Tobacco ಅನಿವಾರ್ಯವಲ್ಲ ಕಂಪನಿಗಳ ಬಣ್ಣದ ಮಾತಿಗೆ ಬೆರಗಾಗಬೇಡಿ :ಸಚಿವ ಕೆ.ವೆಂಕಟೇಶ್

ರೈತರ ಹಿತ ಕಾಯುವಲ್ಲಿ ತಂಬಾಕು ಮಂಡಳಿ ವಿಫಲ

Team Udayavani, Aug 22, 2023, 6:35 PM IST

Tobacco ಅನಿವಾರ್ಯವಲ್ಲ ಕಂಪನಿಗಳ ಬಣ್ಣದ ಮಾತಿಗೆ ಬೆರಗಾಗಬೇಡಿ :ಸಚಿವ ಕೆ.ವೆಂಕಟೇಶ್

ಪಿರಿಯಾಪಟ್ಟಣ: ರೈತರಿಗೆ ತಂಬಾಕು ಬೆಳೆ ಅನಿವಾರ್ಯವಲ್ಲ, ಹಾಗಾಗಿ ಅವರು ಪರ್ಯಾಯ ಬೆಳೆಯತ್ತ ಗಮನ ಹರಿಸುವುದು ಉತ್ತಮ ಎಂದು ರೇಷ್ಮೆ ಹಾಗೂ ಪಶುಪಾಲನಾ ಖಾತೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಪಟ್ಟಣದ ಮಹಾಲಕ್ಷ್ಮಿ ಕಲ್ಯಾಣಮಂಟಪದಲ್ಲಿ ಭಾರತೀಯ ತಂಬಾಕು ಮಂಡಳಿ ವತಿಯಿಂದ ಮಂಗಳವಾರ ಆಯೋಜಿಸಿದ್ದ 23 ಟೊಬೋಕೋ ಪಾರ್ಮರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಐಟಿಸಿ ಕಂಪನಿಯವರು ರೈತರನ್ನು ಉತ್ತೇಜನ ಕೊಡುತ್ತೇವೆ, ಆ ಸಹಕಾರ ಕೊಡುತ್ತೇವೆ, ಈ ಸಹಕಾರ ಕೊಡುತ್ತೇವೆ ಎಂದು 100 ಮಿಲಿಯನ್, 200 ಮಿಲಿಯನ್ ತಂಬಾಕು ಬೆಳೆಯಿರಿ ಎಂದು ಪುಸಲಾಯಿಸುತ್ತಿದ್ದಾರೆ ಆದರೆ ಕಂಪನಿಯವರ ಬಣ್ಣದ ಮಾತಿಗೆ ಬೆರಗಾಗಿ ಅವರ ಮಾತನನ್ನು ನಂಬಿದರೆ ನಿಮ್ಮ ತಲೆಯ ಮೇಲೆ ನೀವೇ ಚಪ್ಪಡಿ ಎಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ನಿಗಮ ಎಷ್ಟು ಸಾಧ್ಯವೋ ಅಷ್ಟನ್ನು ಮಾತ್ರ ಬೆಳೆಯಿರಿ ನೀವು ಬೆಳೆದ ಬೆಳೆಗೆ ಸಮರ್ಪಕವಾದ ಬೆಲೆ ಸಿಗಬೇಕು ಎಂದರೆ ನೀವು ಕಡಿಮೆ ತಂಬಾಕು ಬೆಳೆಯಬೇಕು, ಆಂಧ್ರದಲ್ಲಿ ಪ್ರತಿ ಕೆಜಿ ತಂಬಾಕಿಗೆ ರೂ.282 ಸರಾಸರಿ ನೀಡುತ್ತಿದ್ದಾರೆ.

ಆಂಧ್ರಕ್ಕಿಂತಲೂ ಉತ್ಕೃಷ್ಟ ತಂಬಾಕನ್ನು ನಮ್ಮ ರೈತರು ಬೆಳೆಯುತ್ತಾರೆ ಹಾಗಾಗಿ ಸಹಜವಾಗಿ ಒಳ್ಳೆಯ ಬೆಲೆಯನ್ನು ನಿರೀಕ್ಷೆ ಮಾಡುತ್ತಾರೆ ಅವರ ನೀರೀಕ್ಷೆಯ ಬೆಲೆಯನ್ನು ಪುರಸ್ಕರಿಸುವುದು ಕಂಪನಿಯ ಜವಾಬ್ದಾರಿ ಎಂದರು.

