![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 2, 2023, 8:58 PM IST
ಹುಣಸೂರು: ಸ್ಯಾಂಡಲ್ ವುಡ್ ನಟ, ಹ್ಯಾಟ್ರಿಕ್ ಹೀರೋ ‘ವೇದ’ ಚಿತ್ರದ ನಾಯಕ ಶಿವರಾಜ್ಕುಮಾರ್ ಸೋಮವಾರ ಹುಣಸೂರಿನ ಲೀಲಾ ಚಿತ್ರ ಮಂದಿರಕ್ಕೆ ಚಿತ್ರದ ನಾಯಕಿ ಗಾನವಿ ಲಕ್ಷ್ಮಣ್, ಪತ್ನಿ ಗೀತಾ ಶಿವರಾಜ್ಕುಮಾರ್ ಹಾಗೂ ನಿರ್ಮಾಪಕ ಹರ್ಷರೊಂದಿಗೆ ಭೇಟಿ ನೀಡಿ ಚಿತ್ರದ ಪ್ರಚಾರದೊಂದಿಗೆ ಅಭಿಮಾನಿಗಳನ್ನು ರಂಜಿಸಿದರು.
ಸಂಜೆ ಆಗಮಿಸಿದ ಶಿವರಾಜ್ಕುಮಾರ್ ಹಾಗೂ ತಂಡವನ್ನು ಕಲ್ಪತರು ವೃತ್ತದಿಂದ ಅಭಿಮಾನಿಗಳು ಬೈಕ್ ರ್ಯಾಲಿ ಮೂಲಕ ಘೋಷಣೆ ಕೂಗುತ್ತಾ, ಜಯಕಾರ ಹಾಕುತ್ತಾ ಲೀಲಾ ಚಿತ್ರಮಂದಿರಕ್ಕೆ ಕರೆತಂದರು. ಚಿತ್ರ ಮಂದಿರದ ಆವರಣದಲ್ಲಿ3 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ತಮ್ಮ ನಾಯಕನನ್ನು ನೇಡಲು ನೆರೆದಿದ್ದರು, ಶಿವರಾಜ್ ಕುಮಾರ್ ಅವರನ್ನು ಕಂಡೊಡನೆ ಹೋ ಎಂದು ಕೂಗುತ್ತಾ ಚಪ್ಪಾಳೆ ತಟ್ಟಿ ಹೂಮಳೆ ಗರೆದು ಅಭಿಮಾನ ಮೆರೆದರು.
ನೂಕು ನುಗ್ಗಲು
ರಸ್ತೆಯಿಂದ ಹಿಡಿದು ಲೀಲಾ ಚಿತ್ರ ಮಂದಿರದ ಆವರಣಕ್ಕೆ ಬರುತ್ತಿದ್ದಂತೆ ಅಭಿಮಾನಿಗಳು ಅವರ ಕಾರಿಗೆ ಮುತ್ತಿಕೊಂಡರು. ಪ್ರಯಾಸ ಪಟ್ಟು ಕಾರಿನಿಂದ ಹೊರಬಂದು ಕಾರಿನ ಮೇಲೇರಿ ಅಭಿಮಾನಿಗಳತ್ತ ಕೈಬೀಸಿದರು. ನಂತರ ಬಿಗಿ ರಕ್ಷಣೆಯಲ್ಲಿ ನೂಕು ನುಗ್ಗಲಿನ ನಡುವೆ ಚಿತ್ರಮಂದಿರ ಪ್ರವೇಶಿಸಿ ತಂಡದೊಂದಿಗೆ ಬಾಲ್ಕನಿಗೆ ಬಂದು ಅಭಿಮಾನಿಗಳಿಗೆ ವಂದಿಸಿ, ಹೆಣ್ಣುಮಕ್ಕಳಿಗೋಸ್ಕರವೇ ವೇದ ಚಿತ್ರ ತಯಾರಿಸಿದ್ದು, ಎಲ್ಲರೂ ನೋಡುವಂತೆ ಹುರಿ ದುಂಬಿಸಿ, ಮುಂದಿನ ಚಿತ್ರದ ಟ್ರೈಲರ ನ್ನು ಹುಣಸೂರಿನಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿ, ಚಿತ್ರದ ಹಾಗೂ ಬೊಂಬೆ ಹಾಡುತೈತೆ ಹಾಡು ಹಾಡಿ, ಕುಣಿದು ಕುಪ್ಪಳಿಸಿ ರಂಜಿಸಿದರು. ಇದೇ ರೀತಿ ತಂಡದ ನಾಯಕಿ ಗಾನವಿ ಲಕ್ಷ್ಮಣ್ ಸಹ ಹಾಡು ಹಾಡಿ, ಸಿನಿಮಾದ ಡೈಲಾಗ್ ಹೇಳಿ ಚಪ್ಪಾಳೆ ಗಿಟ್ಟಿಸಿದರು.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.