ವೈಭವದ ಶ್ರೀಕಂಠನ ಪಂಚ ಮಹಾರಥೋತ್ಸವ
Team Udayavani, Apr 8, 2017, 12:35 PM IST
ನಂಜನಗೂಡು: ದಕ್ಷಿಣ ಕಾಶಿ ಎಂಬ ಖ್ಯಾತಿ ಪಡೆದಿರುವ ಇಲ್ಲಿನ ಆರಾಧ್ಯದೈವ ಶ್ರೀಕಂಠೇಶ್ವರ ಪಂಚ ಮಹಾರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮಗಳಿಂದ ನೆರವೇರಿತು. ಚೈತ್ರ ಮಾಸದ ಶುಕ್ರವಾರ ಬೆಳಗ್ಗೆ ಮೀನ ಲಗ್ನದಲ್ಲಿ ನಂಜುಂಡೇಶ್ವರನನ್ನು ಲಲಿತಾ ಚಂದ್ರಶೇಖರ ನಾಮಧೇಯದೊಂದಿಗೆ ರಥಾರೂಢನಾಗಿಸಿದ ಭಕ್ತರು 110 ಟನ್ ಬಾರದ 76 ಅಡಿ ಎತ್ತರದ ಭವ್ಯ ರಥವನ್ನು ಎಳೆಯುತ್ತ ರಥದಲ್ಲಿ ಪವಡಿಸಿದ ಭವರೋಗ ವೈದ್ಯನಿಗೆ ಹಣ್ಣು-ದವನ, ಧಾನ್ಯ ಎಸೆದು ಭಕ್ತಿ ಮೆರೆದರು.
ಚತುರ್ಮುಖ ಬ್ರಹ್ಮನನ್ನೇ ಸಾರಥಿಯನ್ನಾಗಿಸಿದ ರಥದ ಹಗ್ಗ ಹಿಡಿದು ಜಯಘೋಷದ ನಡುವೆ ಎಳೆದಾಗ ನಿಧಾನವಾಗಿ ಸಾಗಿದ ರಥ ಮುಂದೆ ಸಾಗಿತು. ರಾಕ್ಷಸ ಮಂಟಪ ದಾಟಿ ಚಾಮುಂಡಿಯ ದರ್ಶನಕ್ಕೆಂದು ವಾಡಿಕೆಯಂತೆ ಕೆಲ ಸಮಯ ಹಳೆ ಪೊಲೀಸ್ ಠಾಣೆಯ ಮುಂದೆ ವಿಶ್ರಮಿಸಿದ ಈ ರಥ ಮುಂದೆ ಸಾಗಿತು.
ಸ್ವಾಮಿಯವರ ರಥವನ್ನು ಹಿಂಬಾಲಿಸಿ ಬರುತ್ತಿದ್ದ ಪಾರ್ವತಿ ದೇವಿ ಪವಡಿಸಿದ ರಥ ಅದೇ ರಸ್ತೆಯಲ್ಲಿ ಪತಿಯ ರಥ ನಿಂತ ಸ್ಥಳಕ್ಕಿಂತ 100 ಅಡಿ ಹಿಂಭಾಗ ಗೋವಿಂದರಾಜ ಶೆಟ್ಟರ ಅಂಗಡಿ ಸಮೀಪ ರಸ್ತೆ ಬಲಭಾಗದಲ್ಲಿ ಹೂತು ಇದೇ ಪ್ರಥಮ ಬಾರಿಗೆ ನಿಂತು ಇತಿಹಾಸ ಸೃಷ್ಟಿಸಿತು. ನಂತರ ರಥವನ್ನು 45 ನಿಮಿಷಗಳಲ್ಲಿ ಕ್ರೇನ್ ಹಾಗೂ ಜೆಸಿಬಿ ಯಂತ್ರದ ಮೂಲಕ ಮತ್ತೆ ಮೇಲೆತ್ತಿದ ಭಕ್ತರು ರಥವನ್ನು ಸ್ವಸ್ಥಾನಕ್ಕೆ ಏರಿಸಿದರು.
ಬೆಳಗ್ಗೆ 5.30ಕ್ಕೆ ಆಗಮಿಕ ನಾಗಚಂದ್ರ ದೀಕ್ಷೀತರು ಸ್ಥಳ ಪುರೋಹಿತ ಸಪ್ತರ್ಷಿ ಜೋಯಿಸರ ನೇತೃತ್ವದಲ್ಲಿ ನಡೆದ ವೇದಘೋಷ ಹಾಗೂ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ರಥಾರೂಢನಾಗಿರುವ ಶ್ರೀಕಂಠೇಶ್ವರನ ಗೌತಮ ರಥಕ್ಕೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಷಡಕ್ಷರಸ್ವಾಮಿ, ಜಿಲ್ಲಾಧಿಕಾರಿ ರಂದೀಪ್ ಪೂಜೆ ಸಲ್ಲಿಸಿ ಇಡುಗಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ರವಿ ಚಿನ್ನಣ್ಣನವರ್, ಜಿಪಂ ಸಿಇಒ ಶಿವಶಂಕರ್ ಉಪವಿಭಾಗಾಧಿಕಾರಿ ಆನಂದ, ತಹಶೀಲ್ದಾರ್ ದಯಾನಂದ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.