ಕೈ ಗೆಲುವು: ಭಿಕ್ಷೆ ಬೇಡಿ ಹರಕೆ ತೀರಿಸಿದ ಮಹಿಳೆ


Team Udayavani, May 17, 2023, 4:41 PM IST

ಕೈ ಗೆಲುವು: ಭಿಕ್ಷೆ ಬೇಡಿ ಹರಕೆ ತೀರಿಸಿದ ಮಹಿಳೆ

ಹೊಸೂರು: ತಮ್ಮ ರಾಜಕೀಯ ನಾಯಕರ ಗೆಲುವಿ ಗಾಗಿ ಅಭಿಮಾನಿಗಳು ಮಾಡಿಕೊಳ್ಳುವ ಹರಿಕೆಗಳನ್ನು ನೋಡಿದಾಗ ನಿಜಕ್ಕೂ ಇಂತಹ ಹರಿಕೆಗಳನ್ನು ಮಾಡಿಕೊಳ್ಳಬಹುದೇ ಎಂಬ ಅಚ್ಚರಿ ಆಗಬಹುದು. ತನ್ನ ನಾಯಕನ ಗೆಲುವಿಗಾಗಿ ಮಾಡಿಕೊಂಡ ಹರಿಕೆ ತೀರಿಸಲು ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ಸಂತೋಷ ಅವರ ಪತ್ನಿ ಮಂಜುಳಾ ಅವರು ಮನೆ ಮನೆ ತೆರಳಿ ಭಿಕ್ಷೆ ಬೇಡಿ ದೇವರಿಗೆ ತಾವು ಮಾಡಿಕೊಂಡ ಹರಿಕೆಯನ್ನು ತೀರಿಸಿದ್ದಾರೆ.

ಇದು ಯಾರಿಗಾಗಿ ಮಾಡಿದ ಹರಿಕೆ ಎಂದರೆ ಅಭಿವೃದ್ಧಿಯ ಅನುಕಂಪದ ಜಿದ್ದಾಜಿದ್ದಿನಲ್ಲಿ ರಾಜ್ಯದಲ್ಲಿ ಹೈವೊಲ್ಟೇಜ್‌ ಕದನವಾಗಿದ್ದ ಮೈಸೂರು ಜಿಲ್ಲೆಯ ಕೆ.ಆರ್‌ .ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದರೇ ಚಿಕ್ಕಕೊಪ್ಪಲು ಮತ್ತು ಅಕ್ಕಪಕ್ಕದ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿ ಅರಕಲಗೂಡು ತಾಲೂಕಿನ ಲಕ್ಕೂರು ಮೂಡಲಕೊಪ್ಪಲು ಗ್ರಾಮದ ಶ್ರೀಮದನಂಟಿ ಅಮ್ಮ ದೇವರಿಗೆ ಪ್ರಸಾದ ಮಾಡುವುದಾಗಿ ಮಂಜುಳ ಹರಿಕೆ ಹೊತ್ತಿದ್ದರು.

ಇದೀಗ ಡಿ.ರವಿಶಂಕರ್‌ ಅವರು 1,04,502 ಮತ ಪಡೆದು 27,242 ಮತಗಳ ಅಂತರದಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಜುಳಾ ಅವರು ಗ್ರಾಮದ ಮನೆ ಮನೆಗೆ ತೆರಳಿ ಭಿಕ್ಷೆ ಬೇಡುವ ಮೂಲಕ ಅದರಿಂದ ಸಂಗ್ರಹವಾದ ಅಕ್ಕಿಯಿಂದ ಪ್ರಸಾದ ತಯಾರಿಸಿ ತಮ್ಮ ಮನೆಯ ದೇವರಿಗೆ ಪ್ರಸಾದ ಅರ್ಪಿಸಿದ್ದಾರೆ.

ಕಳೆದ ಎರಡು ಚುನಾವಣೆಯಲ್ಲಿ ಒಂದರಲ್ಲಿ ತಂದೆ ದೊಡ್ಡಸ್ವಾಮೇಗೌಡ ಬಾರಿ ಮತಗಳ ಅಂತರದಲ್ಲಿ ಸೋತಿದ್ದರೇ ಇನ್ನೊಂದು ಚುನಾವಣೆಯಲ್ಲಿ ಡಿ.ರವಿಶಂಕರ್‌ ಅವರು ಬೆರಳು ಎಣಿಕೆ ಮತದ ಎಣಿಕೆಯಲ್ಲಿ ಸೋತಿದ್ದರು. ಈ ಬಾರಿಯಾದರೂ ಗೆಲ್ಲಿಲಿ ಎಂದು ಈ ದೇವರಿಗೆ ಈ ತರದ ಹರಿಕೆಯನ್ನು ಹೊತ್ತಿದ್ದಾಗಿ ಮಂಜುಳಾ ಪತ್ರಿಕೆಗೆ ತಿಳಿಸಿದರು.

ಒಟ್ಟಿನಲ್ಲಿ ದೇವರ ಹುಂಡಿಗೆ ದುಡ್ಡು ಹಾಕುವುದು, ಮುಡಿ ಕೊಡುವುದು, ಕುರಿ ಬಲಿ ಕೊಡುವಂತಹ ಹರಿಕೆ ಮಾಡಿಕೊಂಡಿರುವ ಡಿ.ರವಿಶಂಕರ್‌ ಅಭಿಮಾನಿಗಳಲ್ಲಿ ಮಂಜುಳಾ ಅವರು ಮನೆ ಮನೆ ತೆರಳಿ 5 ದಿನಗಳ ಕಾಲ ಭಿಕ್ಷೆ ಬೇಡಿ ದೇವರ ಪ್ರಸಾದ ಅರ್ಪಣೆ ಮಾಡಿರುವುದು ರಾಜ್ಯದಲಿಯೇ ಡಿಪರೆಂಟ್‌ ಆಗಿದೆ.

-ಆನಂದ್‌ ಹೊಸೂರ್‌

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು

Mys-Udgiri-1

Mob Attack: ಉದಯಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ

24

80 ಸಾವಿರ ಲಂಚ ಸ್ವೀಕರಿಸುವಾಗ ಸಬ್‌ ಇನ್ಸ್‌ಪೆಕ್ಟರ್‌ ಲೋಕ ಬಲೆಗೆ

11

Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್‌’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.