![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 29, 2022, 7:01 PM IST
ಪಿರಿಯಾಪಟ್ಟಣ : ಬೈಕಿನಲ್ಲಿ ತೆರಳುತ್ತಿದ್ದ ದಂಪತಿಗಳಿಗೆ ಅಪರಿಚಿತ ವಾಹನ ಢಿಕ್ಕಿಹೊಡೆದ ಪರಿಣಾಮ ಪತ್ನಿ ಸಾವನಪ್ಪಿರುವ ಘಟನೆ ನಡೆದಿದೆ.
ಪಟ್ಟಣದ ಶಿವಣ್ಣ ಮತ್ತು ಶಾಂತಮ್ಮ ದಂಪತಿಗಳು ತಮ್ಮ ರಾಜಾಪುರದಲ್ಲಿ ಇರುವ ಜಮೀನಿನಲ್ಲಿ ಹಾಲು ಕರೆಯುವ ಸಲುವಾಗಿ ಗೋಣಿಕೊಪ್ಪಾ ರಸ್ತೆಯಲ್ಲಿ ತೆರಳುತ್ತಿದ್ದು ಮಹದೇಶ್ವರ ದೇವಾಲಯದ ತಿರುವಿನಲ್ಲಿ ಅಪರಚಿತ ವಾಹನ ಢಿಕ್ಕಿಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ಇಬ್ಬರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ತೆರಳಲು ಆಂಬುಲೆನ್ಸ್ ಗೆ ಹತ್ತಿಸುವ ಸಂದರ್ಭದಲ್ಲಿ ಸಾವನಪ್ಪಿದ್ದು ಪತಿ ಶಿವಣ್ಣರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ ಮುಂದುವರೆಸಲಾಗುತ್ತಿದೆ.
ಸರ್ಕಾರಿ ವಾಹನ ಬೈಕ್ ನಡುವೆ ಮುಖಾಮುಖಿ: ಸವಾರ ಸಾವು
ಪಿರಿಯಾಪಟ್ಟಣದ ಕೆಪಿಟಿಸಿಎಲ್ ಇಲಾಖೆಯ ವಾಹನ ಬೈಕ್ಗೆ ಢಿಕ್ಕಿಹೊಡೆದು ವ್ಯಕಿಯೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.
ಪಿರಿಯಾಪಟ್ಟಣ ಟೌನ್ನ ಮೇದರ್ ಬ್ಲಾಕ್ ನ ಪುಟ್ಟಯ್ಯ ಎಂಬುವವರ ಮಗ ರಂಜಿತ್ (21) ಎಂಬಾತನೆ ಮೃತಪಟ್ಟಿರುವಾತ.ಈತ ಪಿರಿಯಾಪಟ್ಟಣ ಟೌನ್ನಿಂದ ಮಡಿಕೇರಿ ಮಾರ್ಗವಾಗಿ ತಮ್ಮ ಗಾಂಧಿನಗರ ಬಡವಾಣೆಗೆ ತೆರಳುತ್ತಿದ್ದು ಪಟ್ಟಣದ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಯ ಎದುರು ಹಿಂಬದಿಯಿಂದ ಬರುತ್ತಿದ್ದುಕೆಪಿಟಿಸಿಎಲ್ ಕಚೇರಿಯ ಟಿಟಿವಾಹನ ಡಿಕ್ಕಿಹೊಡೆದ ಪರಿಣಾಮ ತೀವ್ರ ಗಾಯಾಳುವಾಗಿದ್ದ ರಂಜಿತ್ನನ್ನು ಮೈಸೂರಿಗೆ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಂಜಿತ್ ಮೃತಪಟ್ಟಿದ್ಧಾನೆ ಎಂದು ಪಿರಿಯಾಪಟ್ಟಣ ಪೊಲೀಸರು ತಿಳಿಸಿದ್ಧಾರೆ.
ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.