ಕಾಂಗ್ರೆಸ್‌ಗೆ ಬೇಸತ್ತು ಶಂಕರ್‌ ರಾಜೀನಾಮೆ


Team Udayavani, Oct 4, 2017, 12:39 PM IST

mu5.jpg

ತಿ.ನರಸೀಪುರ/ ಬನ್ನೂರು: ಜೀವನ ಪರ್ಯಂತ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದರೂ ಆಡಳಿತರೂಢ ಸರ್ಕಾರದಲ್ಲಿ ಯಾವುದೇ ಸ್ಥಾನಮಾನವನ್ನು ನೀಡದೆ ನಿರ್ಲಕ್ಷಿಸಿದ್ದಕ್ಕೆ ಹಾಗೂ ಒಂದೊಂದು ಚುನಾವಣೆಯಲ್ಲೂ ಜನಪ್ರತಿನಿಧಿಯಾಗಲು ಅಪೇಕ್ಷೆಪಟ್ಟಾಗ ಆಕ್ಷೇಪಿಸಿದ್ದಕ್ಕೆ ಬೇಸತ್ತು ಕಾಂಗ್ರೆಸ್‌ ತೊರೆಯಲು ನಿರ್ಧರಿಸಿದ್ದೇನೆ ಎಂದು ಮೈಸೂರು ನಗರ ಕಾಂಗ್ರೆಸ್‌ ಸಮಿತಿಯ ಕಾರ್ಯದರ್ಶಿ ಹಾಗೂ ವಕ್ತಾರ ಎಸ್‌.ಶಂಕರ್‌ ಹೇಳಿದರು.

ಪಟ್ಟಣದ ಹಳೇ ತಿರುಮಕೂಡಲಿನಲ್ಲಿರುವ ಶ್ರೀ ಆದಿಚುಂಚನಗಿರಿ ರಜತೋತ್ಸವ ಭವನದಲ್ಲಿ ಅ.8ರ ರಾಜಕೀಯ ಶಕ್ತಿ ಪ್ರದರ್ಶನ ಹಾಗೂ ಬೃಹತ್‌ ಬೆಂಬಲಿಗರ ಸಮಾವೇಶದ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ರಾಜಕೀಯವಾಗಿ ನೆಲೆಯನ್ನು  ಕಲ್ಪಿಸಿದ ಮಾತೃಪಕ್ಷವಾದ ಕಾಂಗ್ರೆಸ್‌ನಲ್ಲಿ ಹಲವು ದಶಕಗಳ ಕಾಲ ದುಡಿದರೂ ಕೂಡ ಅವಕಾಶ ಕೊಡಲಿಲ್ಲ. ಇತ್ತೀಚೆಗಷ್ಟೇ ಬಂದವರಿಗೆ ಅಧಿಕಾರವನ್ನು ಕೊಡಲಾರಂಭಿಸಿದರು. ಮುಂದಿನ ಅವಕಾಶಕ್ಕೆ ಭರವಸೆ ನೀಡಿದರು ಹೀಗಾಗಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದರು.

ಅ.8 ರಂದು ಬೃಹತ್‌ ಸಮಾವೇಶ: ಸಾಮಾಜಿಕ ಮತ್ತು ಸಮುದಾಯ ಸೇವೆಯನ್ನು ಮಾಡುವವರಿಗೆ ರಾಜಕೀಯ ಅಧಿಕಾರ ಬೇಕು. ಜನಪ್ರತಿನಿಧಿಯಾಗಿ ಆಯ್ಕೆಗೊಂಡರೆ ಮಾತ್ರ ನಂಬಿದ ಜನರಿಗೆ ಏನನ್ನಾದರೂ ಮಾಡಲು ಸಾಧ್ಯ. ಆಗಂತ ರಾಜಕೀಯ ಅಧಿಕಾರವನ್ನೇ ಮುಖ್ಯ ಎಂಬ ಭಾವನೆ ನನ್ನಲ್ಲಿಲ್ಲ.

