![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Feb 4, 2023, 4:54 PM IST
ಮೈಸೂರು: ಕರ್ನಾಟಕದ ರಾಜಕಾರಣವು ಸಿ.ಡಿ. ವಿಚಾರ, ಆಡಿಯೋ, ವೈಯಕ್ತಿಕ ವಿಚಾರ ಬಿಟ್ಟು ಮುಂದೆ ಸಾಗಿದೆ. ಜನರ ಮುಂದೆ ತೆರೆದಿರಲು ಅಭಿವೃದ್ಧಿ ವಿಚಾರ ಇಲ್ಲದೆ ಇಂತಹ ವಿಚಾರದಲ್ಲೇ ಇದ್ದಾರೆ. ಯಾರ ಹತ್ತಿರ ಅಭಿವೃದ್ಧಿ ವಿಚಾರ ಇಲ್ಲವೂ ಅಂತಹವರು ಇಂತಹ ಸಿಡಿ ವಿಚಾರ ಮಾತನಾಡಿಕೊಂಡು ಇರುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಮೊಬೈಲ್ ತೆಗೆದರೂ ಏನಾದರೊಂದು ಸಿಕ್ಕಿರುತ್ತದೆ. ಓಪನ್ ಮಾಡಿ ಅಂದರೆ ಎಷ್ಟು ಜನಕ್ಕೆ ಧೈರ್ಯ ಇದೆ ಹೇಳಿ? ಇಂತಹ ವಿಚಾರಗಳಿಗೆ ಜನ ಸೊಪ್ಪು ಹಾಕಲ್ಲ ಎನ್ನುವುದು ಎಲ್ಲಾ ಚುನಾವಣೆಯಲ್ಲಿ ಗೊತ್ತಾಗಿದೆ. ಹಾಗಾಗಿ ಇಂತಹ ವಿಚಾರ ಬಿಟ್ಟು ಬೇರೆ ವಿಚಾರ ಮಾತನಾಡಿ. ಆಗ ಜನ ಕೂಡ ಒಪ್ಪಿಕೊಳ್ಳುತ್ತಾರೆ ಎಂದರು.
ಇದನ್ನೂ ಓದಿ:ಹಸೆಮಣೆ ಏರಿದಾಕ್ಷಣ ರಕ್ತದಾನ ಮಾಡಿದ ನವಜೋಡಿ; ಲಗ್ನಪತ್ರಿಕೆಯಲ್ಲಿ ಮಾಹಿತಿ
ಇದು ಕೇವಲ ರಾಜಕಾರಣಿಗಳ ಮೊಬೈಲ್ನಲ್ಲಿ ಅಲ್ಲ, ಎಲ್ಲರ ಮೊಬೈಲಿನಲ್ಲೂ ಇದೆ. ಇದನ್ನ ಪ್ರಶ್ನೆ ಮಾಡುವವರು ಹಾಗೂ ವಿರೋಧ ಪಕ್ಷದಲ್ಲಿ ಇದ್ದು ಆಡಳಿತ ಪಕ್ಷದವರನ್ನು ಪ್ರಶ್ನಿಸುವವರೂ ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.