![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 5, 2022, 7:49 PM IST
ಪಿರಿಯಾಪಟ್ಟಣ : ಪಟ್ಟಣದ ಮಹಾಲಕ್ಷ್ಮಿ ಕಲ್ಯಾಣ ಮಂಟಪದ ಎದುರು ಬೈಕ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಗೆ ತೀವ್ರ ಗಾಯಗಳಾದರೆ ಕಾರು ಗುಂಡಿಗೆ ಬಿದ್ದು ಪಲ್ಟಿಯಾದ ಘಟನೆ ನಡೆದಿದೆ.
ಪಿರಿಯಾಪಟ್ಟಣದ ಬಿ.ಎಂ. ರಸ್ತೆಯಲ್ಲಿ ಮದ್ಯಾಹ್ನ 2;30 ರ ವೇಳೆಯಲ್ಲಿ ಅಪಘಾತ ಸಂಭವಿಸಿದ್ದು ಬೈಕ್ ಸವಾರರಾದ ವಿ.ಜಿ.ಕೊಪ್ಪಲು ಗ್ರಾಮದ ಕೃಷ್ಣೇಗೌಡ ಮತ್ತು ರಾಧ ಎಂಬುವವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ.
ಕಾರು ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದು ಪಲ್ಟಿಯಾದ ಸಂರ್ಭದಲ್ಲಿ ಸ್ಥಳೀಯರು ಆಗಮಿಸಿ ಕಾರಿನಲ್ಲಿದ್ದವರನ್ನು ರಕ್ಷಿಸಿದ್ಧಾರೆ. ಅಪಘಾತದಲ್ಲಿ ಪಶ್ವಿಮ ಬಂಗಾಲ ಮೂಲದ ಪೊಲಾಮಿನಾ ಸೇನಾಪತಿ ಎಂಬ ಮಹಿಳೆಗೆ ಕೈ ಮುರಿದಿದ್ದು ಕಾರಿನಲ್ಲಿ ಇದ್ದ ಡ್ರೈವರ್ ತಪನ್ಕುಮಾರ್ ಭೌಮಿಕ್, ಆಲ್ಮಫೀರ್ ಸೇನಾಪತಿ ಮತ್ತು ಯುವತಿಗೆ ಸಣ್ಣಪುಟ್ಟಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ಧಾರೆ.
ಈ ಕುರಿತು ಪಿರಿಯಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಎರಡು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಅಬುಧಾಬಿ: 2022ರ ಐಐಎಫ್ಎ ಪ್ರಶಸ್ತಿ ಪ್ರದಾನ ಸಮಾರಂಭ:”ಶೇರ್ ಶಾ’ಕ್ಕೆ ಐದು ಪ್ರಶಸ್ತಿ ಸಂಭ್ರಮ
You seem to have an Ad Blocker on.
To continue reading, please turn it off or whitelist Udayavani.