ಬೆಂಬಲಿಗರು ಹಾಗೂ ಹಿತೈಷಿಗಳ ಸಲಹೆಯಂತೆ ಕಾಂಗ್ರೆಸ್‌ ಪಕ್ಷವನ್ನು ತ್ಯಜಿಸುವ ನಿರ್ಧಾರವನ್ನು ಮುಂದಾಗಿದ್ದೇವೆ.  ಈಗಾಗಲೇ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿದ್ದು, ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಮೂಲಕ ಕೆಪಿಸಿಸಿ ಅಧ್ಯಕ್ಷರಿಗೆ ಕಳುಹಿಸುತ್ತೇನೆ. ಅ.8ರಂದು ಬನ್ನೂರು ಪಟ್ಟಣದ ಫ‌ುಟ್ಬಾಲ್‌ ಮೈದಾನದಲ್ಲಿ ಬೆಂಬಲಿಗರ ಬೃಹತ್‌ ಸಮಾವೇಶವನ್ನು ನಡೆಸಿ ರಾಜಕೀಯ ಬಲವನ್ನು ಪ್ರದರ್ಶಿಸಿ ಮುಂದಿನ ನಿರ್ಧಾರವನ್ನು ತಿಳಿಸುತ್ತೇನೆ ಎಂದರು.

ಸಚಿವರಿಗಿಂತ ಕಮ್ಮಿಯಿಲ್ಲ: ಯಾವುದೇ ರಾಜಕೀಯ ಅಧಿಕಾರ ಇಲ್ಲದಿದ್ದರೂ ಸಮಾಜ ಸೇವೆಯನ್ನು ಬದುಕನ್ನಾಗಿಸಿಕೊಂಡ ನಾನು ಸರ್ಕಾರದಲ್ಲಿನ ಓರ್ವ ಸಚಿವರಿಗೆ ಇರುವಷ್ಟು ಜನಬೆಂಬಲವನ್ನು ಹಾಗೂ ಬೆಂಬಲಿಗರ ಪ್ರೀತಿವಿಶ್ವಾಸ ಮತ್ತು ಅಭಿಮಾನವನ್ನು ಜಿಲ್ಲೆ ಹಾಗೂ ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಗಳಿಸಿದ್ದೇನೆ. ಕಾಂಗ್ರೆಸ್‌ ಪಕ್ಷದಲ್ಲಿ ನಿಷ್ಠೆಯಿಂದ ಇದ್ದಂತಹ ನನಗೆ ಆಗಿರುವ ಅನ್ಯಾಯವನ್ನು ಸೆ.8ರ ಸಮಾವೇಶದಲ್ಲಿ ಎಳೆ ಎಳೆಯಾಗಿ ಜನರ ಮುಂದೆ ಬಿಚ್ಚಿಡುತ್ತೇನೆ ಎಂದು ಎಸ್‌.ಶಂಕರ್‌ ತಿಳಿಸಿದರು.

ಸಭೆಯಲ್ಲಿ ತಾಪಂ ಸದಸ್ಯ ಹೆಚ್‌.ಜವರಯ್ಯ, ತಲಕಾಡು ಗ್ರಾಪಂ ಮಾಜಿ ಅಧ್ಯಕ್ಷ ಸುಂದರ್‌ರಾಜ್‌, ಬನ್ನೂರು ಪುರಸಭೆ ಮಾಜಿ ಸದಸ್ಯ ಇರ್ಷದ್‌ ಖಾನ್‌, ಮುಖಂಡರಾದ ಪಂಚೆ ದೊಳ್ಳಯ್ಯ, ಸಿದ್ದರಾಮನಹುಂಡಿ ಕುಮಾರ, ಶಿವಯ್ಯ, ಸ್ವಾಮಿ, ಕೆಂಪಣ್ಣ, ಪುಟ್ಟಯ್ಯ, ಚಿಕ್ಕಸ್ವಾಮಿ, ಶಿವಣ್ಣ, ರಾಜಣ್ಣ, ಮಾಕನಹಳ್ಳಿ ಕುಮಾರ, ಮಾದಶೆಟ್ಟಿ, ವಾಟಾಳು ನಂಜುಂಡಯ್ಯ, ಶಿವಪ್ರಕಾಶ್‌, ಬಿ.ವಿ.ರಮೇಶ್‌, ಶಿವಣ್ಣ, ಬಸವರಾಜು, ವೆಂಕಟೇಶ್‌, ಬೆಳ್ಳಸ್ವಾಮಿ, ಕೃಷ್ಣ, ಮುತ್ತಣ್ಣ, ಲಿಂಗರಾಜು ಇತರರಿದ್ದರು.

