Siddaramaiah ಪಕ್ಷ ಬೇರೆಯಾದರೂ ಸಂಸದ ಪ್ರಸಾದ್ ಜತೆಗಿನ ಸ್ನೇಹಕ್ಕೆ ಧಕ್ಕೆ ಇರಲಿಲ್ಲ
ಮನೆಗೆ ಹೋದಾಗ ಹಿಂದಿನ ಸ್ನೇಹದಂತೆಯೇ ಮಾತನಾಡಿಸಿದ್ದರು
Team Udayavani, May 12, 2024, 12:22 AM IST
ಮೈಸೂರು: ನಮ್ಮ ಹಾಗೂ ಶ್ರೀನಿವಾಸ ಪ್ರಸಾದ್ ಅವರ ಪಕ್ಷಗಳು ಬೇರೆಯಾದರೂ ಸ್ನೇಹಕ್ಕೆ ಧಕ್ಕೆ ಇರಲಿಲ್ಲ. ರಾಜಕೀಯವಾಗಿ ದೂರ ಇದ್ದರೂ ಹಿಂದಿನಷ್ಟೇ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ನಮ್ಮ ನಡುವೆ ಪರಸ್ಪರ ಗೌರವ, ಸ್ನೇಹ ಇತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಾಗೂ ಶ್ರೀನಿವಾಸ ಪ್ರಸಾದ್ ನಡುವಿನ ಬಾಂಧವ್ಯವನ್ನು ಮೆಲುಕು ಹಾಕಿದರು.
ಡಾ| ಬಿ.ಆರ್.ಅಂಬೇಡ್ಕರ್ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್, ಸಮಾನತೆ, ಸ್ವಾಭಿಮಾನ, ಸ್ವಾವಲಂಬನೆ ಪ್ರತಿಷ್ಠಾನ ಹಾಗೂ ಸಮಾನತೆ ಪ್ರಕಾಶನದ ವತಿಯಿಂದ ಶನಿವಾರ ಆಯೋಜಿಸಿದ್ದ “ವಿ.ಶ್ರೀನಿವಾಸ ಪ್ರಸಾದ್: ಶ್ರದ್ಧಾಂಜಲಿ ಸ್ವಾಭಿಮಾನಿಗೆ ಸಾವಿರದ ನುಡಿ ನಮನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅವರ ಜತೆ ನನ್ನ ಭೇಟಿಯಾಗಿರಲಿಲ್ಲ. ಅವರು ಚುನಾವಣ ರಾಜಕೀಯದಿಂದ ನಿವೃತ್ತಿ ಹೊಂದಿದ ಮೇಲೆ, ಅವರನ್ನು ಭೇಟಿಯಾಗಿ ಬರುವಂತೆ ಮಹದೇವಪ್ಪ ಅವರಿಗೆ ಸೂಚನೆ ನೀಡಿದ್ದೆ. ಮಹದೇವಪ್ಪ ಅವರು ಪ್ರಸಾದ್ ಅವರನ್ನು ನೋಡಿಕೊಂಡು ಬಂದರು. ನಾನು ಹೋಗಿ ಭೇಟಿ ಮಾಡಬೇಕೋ-ಬೇಡವೋ ಎನ್ನುವ ಗೊಂದಲದಲ್ಲಿ ಇದ್ದಾಗ, ಮಹದೇವಪ್ಪ ಹೋಗಿ ನೋಡಿಕೊಂಡು ಬನ್ನಿ ಎಂದರು. ನಾನು ಹೋದಾಗ ಹಿಂದಿನ ಸ್ನೇಹದ ರೀತಿಯಲ್ಲೇ ಮಾತನಾಡಿಸಿದ್ದರು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.