದಸರೆ

ಮೈಸೂರು: ಈ ಬಾರಿಯ ನಾಡಹಬ್ಬ ಮೈಸೂರು ದಸರಾ ದುಬಾರಿಯಾಗಿದ್ದು, ಸಾಮಾನ್ಯ ಜನರ ಪಾಲಿಗೆ ಮನರಂಜನ ಕಾರ್ಯಕ್ರಮಗಳು ಗಗನ ಕುಸುಮವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅ.3ರಿಂದ 12ರವರೆಗೆ ನಡೆಯುವ ದಸರಾ ಮಹೋತ್ಸವಕ್ಕೆ ಸರ್ಕಾರ ಇದೇ ಮೊದಲ ಬಾರಿಗೆ ಬಾರಿ ಮೊತ್ತದ ಅನುದಾನ ನೀಡಿದ್ದರೂ, ವಿವಿಧ ದಸರಾ ಉಪ ಸಮಿತಿಗಳು ಆಯೋಜಿಸುತ್ತಿರುವ ಕಾರ್ಯಕ್ರಮಗಳು ಜನ ಸಾಮಾನ್ಯರಿಗೆ ದುಬಾರಿಯಾಗಿದೆ. ಇದಕ್ಕೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.

ದುಬಾರಿಯಾದ ಅಂಬಾರಿ: ಪ್ರತಿವರ್ಷದಂತೆ ದಸರಾ ವೇಳೆ ದೀಪಾಲಂಕಾರ, ಬೆಳಕಿನ ನಗರಿ ಮೈಸೂರನ್ನು ಡಬಲ್‌ ಡೆಕ್ಕರ್‌ (ಅಂಬಾರಿ) ಬಸ್ಸಿನಿಂದ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ, ಅಂಬಾರಿ ಬಸ್‌ನಲ್ಲಿ ಕುಳಿತು ನಗರದ ಬೆಳಿಕಿನ ಸೌಂದರ್ಯ ಸವಿಯಲು ಇದ್ದ ಟಿಕೆಟ್‌ ದರವನ್ನು 350 ರಿಂದ 500 ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಅಂಬಾರಿ ಬಸ್‌ ದುಬಾರಿಯಾಗಿದೆ. ಈ ಹಿಂದೆ ಅಂಬಾರಿ ಬಸ್‌ ಏರಲು 350 ರೂ. ಟಿಕೆಟ್‌ ದರ ನಿಗದಿ ಮಾಡಲಾಗಿತ್ತು. ಟಿಕೆಟ್‌ ಪಡೆದ ವ್ಯಕ್ತಿ ಕಳಗೆ ಅಥವಾ ಚಾವಣಿ ಯಲ್ಲಿ ಕುಳಿತು ದೀಪಾಲಂಕಾರ ವೀಕ್ಷಿಸಬಹುದಿತ್ತು. ಆದರೆ, ಈ ಬಾರಿ ಚಾವಣಿಯಲ್ಲಿ ಕುಳಿತು ನಗರ ವೀಕ್ಷಿಸಲು 500 ರೂ., ಕೆಳಗೆ (ಲೋಯರ್‌ ಡೆಕ್‌) ಕುಳಿತುಕೊಳ್ಳಲು 250 ರೂ. ದರ ನಿಗದಿ ಮಾಡಲಾಗಿದೆ.