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿಯಿಂದ ರೈಲು ಸೇವೆಯಲ್ಲಿ ವ್ಯತ್ಯಯ

Rain-12

Rain: ಎಲ್ಲೋ ಅಲರ್ಟ್‌; ವಾಯುಭಾರ ಕುಸಿತ, ಕರಾವಳಿಯಲ್ಲಿ ಮುಂದುವರಿದ ಮಳೆ

prasad-Kanchan

Udupi: ತಿರುಚಿದ ಛಾಯಾಚಿತ್ರ ಪ್ರಸಾರದ ವಿರುದ್ಧ ಕ್ರಮ: ಪ್ರಸಾದ್‌ರಾಜ್‌ ಕಾಂಚನ್‌

MGM-College

Udupi: ಪಠ್ಯಕ್ರಮದ ಮಾರ್ಪಾಡಿನಿಂದ ಶಿಕ್ಷಣ ವ್ಯವಸ್ಥೆ ಬದಲಾಗಲ್ಲ: ಕುಲಪತಿ ಡಾ.ಧರ್ಮ

DC-Office

Udupi: ಕನ್ನಡ ರಾಜ್ಯೋತ್ಸವ ಸಿದ್ಧತೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

PUTHIGE-kar

Udupi: ಅಖಿಲ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನ: ಕಾರ್ಯಾಲಯ ಉದ್ಘಾಟನೆ

Congress-Symbol

Mangaluru: ಕೇಂದ್ರದ ತೆರಿಗೆ ವಿಷಯದಲ್ಲಿ ಬಿಜೆಪಿ ಮೌನ: ಯು.ಟಿ. ಫರ್ಝಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-hunsur-1

Hunsur: ತಂಬಾಕು ಬೆಳೆಗಾರರ ರಕ್ಷಣೆಗೆ ಬದ್ದ: ಸಂಸದ ಯದುವೀರ್ ಒಡೆಯರ್

ಮುಡಾ ಅಧ್ಯಕ್ಷ ಕೆ.ಮರಿಗೌಡ ತಲೆದಂಡ?

MUDA Chairman: ಕೆ.ಮರಿಗೌಡ ತಲೆದಂಡ? ಇಂದು ಅಥವಾ ನಾಳೆ ರಾಜೀನಾಮೆ ನೀಡುವ ಸಾಧ್ಯತೆ

Mysuru: ದೀಪಾಲಂಕಾರ ವಿಸ್ತರಣೆ: ವಾಹನ ಸಂಚಾರ ನಿರ್ಬಂಧವೂ ಮುಂದುವರಿಕೆ

Mysuru: ದೀಪಾಲಂಕಾರ ವಿಸ್ತರಣೆ: ವಾಹನ ಸಂಚಾರ ನಿರ್ಬಂಧವೂ ಮುಂದುವರಿಕೆ

MUDA Case: ಸಾಕ್ಷ್ಯನಾಶ ಮಾಡಲು ಅದೇನು ಕೊಲೆ ಕೇಸಾ?: ಎಂ.ಲಕ್ಷ್ಮಣ್‌

MUDA Case: ಸಾಕ್ಷ್ಯನಾಶ ಮಾಡಲು ಅದೇನು ಕೊಲೆ ಕೇಸಾ?: ಎಂ.ಲಕ್ಷ್ಮಣ್‌

Mysuru: ಮರಳಿ ಕಾಡಿನತ್ತ ಪ್ರಯಾಣ ಬೆಳೆಸಿದ ಗಜಪಡೆ

Mysuru: ಮರಳಿ ಕಾಡಿನತ್ತ ಪ್ರಯಾಣ ಬೆಳೆಸಿದ ಗಜಪಡೆ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿಯಿಂದ ರೈಲು ಸೇವೆಯಲ್ಲಿ ವ್ಯತ್ಯಯ

Rain-12

Rain: ಎಲ್ಲೋ ಅಲರ್ಟ್‌; ವಾಯುಭಾರ ಕುಸಿತ, ಕರಾವಳಿಯಲ್ಲಿ ಮುಂದುವರಿದ ಮಳೆ

prasad-Kanchan

Udupi: ತಿರುಚಿದ ಛಾಯಾಚಿತ್ರ ಪ್ರಸಾರದ ವಿರುದ್ಧ ಕ್ರಮ: ಪ್ರಸಾದ್‌ರಾಜ್‌ ಕಾಂಚನ್‌

MGM-College

Udupi: ಪಠ್ಯಕ್ರಮದ ಮಾರ್ಪಾಡಿನಿಂದ ಶಿಕ್ಷಣ ವ್ಯವಸ್ಥೆ ಬದಲಾಗಲ್ಲ: ಕುಲಪತಿ ಡಾ.ಧರ್ಮ

DC-Office

Udupi: ಕನ್ನಡ ರಾಜ್ಯೋತ್ಸವ ಸಿದ್ಧತೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.