ತಂಬಾಕು ಬೆಳೆಯುವ ರೈತರ ಬದುಕು ಅಲ್ಪಮಟ್ಟದಲ್ಲಿ ಸುಧಾರಣೆಯಾಗಿರಬಹುದು ಆದರೆ ಅದಕ್ಕಾಗಿ ಅವರು ವ್ಯಯಿಸಿರುವ ಶ್ರಮ, ಇದರಿಂದ ಅವರು ಅನುಭವಿಸಿರುವ ಸಂಕಷ್ಟ ಎಷ್ಟಿದೆ ಎಂದು ಕಂಪನಿಗಳು ಯೋಚಿಸಬೇಕು ಕೇವಲ ರೈತರನ್ನು ತಂಬಾಕನ್ನು ಬೆಳೆಯಲು ಉತ್ತೇಜಿಸುವ ಬದಲಾಗಿ ರೈತರನ್ನು ಉಳಿಸಿಕೊಳ್ಳುವ ಕೆಲಸವನ್ನು ಕಂಪನಿಗಳು ಮಾಡಬೇಕು ಎಂದರು.

ಕೆ.ಆರ್.ಆಸ್ಪತ್ರೆಯಲ್ಲಿ ಐಟಿಸಿ ನೆರವಿನ ವಿಭಾಗ ಸ್ಥಾಪಿಸಿ:
ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್ ಮಾತನಾಡಿ ಐಟಿಸಿ ಕಂಪನಿ ಇಂದು ರೈತರ ನೆರವಿನಿಂದ ಇಂದು ದೊಡ್ಡ ಇಂಡಸ್ಟೀಯಾಗಿ ಬೆಳೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು, ಇಂದು ಇವರ ಆದಾಯ ರೂ. 4535 ಕೋಟಿಗೂ ಹೆಚ್ಚು. ಆದರೆ ಕಂಪನಿ ಲಾ ಪ್ರಕಾರ ಇವರು ಶೇ.2 ರಷ್ಟು ಹಣವನ್ನು ರೈತರಿಗಾಗಿ ವಿನಿಯೋಗ ಮಾಡಬೇಕು ಆದರೆ ಈ ಕೆಲಸವನ್ನು ಇವರು ಮಾಡುತ್ತಿಲ್ಲ, ಹೊಟೇಲ್ ನಲ್ಲಿ 20 ಜನ ಕೆಲಸ ಮಾಡುತ್ತಿದ್ದಾರೆ ಎಂದರೆ ಅವರ ನೆರವಿಗೆ ಕಾರ್ಮಿಕ ಇಲಾಖೆ ನೆರವಿಗೆ ಧಾವಿಸುತ್ತದೆ ಆದರೆ ರೈತ ತಂಬಾಕು ಬೆಳೆಯಲು ತನ್ನಲ್ಲಿರುವ ಎಲ್ಲಾ ಶ್ರಮವನ್ನು ವ್ಯಯಿಸಿ ಆರೋಗ್ಯ ಕೆಟ್ಟರೆ ಯಾರೂ ಬರುವುದಿಲ್ಲ ಹಾಗಾಗಿ ಹೆಚ್ಚು ತಂಬಾಕು ಬೆಳೆಯುವ ಮೈಸೂರು ಪ್ರಾಂತ್ಯಯದ ತಂಬಾಕು ಬೆಳೆಗಾರರ ಆರೋಗ್ಯ ರಕ್ಷಣೆಗಾಗಿ ಕೆ.ಆರ್.ಆಸ್ಪತ್ರೆಯಲ್ಲಿ ಐಟಿಸಿ ವತಿಯಿಂದ ನೆರವಿನ ಘಟಕ ಸ್ಥಾಪಿಸಬೇಕು ಎಂದು ಐಟಿಸಿ ಕಂಪನಿಯನ್ನು ಒತ್ತಾಯಿಸಿದರು.

ಅರಕಲಗೂಡು ಶಾಸಕ ಎ.ಮಂಜು ಮಾತನಾಡಿ ತಂಬಾಕು ಐಟಿಸಿ ಕಂಪನಿಗೆ ತಾಯಿಬೇರು ಇದ್ದಹಾಗೆ. ಆದರೆ ರೈತರಿಗೆ ಬೆಲೆ ಸಮಸ್ಯೆ ಎದುರಾದರೆ ಕಂಪನಿ ಮಾತ್ರ ರೈತರ ನೆರವಿಗೆ ಬರುವ ಬದಲು ಕೈಕಟ್ಟಿ ಕೂರುತ್ತಿರುವುದು ನೋವಿನ ಸಂಗತಿ. ಕೆಲವೊಮ್ಮೆ ಐಟಿಸಿಯವರು ಇತರೆ ಕಂಪನಿಗಳಿಗಿಂತ 2- 3 ಬೇಲ್ ಗೆ ಹೆಚ್ಚು ಹಣ ಕೊಟ್ಟು ಖರೀಧಿ ಮಾಡಿದರೂ ಅದು ಕ್ಷಣಿಕ ಬೇರೆ ಕಂಪನಿಗಳು ಖರೀದಿಸುವ ಬೇಲ್ ಗಳನ್ನು ಇವರೇ ಅವರಿಂದ ಖರೀದಿ ಮಾಡುತ್ತಾರೆ ಆಗಾಗಿ ನಮ್ಮ ರೈತರು ಖುಷಿ ಪಡುವ ಅಗತ್ಯವಿಲ್ಲ, ತಂಬಾಕು ಬೆಳೆಗಾರರಿಗೆ ಸರಾಸರಿ ಬೆಲೆ ನಿಗದಿ ಮಾಡಬೇಕು ಎಂದು ಕರ್ನಾಟಕ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿಗಳು ಚರ್ಚಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಇದರಿಂದ ಬೆಳೆಗಾರರ ಹಿತ ಕಾಪಾಡಿದ ಹಾಗಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ತಂಬಾಕು ಕೃಷಿಯಲ್ಲಿ ಸಾಧನೆಗೈದ 10 ಮಂದಿ ರೈತರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.