ಗಗನ ಕುಸುಮವಾದ ಯುವ ದಸರಾ: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ, ಯುವ ಸಮುದಾಯವನ್ನು ಸಂಭ್ರಮದ ಅಲೆಯಲ್ಲಿ ತೇಲಿಸುತ್ತಿದ್ದ ಯುವ ದಸರಾ ಕಾರ್ಯಕ್ರಮ ವೀಕ್ಷಣೆಗೂ ಟಿಕೆಟ್‌ ಮಾಡಲಾಗಿದೆ. ಯುವ ದಸರಾ ಇತಿಹಾಸ ದಲ್ಲಿ ಇದೇ ಮೊದಲ ಬಾರಿಗೆ ಟಿಕೆಟ್‌ ಪದ್ಧತಿ ಪರಿಚಯಿಸಲಾಗಿದೆ. ಈ ಹಿಂದೆ ವಿಐಪಿ ಪಾಸ್‌ಗಳನ್ನು ನೀಡುವ ಪದ್ಧತಿ ಇತ್ತು. ಆದರೆ, ಈ ಬಾರಿ ವೇದಿಕೆಯ ಮುಂಭಾಗದ ಗ್ಯಾಲರಿ 1 ಮತ್ತು ಗ್ಯಾಲರಿ 2ಕ್ಕೆ ಟಿಕೆಟ್‌ ವ್ಯವಸ್ಥೆ ಮಾಡಲಾಗಿದೆ. ಗ್ಯಾಲರಿ 1ರಲ್ಲಿ ಕುಳಿತು ಯುವ ದಸರಾ ವೀಕ್ಷಿಸಲು 8 ಸಾವಿರ ರೂ., ಗ್ಯಾಲರಿ 2ರಲ್ಲಿ ಕುಳಿತು ವೀಕ್ಷಿಸಲು 5 ಸಾವಿರ ರೂ. ನಿಗದಿ ಪಡಿಸಲಾಗಿದೆ. ಈ ಪ್ರಮಾಣದ ಹಣ ನೀಡಿ ಮನೋರಂಜನೆ ಕಾರ್ಯಕ್ರಮ ವೀಕ್ಷಿಸಬೇಕೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಉಳ್ಳವರಿಗೆ ಸೀಮಿತವಾಯ್ತೆ ದಸರಾ: ರಾಜ್ಯ ಸರ್ಕಾರ ದಸರೆಗೆ 40 ಕೋಟಿ ರೂ. ಅನುದಾನವನ್ನು ಘೋಷಿಸಿದ್ದರೂ ದಸರಾ ಮಹೋತ್ಸವ ಸಮಿತಿ ಅಂಬಾರಿ ಬಸ್‌ ಟಿಕೆಟ್‌ ದರ ಹೆಚ್ಚಳ, ಯುವ ದಸರಾ ವೀಕ್ಷಣೆಗೆ ಟಿಕೆಟ್‌ಗೆ ದುಬಾರಿ ದರ ನಿಗದಿ ಪಡಿಸಿದೆ. ಇದರಿಂದ ಜನ ಸಮಾನ್ಯರು ದಸರೆ ಕಾರ್ಯಕ್ರಮಗಳಿಂದ ದೂರ ಉಳಿಯಲಿದ್ದು, ಉಳ್ಳವರಷ್ಟೇ ಕಾರ್ಯಕ್ರಮ ವೀಕ್ಷಿಸುವಂತಾಗಿದೆ. ಈ ನಡುವೆ ಅರಮನೆ ಅಂಗಳದಲ್ಲಿ ಹೆಚ್ಚುವರಿಯಾಗಿ 10 ಸಾವಿರ ಮಂದಿ ಕುಳಿತು ದಸರಾ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗು ತ್ತಿದೆ. ಇದರಿಂದಲೂ ಟಿಕೆಟ್‌ ಮೂಲಕ ಹಣ ವಸೂಲಿಗೆ ದಸರಾ ಮಹೋತ್ಸವ ಸಮಿತಿ ಇಳಿದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಪ್ರಾಯೋಜಕತ್ವದ ಮೊರೆ ಹೋದ ಸಮಿತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಬಾರಿಯ ದಸರಾ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು 40 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿತ್ತು. ದಸರೆ ಇತಿಹಾಸದಲ್ಲಿ ಈ ಪ್ರಮಾಣದ ಅನುದಾನ ಘೋಷಣೆ ಮಾಡಿದ್ದು ಇದೆ ಮೊದಲು. ಈ ಪ್ರಮಾಣದ ಅನುದಾನದಲ್ಲಿ ಅಚ್ಚುಕಟ್ಟಾಗಿ, ಅದ್ದೂರಿಯಾಗಿ ದಸರೆ ಆಚರಿಸಲು ಅವಕಾಶವಿದ್ದರೂ, ದಸರಾ ಮಹೋತ್ಸವ ಸಮಿತಿ ಖಾಸಗಿ ವಲಯದಿಂದ ಪ್ರಯೋಜಕತ್ವ ಪಡೆಯಲು ಹೆಣಗಾಡು ತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡೆ ಸಂಶಯಕ್ಕೆಎಡೆ ಮಾಡಿಕೊಟ್ಟಿದೆ.

ಸತೀಶ್‌ ದೇಪುರ

ಟಾಪ್ ನ್ಯೂಸ್

1-aane

Elephant; ಆಂಧ್ರಕ್ಕೆ ದಸರಾ ಆನೆಗಳನ್ನು ಕೊಡುವುದಿಲ್ಲ, ಗೊಂದಲ ಬೇಡ : ಈಶ್ವರ ಖಂಡ್ರೆ

ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!

ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!

1-asasa

KSRTC; ಸ್ಟೇರಿಂಗ್ ರಾಡ್ ತುಂಡಾಗಿ ಹಳ್ಳಕ್ಕೆ ನುಗ್ಗಿದ ಬಸ್: ಹಲವರಿಗೆ ಗಾಯ

02002

World Tourism Day:ಪಶ್ಚಿಮ ಘಟ್ಟದ ಕಾನನದ ಸಣ್ಣ ಜಲಪಾತದ ಹುಡುಕಾಟದ ಸಾಹಸ!

Gurugram: ಗುಂಡಿನ ಚಕಮಕಿ-ನಟೋರಿಯಸ್‌ ಕ್ರಿಮಿನಲ್‌ ಭಾಷಾ ಬಂಧನ, ಶಸ್ತ್ರಾಸ್ತ್ರ ವಶ

Gurugram: ಗುಂಡಿನ ಚಕಮಕಿ-ನಟೋರಿಯಸ್‌ ಕ್ರಿಮಿನಲ್‌ ಭಾಷಾ ಬಂಧನ, ಶಸ್ತ್ರಾಸ್ತ್ರ ವಶ

000

World Tourism Day:ಚಾರಣ- ಇದು ಮಲೆಕುಡಿಯರ ಊರಿನ ನಡುವಿನ ನಿಗೂಢ ಜಲಪಾತ

UNSC: ವಿಶ್ವಸಂಸ್ಥೆ ಭದ್ರತಾ ಮಂಡಳಿ ಶಾಶ್ವತ ಸದಸ್ಯತ್ವ; ಭಾರತಕ್ಕೆ ಮತ್ತಷ್ಟು ಬೆಂಬಲ

UNSC: ವಿಶ್ವಸಂಸ್ಥೆ ಭದ್ರತಾ ಮಂಡಳಿ ಶಾಶ್ವತ ಸದಸ್ಯತ್ವ; ಭಾರತಕ್ಕೆ ಮತ್ತಷ್ಟು ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-Mysore1

MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್‌ ಸಾಧ್ಯತೆ

Mysuru-Dasara

Mysuru Dasara: ಎದೆ ಝಲ್‌ ಎನ್ನಿಸಿದ ಶಬ್ದಕ್ಕೂ ಜಗ್ಗದ ಗಜಪಡೆ

2

Hunsur: ಶುಂಠಿಹೊಲದಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಬಂಧನ

Yuva Dasara: ಅ.6 -10 ರವರೆಗೆ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ; ಇಲ್ಲಿದೆ ವಿವರ

Yuva Dasara: ಅ.6 -10 ರವರೆಗೆ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ; ಇಲ್ಲಿದೆ ವಿವರ

13-hunsur

Hunsur: ಮಾಜಿ ಶಾಸಕ ಮಂಜುನಾಥ್‌ಗೆ ಎಚ್1ಎನ್1 ದೃಢ; ಖಾಸಗಿ ಆಸ್ಪತ್ರೆಗೆ ದಾಖಲು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

crime (2)

Horrific; ಶಾಲೆಯ ಏಳಿಗೆಗಾಗಿ 11 ವರ್ಷದ ವಿದ್ಯಾರ್ಥಿಯನ್ನೇ ಬ*ಲಿ ನೀಡಿದ ಮಾಲಕ !!!

1-aane

Elephant; ಆಂಧ್ರಕ್ಕೆ ದಸರಾ ಆನೆಗಳನ್ನು ಕೊಡುವುದಿಲ್ಲ, ಗೊಂದಲ ಬೇಡ : ಈಶ್ವರ ಖಂಡ್ರೆ

ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!

ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!

1-asasa

KSRTC; ಸ್ಟೇರಿಂಗ್ ರಾಡ್ ತುಂಡಾಗಿ ಹಳ್ಳಕ್ಕೆ ನುಗ್ಗಿದ ಬಸ್: ಹಲವರಿಗೆ ಗಾಯ

02002

World Tourism Day:ಪಶ್ಚಿಮ ಘಟ್ಟದ ಕಾನನದ ಸಣ್ಣ ಜಲಪಾತದ ಹುಡುಕಾಟದ ಸಾಹಸ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.