ಹೆಚ್.ಡಿ.ಕೋಟೆ ಶಾಸಕ ಅನೀಲ್ ಚಿಕ್ಕಮಾದು, ಕೆ.ಆರ್.ನಗರ ಶಾಸಕ ಡಿ.ರವಿಶಂಕರ್, ಭಾರತೀಯ ತಂಬಾಕು ಮಂಡಳಿ ನಿರ್ದೆಶಕ ಶರತ್ ಟಂಡನ್, ಸಿಟಿಆರ್ಐ ಮುಖ್ಯಸ್ಥ ರಾಮಕೃಷ್ಣನ್, ಮೈಸೂರು ವ್ಯವಸ್ಥಾಪಕ ನಿರ್ದೆಶಕ ಬ್ರಿಜುಭೂಷಣ್, ಡಾ.ಶ್ರೀಧರ್ ಬಾಬು, ತಂಬಾಕು ಮಂಡಳಿ ವ್ಯವಸ್ಥಾಪಕ ಕೃಷ್ಣಕುಮಾರ್, ಸೇರಿದಂತೆ ಸಾವಿರಾರು ರೈತರು ಹಾಜರಿದ್ದರು.

ಟಾಪ್ ನ್ಯೂಸ್

Rain-M

Heavy Rain: ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ಜು.6 ರಂದು ರಜೆ

1—dsdsadas

Doctors ಭೇಟಿ ಬಿಟ್ಟು ವಾಂಖೇಡೆಗೆ ಬಂದ ರೋಹಿತ್‌ ತಾಯಿ; Video Viral

TN-BSP-Armstrong

Tamil Nadu: ಬಿಎಸ್‌ಪಿ ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಹತ್ಯೆ

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

Hunasuru

Dengue: ಹುಣಸೂರು ಆಸ್ಪತ್ರೆಯಲ್ಲಿ 10 ಹಾಸಿಗೆಯ ಪ್ರತ್ಯೇಕ ವಾರ್ಡ್ ಮೀಸಲು

Kinnigoli ಬಳ್ಕುಂಜೆ ಮನೆಯಲ್ಲಿ ಚಿನ್ನಾಭರಣ ಕಳವು

Kinnigoli ಬಳ್ಕುಂಜೆ ಮನೆಯಲ್ಲಿ ಚಿನ್ನಾಭರಣ ಕಳವು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunasuru

Dengue: ಹುಣಸೂರು ಆಸ್ಪತ್ರೆಯಲ್ಲಿ 10 ಹಾಸಿಗೆಯ ಪ್ರತ್ಯೇಕ ವಾರ್ಡ್ ಮೀಸಲು

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು

Mysore; ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್ ಡಿಕೆ ಸ್ಫೋಟಕ ಹೇಳಿಕೆ

Mysore; ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್ ಡಿಕೆ ಸ್ಫೋಟಕ ಹೇಳಿಕೆ

Dengue-nagendra

Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!

Hunsur ಮೊಬೈಲ್‌ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್‌

Hunsur ಮೊಬೈಲ್‌ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್‌

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

Rain-M

Heavy Rain: ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ಜು.6 ರಂದು ರಜೆ

1—dsdsadas

Doctors ಭೇಟಿ ಬಿಟ್ಟು ವಾಂಖೇಡೆಗೆ ಬಂದ ರೋಹಿತ್‌ ತಾಯಿ; Video Viral

TN-BSP-Armstrong

Tamil Nadu: ಬಿಎಸ್‌ಪಿ ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಹತ್ಯೆ

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

Hunasuru

Dengue: ಹುಣಸೂರು ಆಸ್ಪತ್ರೆಯಲ್ಲಿ 10 ಹಾಸಿಗೆಯ ಪ್ರತ್ಯೇಕ ವಾರ್ಡ್ ಮೀಸಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.